tag:blogger.com,1999:blog-84372896493380176102024-02-08T11:00:21.381-08:00mathina maunanataraju vhttp://www.blogger.com/profile/10918535028693209943noreply@blogger.comBlogger19125tag:blogger.com,1999:blog-8437289649338017610.post-26071765695770378832011-03-05T11:40:00.000-08:002011-03-07T03:39:24.333-08:00ಆದಿಮ ಮಿಂಚುಬಹಳ ಹಳೆಯ ಕಥೆ ಅದು. ಈಗ ಹೇಳುತ್ತೇನೆ.<br />...............<br />ಅವನ ಅವ್ವೆ ಅವನಿಗೆ ಚಿಕ್ಕಂದಿನಲ್ಲಿ ಹೇಳುತ್ತಿದ್ದಳು, 'ಸುತ್ತಣ ಜನರ ಬಾಳ ಬೆಳಗ ಬೇಕು ನೀನು' ಎಂದು. ಅವನು ಅದಕ್ಕಾಗಿಯೇ ತುಡಿದ. ಚಂದಿರನಾದ. ಜ್ಞಾನವನ್ನು ಎರವಲು ತಂದು ಬೆಳಕ ಚೆಲ್ಲತೊಡಗಿದ. ಹಾಲಿನಂಥ ಬೆಳಕು ಎಂದರು ಎಲ್ಲ. ಹಾಡಿ ಹೊಗಳಿದವರೇ ಸುತ್ತಲೂ. ಆದರೆ, ಕಡೆಗೊಂದು ದಿನ ಎರವಲು ಜ್ಞಾನವೇಕೆ ನೀನೇ ಬೆಳಕಾಗು ಎಂದರು. ಅವ್ವೆಯೂ ಕೂಡಾ.<br /><span class=""></span><br />ಸರಿ, ಜ್ಞಾನದ ತಲಾಶಿನಲ್ಲಿ ಅವ ದೂರ ಹೋದ. ಜ್ಞಾನವೆಂದರೇನು ಸುಲಭದ್ದೇ! ಬಲು ದೂರ, ದೂರ, ದೂರ...<br /><br />ಕಡೆಗೆ ಚಂದಿರನಿದ್ದವನು ಬಿಂದುವಾದ. ಜ್ಞಾನ ದಕ್ಕಿತು. ಆದರೆ ಬಲುದೂರ ಹೋಗಿ ಬಿಟ್ಟಿದ್ದ. ನಕ್ಷತ್ರವಾಗಿದ್ದ. ಹಾಲಿನ ಬೆಳಕು ಈಗ ಮಿಣುಕು ಮಿಣುಕಾಗಿತ್ತು.<br /><br />ಬೆಳಕು ಮಿಣುಕು ಮಿಣುಕಾಯಿತು ಎಂದರು ಎಲ್ಲ. 'ಜ್ಞಾನ ನಿನಗೆ ಮಾತ್ರ ದಕ್ಕಿದರೆ ಸಾಕೆ? ನಮಗೂ ಹರಿಸು ಭರಪೂರ' ಇದು ಹೊಸ ಬೇಡಿಕೆ. ಅವ್ವೆಯ ಆಸೆಯೂ ಅದೇ.<br /><br />ಹತ್ತಿರ ಬಂದರೆ ಸುಟ್ಟು ಹೋದೀರಿ, ದೂರವೇ ಇದ್ದರೆ ಬರಿದೇ ಹಲಬುವಿರಿ.. ಏನು ಮಾಡುವುದು? ಎಂದು ಯೋಚಿಸಿಯೇ ಯೋಚಿಸಿದ. ಕಡೆಗೆ ಸಿಡಿದ.<br /><br />ಬೆಳಕು, ಬೆಳಕೆಂದು ಹಪಹಪಿಸುತ್ತಿದ್ದವರ ಕಂಗಳು ಆ ಅಸೀಮ ಬೆಳಕ ಕಂಡು ಕತ್ತಲಾದವು.<br /><br />ಇತ್ತ ಬೆಳಕಿನ ಪೊರೆಯ ಕಳಚಿದವನು ತನ್ನೊಳಗೇ ಕುಸಿದ. ಘನವಾದ. ಘನವೆಂದರೆ ಘನ. ಎಷ್ಟೆಂದರೆ ಅಂತರಂಗದ ಬೆಳಕು ಎಂದೂ ಸೋರದಷ್ಟು.<br /><br />ಕೆಲ ಕಣ್ಣಿದ್ದವರು ಹೇಳಿದರು, 'ಬೆಳಕನ್ನು ಅಂಧಕಾರ ತಿಂದಿತು'. ಒಳಗಣ್ಣಿದ್ದವರು ಹೇಳಿದರು, 'ಅಂಧಕಾರದೊಳಗಿದೆ ಬೆಳಕು'.<br />...............<br /><br />ಇದೆಲ್ಲವನ್ನೂ ಮೊದಲಿಂದ ತುದಿಯವರೆಗೆ ನೋಡಿದ ಅಲ್ಲಮ ನಕ್ಕ.<br /><br />ಅತ್ತ ಮೇಲೆ ಶಿವಶಕ್ತಿಯರು ಒಬ್ಬರೊಳಗೊಬ್ಬರು ಮೈಚಾಚಿದ್ದರು. ಆದಿಮ ಬಿಂದುವಾಗಿದ್ದರು. ಆ ಪರಮಪವಿತ್ರ ಕ್ಷಣಗಳನ್ನು ಕಣ್ತುಂಬಿಕೊಂಡ ಅಲ್ಲಮ ಮೆಲ್ಲನೆ ಉಸುರಿಕೊಂಡ, 'ನನಗೆ ಜ್ಞಾನ, ಅಂಧಕಾರ ಎರಡೂ ಒಂದೇ...'.<br /><br />ಶಿವಶಕ್ತಿಯರ ಸಮರಸದಲ್ಲಿ ಮೂಡಿದ ಆದಿಮ ಮಿಂಚು ಅದು.nataraju vhttp://www.blogger.com/profile/10918535028693209943noreply@blogger.com0tag:blogger.com,1999:blog-8437289649338017610.post-71639258646840975022011-03-05T11:21:00.000-08:002011-03-08T11:26:13.860-08:00ಎರಡು ಕವನ1<br /><br />ಅದೊಂದು ದಿನ ಆಗಸದಲ್ಲಿ ನಕ್ಷತ್ರವೊಂದು ಮೂಡಲಿಲ್ಲ ;<br />ಮೂಡಲಿಲ್ಲ ಎಂದರೆ<br />ಮತ್ತೆಂದೂ ಮೂಡಲೇ ಇಲ್ಲ<br /><br />ಆದರೆ ಯಾರ ಗಮನಕ್ಕೂ ಅದು ಬಾರಲಿಲ್ಲ<br />ಚಂದಿರನಿಗೂ...<br /><br />ನಕ್ಷತ್ರಗಳೂ ಬೇವರ್ಸಿ ಸಾವು ಸಾಯುತ್ತವೆ<br />ಮನುಷ್ಯರೇನು...<br /><br /><br /><br />2<br /><br />ಅವನೊಬ್ಬ ಬರಹಗಾರ<br />ಹೊಸ ಚಪ್ಪಲಿಯ ಒಮ್ಮೆ ಕೊಂಡು ತಂದ<br /><br />ಚಪ್ಪಲಿ ಕಾಲು ಕಚ್ಚುವುದ ನಿಲ್ಲಿಸಿರಲಿಲ್ಲ<br />ಆಗಲೇ ಬ್ಲಾಗಿನಲ್ಲಿ ಅದರ ಕುರಿತು ಬರಹವೊಂದ ಹೆತ್ತಿದ್ದ<br /><br />ಚಪ್ಪಲಿಗೋ ಗಲಿಬಿಲಿ<br /><br />ಇವನ ಪಾದಕ್ಕೇ ನಾನು ಇನ್ನೂ ಒಗ್ಗಿಲ್ಲ<br />ಆಗಲೇ ಅಕ್ಷರದ ಮಾರುಕಟ್ಟೆಯಲ್ಲಿ ತಂದು....<br /><br />ಅವನೊಬ್ಬ ಬರಹಗಾರ!!nataraju vhttp://www.blogger.com/profile/10918535028693209943noreply@blogger.com0tag:blogger.com,1999:blog-8437289649338017610.post-8043035947018038232011-02-23T11:24:00.000-08:002011-03-08T11:53:25.606-08:00ಆ ಮರಆ ಮನೆಯಂಗಳದಲ್ಲಿ ಒಂದು ಮರವಿತ್ತು. ಅದು ಹಣ್ಣು ಬಿಡುತ್ತಿತ್ತಾದರೂ ಅದರ ಹಣ್ಣನ್ನು ಪಕ್ಷಿಗಳಷ್ಟೇ ತಿನ್ನುತ್ತಿದ್ದವು. ಮನುಷ್ಯರು ಬಾಯಿ ಚಪ್ಪರಿಸುವ ಮಾವು, ಹಲಸನ್ನಾಗಲಿ, ದಿನನಿತ್ಯದ ಬಳಕೆಯ ತೆಂಗಿನಕಾಯನ್ನಾಗಲಿ ನೀಡುವ ಭಾಗ್ಯ ಅದರದಾಗಿರಲಿಲ್ಲ. ಅದು ನೆರಳನ್ನು ನೀಡುತ್ತಿತ್ತಾದರೂ ಅದರ ನೆರಳಿನಡಿ ಹೋಗಿ ನಿಂತವರನ್ನು ಯಾರೂ ಕಂಡಿರಲಿಲ್ಲ. ಹೀಗಿರುವಾಗ ಅದಕ್ಕೊಂದು ಹೆಸರು ಇದ್ದೀತು ಎನ್ನುವ ಬಗ್ಗೆ ಯಾರಾದರೂ, ಯಾವತ್ತಾದರೂ ಯಾಕೆ ಯೋಚಿಸುತ್ತಾರೆ ಹೇಳಿ? ಯಾವುದೋ ಹಕ್ಕಿ ಹೀಗೆ ಹಾರುತ್ತಾ, ಅರೆಬರೆ ಕುಕ್ಕಿ ತಿಂದಿದ್ದ ಕಾಯಿಯೊಂದನ್ನು ಬಾಯಲ್ಲಿಡುದು ಹೋಗುವಾಗ ಹಿಕ್ಕೆ ಹಾಕುವ ಒತ್ತಡದಲ್ಲಿ ಬಾಯಲ್ಲಿನ ಬೀಜವನ್ನೂ ಉದುರಿಸಿ ಹೋಗಿತ್ತು. ಮೊದಲು ಹಿಕ್ಕೆ ಬಿತ್ತೋ, ಬೀಜ ಬಿತ್ತೋ ಅಥವಾ ಬೀಜ ಹಿಕ್ಕೆ ಒಟ್ಟಿಗೇ ಬಿದ್ದವೋ ಎನ್ನುವಂಥ ಬೀಜವೃಕ್ಷ ನ್ಯಾಯ ಅಥವಾ ಜಿಜ್ಞಾಸೆಯಲ್ಲಿ ತೊಡಗಲು ಅಲ್ಲಾರಿಗೂ ಪುರಸೊತ್ತು ಇರಲಿಲ್ಲ. ಒಂದು ವೇಳೆ ಇದ್ದರೂ ಅಂಥ ಜಿಜ್ಞಾಸೆಗೆ ಕಾರಣವಾಗುವ ಘನತೆ ಆ ಬೀಜಕ್ಕೆ ಇಲ್ಲ ಎಂದು ತಳ್ಳಿ ಹಾಕಿ ಬಿಡುತ್ತಿದ್ದರೇನೋ...<br />ಇರಲಿ, ವಿಷಯ ಇಷ್ಟೇ, ಪ್ರಪಂಚವೆಲ್ಲಾ ಸದ್ದಿನಲ್ಲಿ-ಸುದ್ದಿಯಲ್ಲಿ ಮುಳುಗಿದ್ದಾಗ ಅದ್ಯಾವುದೋ ಒಂದು ದಿನ ಈ ಬೀಜ ಆ ಮನೆಯ ಆವರಣದಲ್ಲಿ ಬಿತ್ತು. ಅದರ ಜೈವಿಕ ಪುಣ್ಯ ಮಳೆ, ಇಳೆ ಎರಡೂ ಅನುಕೂಲವಾಗಿದ್ದರಿಂದ ಅದರೊಳಗಿದ್ದ ದ್ರವ್ಯ ಹೊರನುಗ್ಗಿ ಮೊಳಕೆಯೂ ಮೂಡಿತು. ದಿನಗಳೆರಡು ಉರುಳಿತ್ತು, ಎರಡು ಪುಟಾಣಿ ಎಲೆ ಹೊತ್ತು ಹಸಿ ಹಸಿ ಸಸಿಯೊಂದು ತಲೆ ಎತ್ತಿ ನಿಂತಿತ್ತು. ಆದರೆ ಅದ್ಯಾವುದನ್ನೂ ಗಮನಿಸುವಷ್ಟು ಪುರುಸೊತ್ತು ಆ ಮನೆಯವರಾರಿಗೂ ಇರಲಿಲ್ಲ. ಗಡಿಬಿಡಿ, ಪಿಟಿಪಿಟಿ ಮಾಡಿಕೊಂಡು ಬಲೇ ಧಾವಂತದಲ್ಲಿ ಬದುಕುತ್ತಿದ್ದ ಅಲ್ಲಿನ ಜನಕ್ಕೆ ಗಿಡ ಸೊಂಟದೆತ್ತರ ಬೆಳೆದಾಗ ಕಣ್ಣಿಗೆ ಬಿದ್ದಿತ್ತು. ಕಾಂಪೌಂಡು ವಿಶಾಲ ಇದ್ದರಿಂದಲೋ ಅಥವಾ ಎಂದೂ ಮುಗಿಯದ ಧಾವಂತದಲ್ಲಿ ಅವರೆಲ್ಲಾ ತಮ್ಮ ಬದುಕನ್ನು ಸಿಕ್ಕಿಸಿಕೊಂಡಿದ್ದರಿಂದಲೋ ಅಂತೂ ಆ ಗಿಡ ಉಳಿದು ಬಿಟ್ಟಿತು. ಮೂರ್ನಾಲ್ಕು ವರ್ಷಕ್ಕೆ ಎಂಟ್ಹತ್ತು ಅಡಿ ಮೀರಿ ತನ್ನ ಇರುವಿಕೆಯನ್ನು ರಸ್ತೆ ಬದಿಯಲ್ಲಿ ಸಾಗುವವರಿಗೆಲ್ಲಾ ಸಾರತೊಡಗಿತು. ಸಣ್ಣ ಸಣ್ಣ ಹೂ ಬಿಡುತ್ತಾ, ಕಾಯಿ ಕಟ್ಟುತ್ತಾ ಜೀವ ಬದುಕಿನ ಅನನ್ಯತೆಗೆ ಅಚ್ಚರಿಯಿಂದ ಹಿತವಾಗಿ ತೆರೆದುಕೊಂಡಿತು.<br />...........<br /><br />ಹೀಗಿರುವಾಗ ಆ ಮನೆಯಲ್ಲಿ ಕೂಸೊಂದು ಹುಟ್ಟಿತು. ಅಳು, ಲಾಲಿ, ಪುಟ್ಟ ಗಂಟಲಿನಿಂದ ಉಬ್ಬುವ ಚಿತ್ರ, ವಿಚಿತ್ರ ಸದ್ದುಗಳು, ಜೋಗುಳ ಇವೆಲ್ಲವನ್ನು ಮರ ಕೇಳಿಸಿಕೊಳ್ಳತೊಡಗಿತು. ಸಪ್ಪೆ ಆಹಾರ ತಿನ್ನುವ ಆ ಪುಟಾಣಿ ಕಂದಮ್ಮನ ಹಸಿ ಮೈಯ ವಾಸನೆ, ಸ್ನಾನದ ನಂತರ ಆ ಕಂದಮ್ಮನ ತಲೆಗೆ ನೀಡುವ ಸಾಮ್ರಾಣಿ ಹೊಗೆ, ಜೋಕಾಲಿಯ ಜೀಕು, ಮಗುವಿರುವ ಮನೆಯಲ್ಲಿನ ಗಡಿಬಿಡಿ ಇವೆಲ್ಲ ಆಗಷ್ಟೇ ಮರವಾಗಿದ್ದ ಆ ಗಿಡದಲ್ಲಿ (ಹಾಗೆನ್ನಬಹುದೇ!) ವಿಚಿತ್ರ ಕುತೂಹಲ ಹುಟ್ಟಿಸಿತ್ತು. <br />ಅದೊಂದು ದಿನ ಮನೆಯಾಚೆಗೆ ಕೂಸನ್ನು ತಂದಾಗ ಮರದಲ್ಲೂ ಎಂಥದೋ ಪುಳಕ! ದಿನ ಕಳೆದಂತೆ ಆ ಹೆಣ್ಣು ಕೂಸು ಮತ್ತೊಬ್ಬರ ಆಸರೆಯಿಂದ ನಿಂತು ಗೆಜ್ಜೆ ಕಟ್ಟಿದ ಪುಟ್ಟ, ಪುಟ್ಟ ಕಾಲನ್ನು ನೆಲಕ್ಕೆ ಕುಟ್ಟುತ್ತಾ ಥೈ ಥೈ ಎನ್ನಿಸುವುದೂ ನಡೆದಿತ್ತು. ಮತ್ತಷ್ಟು ದಿನ ಮೂಡಿದಂತೆ ಅತ್ತಿತ್ತ ದೇಕುವುದೂ ಸಾವಕಾಶವಾಯಿತು. ಆಮೇಲೊಂದು ದಿನ ಅಂಬೆಗಾಲು ಹಾಕುವುದನ್ನು ಕಲಿತು ಕಡೆಗೊಮ್ಮೆ ತಾನೇ ಹೊಸಲು ದಾಟಿತು. ಆ ಮೂಲಕ ಎಲ್ಲರ ಬಾಯಿಯಲ್ಲೂ ಸಕ್ಕರೆ ಕರಗಿತು. <br />ಮಗುವಿನ ಈ ಎಲ್ಲ ಪುಟಿಪುಟಿಯುವ ಚಟುವಟಿಕೆ ನೋಡುವುದು ಮರದ ಪಾಲಿಗಂತೂ ಹಬ್ಬವೇ ಆಗಿ ಹೋಯಿತು. ಆದರೆ ಅದೇಕೋ, ಪ್ರಜ್ಞಾಪೂರ್ವಕವಾಗಿಯೋ, ಅಪ್ರಜ್ಞಾಪೂರ್ವಕವಾಗಿಯೋ ಅಂತೂ ಆ ಮಗು ಒಂದು ದಿನಕ್ಕೂ ಆ ಮರದತ್ತ ಸುಳಿಯಲೇ ಇಲ್ಲ. ಇತ್ತ ತಾನು ಒಂದಿಂಚೂ ಕದಲುವುದು ಸಾಧ್ಯವೇ ಇಲ್ಲ ಎನ್ನುವುದು ಗೊತ್ತಿದ್ದರೂ ಪ್ರಜ್ಞಾಪೂರ್ವಕವಾಗಿಯೋ, ಅಪ್ರಜ್ಞಾಪೂರ್ವಕವಾಗಿಯೋ ಆ ಮರ ಆ ಪುಟ್ಟ ಕಂದಮ್ಮನೆಡೆಗೆ ತುಡಿಯುವುದ ಬಿಡಲಿಲ್ಲ...<br />.............<br /><br />ಅಂತೂ ಮರ ಈಗ ಭರ್ಜರಿಯಾಗಿ ಹಬ್ಬಿ ನಿಂತಿತ್ತು. ತನಗೆ ಜಾಗ ನೀಡಿದ ಆ ಮನೆಗೆ ಒಂದಿಷ್ಟೂ ತೊಂದರೆಯಾಗದಂತೆ ರಸ್ತೆಯ ಕಡೆಗೆ ಬಲಿಷ್ಠ ರೆಂಬೆಗಳನ್ನು ಹಬ್ಬಿಸಿ, ಮನೆಯ ಆಯದ ಬಗ್ಗೆ ಜಾಗ್ರತೆವಹಿಸಿ ಬೆಳೆದುಕೊಂಡಿತ್ತು. ತನ್ನ ಕದಲದ ದೇಹವನ್ನಲ್ಲದೆ ಅದರೊಳಗೆ ಅದೆಂಥದೋ ತೀವ್ರ ಭಾವನೆಯನ್ನೂ ಹಬ್ಬಿಸಿಕೊಂಡಿತ್ತು. ಆಕಾಶದಗಲಕ್ಕೂ ಹಾಸುವಂಥ ಭಾವನೆ ಅದು. ಹೌದು, ಆ ಮರ ಆ ಮನೆಯಲ್ಲಿ ಜೀವವುಕ್ಕಿಸಿದ ಆ ಪುಟ್ಟ ಕಂದಮ್ಮನನ್ನು ಎಳೆವೆಯಿಂದಲೇ ಹಚ್ಚಿಕೊಂಡು ಬಿಟ್ಟಿತ್ತು. ಮನುಷ್ಯ ಭಾಷೆಯಲ್ಲಿ ಅದನ್ನು ಪ್ರೇಮವೆನ್ನಬಹುದೇನೋ ಆದರೆ ಮರದ ಭಾಷೆಯಲ್ಲಿ ಏನೆನ್ನಬಹುದು? ಗೊತ್ತಿಲ್ಲ...<br /><br />ಇಂಥ ಮರ ತಾನು ಹೂಬಿಟ್ಟು ನಿಂತಾಗ ಆ ಹುಡುಗಿ ಏನಾದರೂ ಹೊರ ಬಂದರೆ ಸಾಧ್ಯವಾದಷ್ಟೂ ಹೆಚ್ಚು ಹೂವುಗಳ ಉದುರಿಸುತ್ತಿತ್ತು. ಗಾಳಿ ತೀಡಿದಾಗ ತನ್ನೊಡಲಿನ ಕಂಪನ್ನೆಲ್ಲಾ ಆಕೆಯ ರೂಮಿನತ್ತ ಹರಡುವಂತೆ ತೂರುತ್ತಿತ್ತು. ಆದರೆ ಆ ಹುಡುಗಿಗೆ ಮಾತ್ರ ಇದ್ಯಾವುದರ ಪರಿವೆಯೂ ಇರಲಿಲ್ಲ. ಮೂರುವರೆ ವರ್ಷದಿಂದಲೇ ಅದರ ಧಾವಂತದ ದಿನಚರಿ ಶುರುವಾಗಿ ಹೋಯಿತು. ವಿಶಾಲ ಕಾಂಪೌಂಡಿನಲ್ಲಿ ಹಿಂದಕ್ಕೆ ಆತುಕೊಂಡಂತೆ ಇದ್ದ ಆ ಮರವನ್ನು ಆಕೆ ಒಮ್ಮೆಯಾದರೂ ದಿಟ್ಟಿಸಿದ್ದಳೋ ಗೊತ್ತಿಲ್ಲ. ಚಿಕ್ಕಂದಿನಲ್ಲಿ ತನ್ನ ಮನೆಯ ಚಿತ್ರ ಬರೆದಿದ್ದಾಗ ಅದರಲ್ಲಿ ಆ ದೊಡ್ಡ ಮರವನ್ನೆನಾದರೂ ಕಾಣಿಸಿದ್ದಳೇ! ಬಹುಶಃ ಇರಲಿಕ್ಕಿಲ್ಲ. ಇನ್ನು ಹದಿಹರೆಯ, ಕಾಲೇಜು, ಡಿಗ್ರಿ, ಕೆಲಸ ಎಂದೆಲ್ಲಾ ಭರಪೂರ ಯೌವ್ವನದಲ್ಲಿ ಜೀಕುವಾಗ ಆ ಮರದ ಇರುವಿಕೆಯ ಬಗ್ಗೆಯೇನಾದರೂ ಆಕೆಗೆ ಅಕ್ಕರೆ ಮೂಡಿತ್ತೇ? ಅದೂ ಗೊತ್ತಿಲ್ಲ...<br /><br />ಅದೊಂದು ಬಾರಿ ಯಾವಾಗಲೋ ಮೊಬೈಲು ಹಿಡಿದು ಹಾಗೇ ಕಾಂಪೌಡಿನಲ್ಲಿ ಸುತ್ತುತ್ತಾ ಮಾತನಾಡುವಾಗ ಆ ಮರವಿದ್ದೆಡೆಗೆ ಹೆಜ್ಜೆ ಹಾಕುತ್ತಾ ಏಳೆಂಟು ಅಡಿ ಹತ್ತಿರದವರೆಗೂ ಹೋಗಿದ್ದಳು. ಅಷ್ಟೇ. <br />ಬಂಗಲೆ ಅಲ್ಲವಾದರೂ ಬಂಗಲೆಯಂಥ ಮನೆ ಅದಾಗಿದ್ದ ಕಾರಣ ಆಕೆ ಮನೆಯಲ್ಲಿ ಇರುವ ಹೊತ್ತಲ್ಲಿ ಹೊರಗೆ ಬರುತ್ತಿದ್ದುದೇ ಕಡಿಮೆ. ಬಂದರೂ ಕಾಂಪೌಂಡಿನ ಮಧ್ಯದಲ್ಲಿದ್ದ ಲಾನ್ ದಾಟಿ ಕೈತೋಟದ ಕಡೆಗೆ ಸಾಗುತ್ತಿದ್ದುದು ಬಹಳ ಕಡಿಮೆ. ಹಾಗೊಮ್ಮೆ ಕೈದೋಟಕ್ಕೆ ಹೆಜ್ಜೆ ಇಟ್ಟರೂ ಹಿಂದಿನ ಸಾಲಿನವರೆಗೆ ಹೋಗಿದ್ದೇ ಇಲ್ಲ. ಅವಳಿಗೆ ಅದೇಕೋ, ಆ ಮರ, ಗಿಡ, ಲಾನ್ ಎಲ್ಲವೂ ಆ ಮನೆಯ ಗೋಡೆಯಷ್ಟೇ ಜೀವಂತ!<br />.............<br /><br />ಹೀಗಿರುವಾಗ ಆ ಮರ ಮೈಯೆಲ್ಲಾ ಕಿವಿಯಾಗಿಸಿಕೊಂಡು ಹಗಲು ಇರುಳು ಮನೆಯ ಗೋಡೆಗಳಿಂದ ಹೊಮ್ಮುವ ತರಂಗಗಳ ಸೋಸುತ್ತಿತ್ತು. ಎಂದಾದರೂ ಆ ಹುಡುಗಿ ತನ್ನ ಬಗ್ಗೆ ಒಂದಾದರೂ ಮಾತು ಆಡಬಹುದೇನೋ ಎಂದು ಎಲೆಗಳ ಅರಳಿಸಿ ಕೇಳುತ್ತಿತ್ತು. ಆದರೆ ಅಂತಹ ಒಂದು ಶಬ್ಧವೂ ಅದರ ಕಿವಿಗೆ ಬೀಳಲಿಲ್ಲ. ಮರದ ಪಾಡಿಗೆ ಮರ ಆ ಹುಡುಗಿಯನ್ನು ಪ್ರೇಮಿಸುತ್ತಿತ್ತು. ಅತ್ತ ಆ ಹುಡುಗಿ ತನ್ನ ಪಾಡಿಗೆ ತಾನು ಬದುಕ ಸಂಭ್ರಮಿಸಿದ್ದಳು. ವಯೋಸಹಜವಾಗಿ ಆಕೆಯೂ ಪ್ರೀತಿ, ಪ್ರೇಮದಲ್ಲಿ ತುಯ್ಯುತ್ತಾ, ಗೆಳೆಯ, ಗೆಳತಿಯರ ಗುಂಪಿನಲ್ಲಿ ಹಿಗ್ಗುತ್ತಾ ಸಾಗಿದ್ದಳು. ಅವಳ ಬಾಳಿನ ಯಾವ ಪುಟದಲ್ಲೂ "ಆ ಮರದ' ಪ್ರಸ್ತಾಪವೇ ಇರಲಿಲ್ಲ.<br />.............<br /><br />ಮುಂದೊಂದು ದಿನ ಹುಡುಗಿಯ ಬಾಳಲ್ಲಿ ಹುಡುಗ ಬಂದ. ಮನೆಯವರೆಲ್ಲಾ ಸೇರಿ ಅವರಿಗೆ ಮದುವೆ ಮಾಡಿದರು. ಮದುವೆ ಮಾಡುವ ವೇಳೆ ಶಾಮಿಯಾನ ಹಾಕಲು ಹಗ್ಗ ಕಟ್ಟುವ ಸಲುವಾಗಿ ಬಲಿಷ್ಠವಾಗಿದ್ದ ಆ ಮರದ ಕಾಂಡಕ್ಕೆ ಬರೋಬ್ಬರಿ ಏಳಿಂಚಿನ ಮೊಳೆಯನ್ನೂ ಹೊಡೆದರು. ಮೈಯೆಲ್ಲಾ ಸಿಗಿದು ಹಾಕುವಂಥ ನೋವಾದರೂ ಮರ ಮಾತ್ರ ಶಾಮಿಯಾನ ಒಂದಿನಿತೂ ಅಲುಗಾಡದಂತೆ ಬಿಗಿಪಟ್ಟಿನಲ್ಲಿ ಮೊಳೆಯನ್ನು ಹಿಡಿದುಕೊಂಡಿತ್ತು. ಮದುವೆ ಮುಗಿದು ಶಾಮಿಯಾನ ಕಳಚಿದರು. ಯಾವುದಾದರೂ ಸಭೆ, ಸಮಾರಂಭ ಇದ್ದೇ ಇರುತ್ತದೆ, ಆಗೆಲ್ಲಾ ಶಾಮಿಯಾನ ಹಾಕಲೇ ಬೇಕಾಗುತ್ತದೆ ಎನ್ನುವ ಕಾರಣದಿಂದ ಮೊಳೆಯನ್ನು ಮರದಲ್ಲೇ ಬಿಟ್ಟರು. ಮರವಾದರೂ ಅಷ್ಟೇ ಆ ಮೊಳೆಯನ್ನು ಅಷ್ಟೇ ಜತನದಿಂದ ಬಿಗಿಯಾಗಿ ಹಿಡಿದುಕೊಂಡಿತು.<br />.............<br /><br />ಮದುವೆ ನಂತರ ಹುಡುಗಿ ಅಷ್ಟಾಗಿ ಆ ಮನೆಯಲ್ಲಿ ಕಾಣುತ್ತಿರಲಿಲ್ಲ. ಆಗೊಮ್ಮೆ, ಈಗೊಮ್ಮೆ ಬರುತ್ತಿದ್ದಳು. ಹಾಗೆ ಬಂದಾಗಲೂ ಎನೋ ಧಾವಂತ, ಗಡಿಬಿಡಿ. ರಸ್ತೆ, ಗೇಟು, ಮನೆ ಇದಿಷ್ಟೇ ಆಕೆ ಹೋಗಿಬರುವ ಹಾದಿ. ಆರು ತಿಂಗಳಿಗೋ, ವರ್ಷಕ್ಕೋ ಏನಾದರೂ ವಿಶೇಷ ಇದ್ದಾಗ ಬಂದು ಹೋಗುತ್ತಿದ್ದಳು. ಹಾಗೆ ಬಂದಾಗ ಕೆಲ ಬಾರಿ ಲಾನ್ನತ್ತ ಸುಳಿಯುತ್ತಿದ್ದಳು. ಅಷ್ಟೇ. ಅದರಾಚೆಗೆ ಅವಳ ಒಂದು ಹೆಜ್ಜೆಯೂ ಮೂಡಲಿಲ್ಲ.<br />.............<br /><br />ತನ್ನದೇ ಓಘದಲ್ಲಿ ಬದುಕ ಹೀರುತ್ತಾ, ಸಮಾಗಮದ ಸುಖದಿ ಹದವಾಗಿ ಈಸುತ್ತಾ, ಬಿಸಿಯುಕ್ಕುವ ತೋಳಿನಲಿ ತೊನೆಯುತ್ತಾ, ಕಡೆಗೊಮ್ಮೆ ಸ್ವರ್ಗದಲ್ಲಿ ತೇಲುವಾಗ ತನ್ನೊಳಗೆ ಜೀವವೊಂದನ್ನೂ ಅಂಕುರಿಸಿಕೊಂಡಳು ಹುಡುಗಿ. ತವರಿಗೆ ಬಂದು, ಮುದ್ದಾದ ಮಗುವನ್ನು ಪ್ರಪಂಚಕ್ಕೆ ಕರೆದು ಮತ್ತೊಂದು ದಿನ ಮಗುವಿನೊಂದಿಗೆ ಹೊರಟೂ ಬಿಟ್ಟಳು.<br />............<br /><br />ಅದೊಂದು ದಿನ ದೂರದ ಮನೆಯ ಟೆರೇಸಿನಲ್ಲಿ, ಮಿನುಗುವ ರಾತ್ರಿ ಹೊತ್ತಲ್ಲಿ, ಯಾರೋ ಇಬ್ಬರು ಗೆಳೆಯರು ಕೂತು ಗುಂಡು ಹಾಕುತ್ತಿದ್ದರು. ಅವರ ಮಾತುಗಳು ಗಾಳಿಯಲ್ಲಿ ಕರಗಿ ಹಾಗೇ ಹರಿದು ಬರುತ್ತಿದ್ದವು. ಒಬ್ಬ ಹೇಳುತ್ತಿದ್ದ, ನನ್ನದು ನಿಸ್ವಾರ್ಥ ಪ್ರೀತಿ. ಅವಳು ನನ್ನನ್ನು ಪ್ರೀತಿಸುತ್ತಾಳೋ, ಇಲ್ಲವೋ ಗೊತ್ತಿಲ್ಲ ಆದರೆ ನಾನು ಮಾತ್ರ ಯಾವುದೇ ನಿರೀಕ್ಷೆ ಇಲ್ಲದೆ ಅವಳನ್ನು ಪ್ರೀತಿಸುತ್ತೇನೆ ಎಂದು. ಇದನ್ನು ಕೇಳಿಸಿಕೊಂಡ ಮರ ಅದೇ ಮೊದಲ ಬಾರಿಗೆ ಹಾಗೂ ಕಡೆಯ ಬಾರಿಗೆ ಯೋಚಿಸತೊಡಗಿತು. ಒಂದು ವೇಳೆ ಪ್ರೀತಿ ಎನ್ನುವುದು ಮನದ ಒಳಗೆ ಮಧುರ ಭಾವನೆ ಹುಟ್ಟಿಸದೆ ಕೋಪವನ್ನೋ, ದ್ವೇಷವನ್ನೋ ಹುಟ್ಟಿಸುವಂತಿದ್ದರೆ ಆಗ ಯಾರಾದರೂ ಪ್ರೀತಿಸುತ್ತಿದ್ದರೇ? ಮಧುರ ಭಾವನೆ ಮೂಡದೆ ಪ್ರೀತಿ ಹುಟ್ಟಬಲ್ಲದೇ? ಪ್ರೀತಿಯಲ್ಲಿ ತಿರಸ್ಕಾರದ ಅಸಹನೀಯ ನೋವು ಉಂಡಾಗಲೂ ಆ ನೋವಿನ ಮೇಲೆ 'ಅದು ನನ್ನದೇ ನೋವು' ಎನ್ನುವ ಅತೀವ ಭಾವ ಇರುವುದಿಲ್ಲವೇ? ಇಷ್ಟೆಲ್ಲಾ ಇದ್ದಮೇಲೆ ಅಲ್ಲಿ ಸ್ವಾರ್ಥ ಇದೆ ಎಂದಾಯಿತಲ್ಲವೇ? ಎಂದುಕೊಂಡಿತು.<br />ಸ್ವಾರ್ಥ ಎನ್ನುವುದು ಈ ಮನುಷ್ಯರು ತಿಳಿದುಕೊಂಡಿರುವಂತೆ ನಿಜಕ್ಕೂ ಅಷ್ಟು ಕೆಟ್ಟ, ಕಟು ಪದ ಅಲ್ಲವೇನೋ ಎಂದುಕೊಂಡು ನಿಟ್ಟುಸಿರು ಬಿಟ್ಟಿತು.<br />............<br /><br />ಅದೊಮ್ಮೆ ಆ ಮನೆಯ ಯಜಮಾನ ಯಾರೋ ನಾಲ್ಕಾರು ಮಂದಿಯನ್ನು ಕರೆದು ಏನೋ ಮಾತನಾಡಿ ಕಳುಹಿಸಿದ. ಮಾರನೆಯ ದಿನ ಗರಗಸ ಹೊತ್ತು ತಂದ ಅವರು ಆ ಮರದ ಬುಡಕ್ಕೆ ಅಲಗು ತಾಕಿಸಿ ಲಯಬದ್ಧವಾಗಿ 'ಸರ್ ಬರ್' ಎಂದು ಕೊಯ್ಯ ತೊಡಗಿದರು. ಇಬ್ಬನಿ ಹೊದ್ದು ಹಸಿ ಮೈಯಲ್ಲಿ ಇದ್ದ ಮರ ಒಮ್ಮೆಲೇ ತಡಬಡಾಯಿಸಿತು. ಇನ್ನೇನು ಒಂದೆರಡು ಗಂಟೆಗಳಲ್ಲಿ ತನ್ನನ್ನು ಕತ್ತರಿಸಿ ಬಿಸಾಕುತ್ತಾರೆ ಎನ್ನುವುದು ಖಾತ್ರಿಯಾಗುವ ಹೊತ್ತಿಗೆ ಕಾಂಡದ ಕಾಲುಭಾಗ ಸಡಿಲವಾಗಿತ್ತು. ಅಸಹನೀಯ ನೋವು ಪ್ರತಿಜೀವಕೋಶದಲ್ಲೂ ಹಬ್ಬಿತ್ತು. ಅದರ ನಡುವೆಯೂ ತಾನು ಪ್ರೀತಿಸಿದ ಹುಡುಗಿ ಮುಂದಿನ ಬಾರಿ ಬಂದಾಗ ನಾನು ಇಲ್ಲದೆ ಇರುವುದನ್ನು ಗುರುತಿಸಬಹುದೇ? ಆ ಬಗ್ಗೆ ಮನೆಯವರನ್ನು ಕೇಳಬಹುದೇ? ಎನ್ನುವ ಪ್ರಶ್ನೆಗಳು ಸುಳಿದವು. ಜೀವನದಲ್ಲಿ ತನ್ನ ಬಗ್ಗೆ ಅರೆಕ್ಷಣವೂ ಯೋಚಿಸಿರದ, ಒಂದಕ್ಷರವೂ ಮಾತನಾಡಿರದ ಹುಡುಗಿಯಿಂದ ಅದನ್ನೆಲ್ಲಾ ನಿರೀಕ್ಷಿಸಲು ಸಾಧ್ಯವಿಲ್ಲವೇನೋ ಎಂದುಕೊಂಡಿತು.<br /><br />ಅಷ್ಟರಲ್ಲಿ ಗರಗಸ ಕಾಂಡದ ಅರ್ಧಕ್ಕೆ ಬಂದು ನಿಂತಿತ್ತು. ಕೆಲಸಗಾರರು ಕೆಲಹೊತ್ತು ಕತ್ತರಿಸುವುದ ನಿಲ್ಲಿಸಿದರು. ಮರದ ಮತ್ತೊಂದು ಬದಿಗೆ ಕಟ್ಟಿರುವ ಹಗ್ಗಗಳ ಬಿಗಿಯನ್ನು ಖಾತ್ರಿ ಪಡಿಸಿಕೊಂಡು ಒಂದೆರಡು ನಿಮಿಷ ಬೀಡಿ ಸೇದಲು ಅನುವು ಮಾಡಿಕೊಂಡರು.<br /><br />ಇತ್ತ ಸಾವು, ಬದುಕಿನ ಮಧ್ಯೆ ಸರಿಯಾಗಿ ಅರ್ಧದಲ್ಲಿ ನಿಂತಿದ್ದ ಮರ ಒಂದು ವೇಳೆ ನಾನೇನಾದರೂ ಇದೇ ಆವರಣದಲ್ಲಿ ಮತ್ತೊಮ್ಮೆ ಹುಟ್ಟಿದರೆ ಹೀಗೆ ಕಡೆಯ ಸಾಲಿನಲ್ಲಿ ಹುಟ್ಟಬಾರದು ಎಂದು ಆಶಿಸುತ್ತಾ ಕಡೆಯ ಪ್ರಯತ್ನವೆನ್ನುವಂತೆ ಒಂದು ಬೀಜವನ್ನು ಮನೆಗೆ ಹತ್ತಿರವಾಗಿ ಬೀಳುವಂತೆ ಸಿಡಿಸಿತು. ಆದರೆ ಅಸಹನೀಯ ನೋವಿನಲ್ಲಿ ಅರೆಬರೆ ಜೀವದಲ್ಲಿದ್ದ ಆ ಮರದ ಕೊಂಬೆಗೆ ಅದು ಸಾಧ್ಯವಾಗದೆ ಬೀಜ ಎತ್ತಲೋ ಸಿಡಿದು ಚರಂಡಿ ಪಾಲಾಯಿತು.<br /><br />ಕೆಲಸಗಾರರು ಮತ್ತೆ ಶುರುವಿಟ್ಟರು. ಅಷ್ಟರಲ್ಲಿ ಸಣ್ಣದೊಂದು ಆಸೆ ಸಾಯುವ ಮರದಲ್ಲಿ ಮೂಡಿತು. ಅಲ್ಲ, ನನ್ನ ಈ ಕೊಂಬೆ, ಕಾಂಡಗಳನ್ನು ಕತ್ತರಿಸಿ ಅವನ್ನೆಲ್ಲಾ ಆ ನನ್ನ ಹುಡುಗಿ ತನ್ನ ಗಂಡನೊಡಗೂಡಿ ಕಟ್ಟಿಸುವ ಮನೆಗೆ ಕಿಟಕಿ, ಬಾಗಿಲು, ಚೌಕಟ್ಟಾಗಿ ಬಳಸಬಹುದೇನೋ ಎಂದು! ಇಂಥ ಒಂದು ನಿರೀಕ್ಷೆ ಹುಟ್ಟಿದ್ದೇ ತಡ ಮರ ತಾನೇ ಮುಂದಾಗಿ ನೆಲದ ಮೇಲೆ ದಭಾರ್ ಎಂದು ಒರಗಿತು.<br />............<br /><br />ಆ ಹುಡುಗಿ ಮನೆಯನ್ನೇ ಕಟ್ಟಿಸಲಿಲ್ಲ. ಬದಲಿಗೆ ದುಬಾರಿ ಏರಿಯಾದಲ್ಲಿ ಲಕ್ಷುರಿ ಅಪಾರ್ಟ್ ಮೆಂಟ್ ಒಂದ ಕೊಂಡಳು. ಆ ಮನೆಯಲ್ಲಿ ತೇಗ, ಬೀಟೆಯ ಕಿಟಕಿ, ಬಾಗಿಲುಗಳು ಇದ್ದವು.<br />.............<br /><br />ಅಂದಹಾಗೆ, ಮರಗಳಿಗೇನಾದರೂ ಆತ್ಮವಿರುತ್ತದೆಯೇ?<br />ಈ ಕಥೆಯ ಮಟ್ಟಿಗೆ ಹೇಳುವುದಾದರೆ ಇರುವುದಿಲ್ಲ ಎಂದುಕೊಳ್ಳುವುದೇ ವಾಸಿ. ಕಡೆಯ ಪಕ್ಷ ಆ ಮರದ ನಿರೀಕ್ಷೆಗಳಾದರೂ ಹಾಗೇ ಹಸಿರಾಗಿರಲಿ...nataraju vhttp://www.blogger.com/profile/10918535028693209943noreply@blogger.com0tag:blogger.com,1999:blog-8437289649338017610.post-46174215467448276262010-10-03T12:55:00.000-07:002011-02-25T11:05:46.926-08:00ಉಸಿರೊಳಗಣ ಬಣ್ಣ<strong>And the line goes:<br />multitude are there n 'l be,<br />but honour yourself with the humbleness of accepting commoners commonness<br />but not really being one... </strong><br /><br />ಕಳೆದುಕೊಳ್ಳುವ ಕೊನೆಯ ಹಂತದಲ್ಲಿದ್ದ ಅವನು ಕಡೆಯ ಬಾರಿಗೆಂದು ಹುಡುಕಲು ಆರಂಭಿಸಿದ.<br />ಕಟ್ಟಕಡೆಯ ಬಾರಿಯಾದರೂ ತನ್ನದೊಂದು ಕನಸಿನ ಸೌಧ ಕಟ್ಟಲು ಸಾಧ್ಯವೇ? ಮಹತ್ವಾಕಾಂಕ್ಷೆಗಳ ಮೂಟೆಯನನ್ನು ಪಕ್ಕಕ್ಕಿಟ್ಟು ಅದರಲ್ಲಿದ್ದ ಒಂದಾದರೂ ಬೀಜವನ್ನು ನಿಜಕ್ಕೂ ವಾಸ್ತವದಲ್ಲಿ ಮೊಳಕೆ ಒಡೆಯಿಸಲು ಸಾಧ್ಯವೇ ಎನ್ನುವಲ್ಲಿಗೆ ಬಂದು ನಿಂತಿತ್ತು ಜೀವನ..<br /><br />ಅಲ್ಲಿಗೆ ಅಂತಿಮ ಹೋರಾಟಕ್ಕೆ ರಣಾಂಗಣ ಸನ್ನದ್ಧವಾಗಿತ್ತು. ಅಲ್ಲಿ ಶತೃವೂ ಅವನೇ ಮಿತ್ರನೂ ಅವನೇ, ಹೆದೆಯೇರಿಸುವ ಧನುರ್ಧಾರಿಯೂ ಅವನೇ, ತೋಪು ಹಾರಿಸುವ ಫೌಜುದಾರನೂ ಅವನೇ. ತನ್ನೊಡನೆ ತನಗೇ ಹೋರಾಟ. ಜೀವನ ಪಾತ್ರೆಯಲ್ಲಿನ ಬಣ್ಣಗಳೆಲ್ಲಾ ಅದಾಗಲೇ ಸೂಕ್ತ ಆರೈಕೆ ಇಲ್ಲದೆ ಗಟ್ಟಿಯಾಗಿದ್ದವು. ಬದುಕಿನ ಕ್ಯಾನ್ವಾಸ್ ಮೇಲೆ ಮೂಡಿಸಲೆಂದು ಏನೆಲ್ಲಾ ಜತನ ಮಾಡಿದ್ದರೂ ಕಾಲನ ಉರಿಬೇಗೆಗೆ ಹೆಕ್ಕಳಿಕೆ ಎದ್ದಿದ್ದವು. ಇದ್ದ ಬದ್ದ ಆಸೆಗಳನ್ನೆಲ್ಲಾ ಕಕ್ಕಿದ್ದ ಮನಸಂತೂ ಎಂದೋ ಖಾಲಿಯಾಗಿತ್ತು. ಎದುರಿಗಿದ್ದ ರಸ್ತೆಯೂ ಸೊರಗಿದ ಹಾಗೆ ಕಾಣುತ್ತಿತ್ತು. ಹಾಗೆ ಸಾಗುವಾಗ ಶತಮಾನದ ಹಳೆಯ ಲೇಖನಿಯೊಂದು ದಾರಿ ಬದಿಯಲ್ಲಿ ಸಿಕ್ಕಿತು. ಮುಂದೊಂದು ತಗ್ಗಿನಲ್ಲಿ ಗತಕಾಲದ ಶಾಯಿ ಕುಡಿಕೆ ಬಿದ್ದಿತ್ತು.<br /><br /><em><strong>ಬೋರಲು ಬಿದ್ದಿದೆ<br />ಶಾಯಿ ಇಲ್ಲದ ಕುಡಿಕೆ;<br />ಶಾಯಿ ಮುಗಿದರೂ ಪರವಾಗಿಲ್ಲ<br />ಬರೆಸಿಕೊಳ್ಳುವ<br />ಪದಗಳೇ ಮುಗಿದರೆ ಕಷ್ಟ</strong></em><br /><br />ಹಾಗೆಂದುಕೊಂಡು ಹೆಜ್ಜೆ ಹಾಕಿದ. ಅಲ್ಲೊಂದು ಹೂವು ಬಾಡಿ ಬಿದ್ದಿತ್ತು. ಅದರ ಬಣ್ಣ ಕರಗಿ ನೆಲದೊಳಗೆ ಇಳಿಯುತ್ತಿತ್ತು. ಹಾಗೆ ಅದನೆತ್ತಿಕೊಂಡ. ಅದರೊಳಗೆ ಮೊನ್ನೆ ಇದ್ದಿರಬಹುದಾದ ಸುಗಂಧವ ಇಂದು ಆಘ್ರಾಣಿಸಿದ. ಮೆಲ್ಲನೆ ನೇವರಿಸಿ ಹೇಳಿದ, 'ಚಿಂತೆಯಿಲ್ಲ ಬಿಡು, ನಿನ್ನದೊಂದು ಸುಂದರ ಕಾವ್ಯ ಮೊನ್ನೆಯ ಗಾಳಿಯಲ್ಲಿ ಇದೆ. ಕಣ್ಣಾಚೆಗಿನ, ಕಿವಿಯಾಚೆಗಿನ ಅಷ್ಟೇ ಅಲ್ಲ, ಕವಿಯ ಆಚೆಗಿನ ಕಾವ್ಯ ಅದು. ಮೊನ್ನಿನ ಗಾಳಿಯಲ್ಲಿ ನೀನು ಬರೆದಿರುವ ಸುಗಂಧೀ ಸಾಲುಗಳು ಯಾವತ್ತೂ ನನ್ನ ಉಸಿರಾಗಲಿ' ಎಂದ. ಬಾಡಿದ್ದ ಹೂವು ಬಣ್ಣ ಮಾಸುವ ಮುನ್ನ ಮನಸಾರೆ ನಕ್ಕಿತು, ಸಂತೃಪ್ತಿಯಿಂದ. ಭಗವಂತನೇ ಕೈಯಲ್ಲಿ ಎತ್ತಿಕೊಂಡು ರಮಿಸಿ, ಮುದ್ದಿಸಿದ ಹಾಗೆ ಮುದಗೊಂಡು ನೇರ ಸ್ವರ್ಗಕ್ಕೆ ಜಿಗಿಯಿತು.<br /><br />ಬೆಟ್ಟದಾಚೆಗಿನ ಕೊರಕಲು ಕಣಿವೆಯಲ್ಲಿ ತನ್ನವೇನಾದರೂ ಕನಸುಗಳು ತೇಲುತ್ತಿವೆಯೇನೋ ಎಂದು ಕೊರಗುತ್ತಲೇ ನೋಡಲು ಹೊರಟಿದ್ದವನ ಮನಸು ಈಗ ಬದಲಾಗಿತ್ತು. ತನ್ನೊಳಗಿನ ಯುದ್ದವ ಆರಂಭಕ್ಕೂ ಮುನ್ನವೇ ಅಂತ್ಯಗೊಳಿಸಿದ. ಹಳೆ ಬಣ್ಣಗಳಿಗೆ ತರ್ಪಣ ಬಿಟ್ಟ. ಸೀದಾ ಹೊರಟವನು ಸಂತೆಯಲ್ಲಿ ಕುಂತ, ಮಾಲ್ ಗಳಲಿ ಮಿಂದ. ಗದ್ದಲದಲ್ಲಿನ ಮೌನ ಆಲಿಸಿದ, ಮೌನದಲ್ಲಿನ ಗದ್ದಲ ಹುಡುಕಿದ. ಬಣ್ಣವೇ ಇಲ್ಲದ ಕನಸುಗಳ ಕಂಡ, ಶೂನ್ಯದೊಳಗಿನ ಬಣ್ಣಗಳ ಅಂಗೈ ಮೇಲೆ ಸುರುವಿಕೊಂಡ.<br />ಮೌನದಲ್ಲಿ ಕುದಿಯುವುದನ್ನೂ, ಕುಲುಮೆಯ ತಿದಿಯಲ್ಲಿ ಧ್ಯಾನಿಸುವುದನ್ನೂ ಕಂಡುಕೊಂಡ. ಕಡೆಗೆ ಗಂಭೀರವಾಗಿದ್ದೂ ಭೋರ್ಗರೆಯುತ್ತಾ, ತಣ್ಣನೆಯ ಕಣ್ಣುಗಳಲ್ಲೇ ಅಬ್ಬರಿಸುತ್ತಾ ಮತ್ತೊಮ್ಮೆ ಮುಗಿಬಿದ್ದ - ಜೀವನದ ಮೇಲಲ್ಲಾ, ಕಾಲನ ಮೇಲೆ...<br /><br />ಯಾರೋ ಮಾತಾಡಿಕೊಂಡರು ಇಷ್ಟಕ್ಕೆಲ್ಲಾ ಕಾರಣ ಅವನು ಸೌಗಂಧೀ ಕಾವ್ಯವನ್ನು ಉಸಿರನಲ್ಲಿಯೇ ಓದಿದ್ದು ಎಂದು...<br />ಇರಬಹುದೇನೋ!!!nataraju vhttp://www.blogger.com/profile/10918535028693209943noreply@blogger.com0tag:blogger.com,1999:blog-8437289649338017610.post-66764304429287646092010-08-16T13:00:00.000-07:002011-03-05T12:31:05.165-08:00ಶಿವಶಕ್ತಿಯರ ನಶೆ<p>ಮಾತುಗಳಲ್ಲಿ ನಕ್ಷತ್ರ ಸುರಿವ ಹೊತ್ತು ಅದು... </p><p>ಅಲ್ಲೊಬ್ಬ ಬೈರಾಗಿ ಬೀದಿ ಬದಿಯಲ್ಲಿ ಅಪರಾತ್ರಿ ಸಾಗುತ್ತಾ ಕಾಲಿಗೆ ತೊಡರಿದ ಅಕ್ಷರಗಳನೆಲ್ಲಾ ಹೆಕ್ಕಿ, ಹೆಕ್ಕಿ ತೆಗೆದು ಜೋಳಿಗೆಯಲ್ಲಿ ಜತನದಿಂದ ತುಂಬುತ್ತಾ ಹೆಜ್ಜೆ ಹಾಕಿದ್ದ. ಅವ ಹಾಗೆ ಅಲೆಯುವಾಗ ಆ ಮೆಟ್ರೋ ಸಿಟಿಯ ಪಬ್ ಗಳಲ್ಲಿ ನಿಶೆ ಎನ್ನುವುದು ತುರೀಯ ತಲುಪಿತ್ತು. ಬೀದಿಬದಿಗಳಲ್ಲಿ ರಾತ್ರಿಕೋವಿದರಿಗೆಂದು ತೆಗೆದಿದ್ದ ಟೀ ಅಂಗಡಿಗಳ ಬಿಸಿನೆಸ್ ಜೋರಿತ್ತು. ಇದ್ಯಾವುದರ ಪರಿವೆಯೂ ಇಲ್ಲದೆ ಪಬ್ಬು, ಡ್ಯಾನ್ಸ್ ಬಾರ್, ಡಿಸ್ಕೋಥೆಕ್, ಲೈವ್ ಬ್ಯಾಂಡ್ ಗಳ ಸುತ್ತಮುತ್ತ ನೆಲವನ್ನೇ ಬಗೆಯುವನಂತೆ ನೋಡುತ್ತಾ ನಡೆದಿದ್ದ ಬೈರಾಗಿ. ಹಾಗೆ ಅವನ ಪಾದ ಬೆಳೆಯುತ್ತಾ ಎಲೀಟ್ ಪಬ್ ಬಳಿ ಬಂದು ಗಕ್ಕನೆ ನಿಂತು ಬಿಟ್ಟಿತು. ಅವನ ಕಣ್ಣಲ್ಲಿ ನಿಹಾರಿಕೆಗಳೇ ಬೆಳಗಿದವು. ಹುಡುಕುವದನ್ನೇ ಕಾಯಕ ಮಾಡಿಕೊಂಡಿದ್ದವನಿಗೆ ಹುಡುಕಾಟ ಮುಗಿದಾಗ ಆಗುವ ತೊಳಲಾಟವೂ ಅವುಗಳಲ್ಲಿ ಇತ್ತು ಎನ್ನುವುದನ್ನೂ ಅಲ್ಲಗೆಳೆಯುವಂತಿಲ್ಲ. ತಾನು ಶತಶತಮಾನದಿಂದ ನಿರೀಕ್ಷಿಸಿದ್ದ ಆ ಒಂದು ಕ್ಷಣ ಸಿಕ್ಕೇ ಬಿಟ್ಟಿತ್ತಲ್ಲಾ, ಇದು ನಿಜವೇ ಎಂದು ಮತ್ತೆ ಮತ್ತೆ ಕೇಳಿಕೊಂಡ. ಇಷ್ಟು ವರ್ಷ ನೆಲ ದಿಟ್ಟಿಸಿ ಬದುಕಿದ್ದು ಸಾರ್ಥಕವಾಯಿತು ಎಂದುಕೊಂಡವನೇ ತನ್ನ ಭಾವನೆಗಳ ಓಘಕ್ಕೆ ಕಡಿವಾಣ ಹಾಕಿ ತಾನು ಕಂಡ, ನೆಲದಲ್ಲಿ ಬಿದ್ದಿದ್ದ ಆ ಅಮೂಲ್ಯ 'ಪದ'ವನ್ನು ಕಣ್ರೆಪ್ಪೆ ಕದಲುವುದರೊಳಗೆ ಗಕ್ಕನೆ ಎತ್ತಿ ಜೋಳಿಗೆಯೊಳಗೆ ಹಾಕಿ ದಡಬಡನೆ ನಡೆದು ಬಿಟ್ಟ. </p><p>ರಸ್ತೆಯಿಂದ ಪಕ್ಕದ ಬೀದಿಗೆ ಬಿದ್ದು, ಯಾವ್ಯಾವುದೋ ಗಲ್ಲಿ ಅಲೆದು ಲಗುಬಗೆಯಿಂದ ಸಿಟಿಯ ಅಂಚಿನತ್ತ ಬೀಸತೊಡಗಿದ. ಸಿಟಿಯೊಳಗಿನ ಬೆಳಕಿನ ಗದ್ದಲ ಕಡಿಮೆಯಾಗಿ ಊರಂಚಿನ ನಿಯಾನ್ ಬಲ್ಬ್ ಗಳು ಗತಕಾಲದ ತಮ್ಮ ಐತಿಹ್ಯ ನೆನೆಯುತ್ತಾ ಗೊಣಗಿಕೊಳ್ಳುತ್ತಿದ್ದ ದಾರಿಗುಂಟ ಸಾಗಿದ. ಅವ ಹಾಗೆ ಊರ ಕೊನೆ ದಾಟುವ ಹೊತ್ತಿಗೆ ಗೂಬೆಗಳು ದಣಿದಿದ್ದವು, ನಾಯಿಗಳು ಬೊಗಳಿ, ಬೊಗಳಿ ಬೇಸತ್ತು ಇಬ್ಬನಿ ಮೂಡಲು ಇನ್ನೂ ಒಂದುವರೆ ಜಾವ ಇರುವಾಗಲೇ ಬಾಲ ಮುದುರಿ ಅಲ್ಲಲ್ಲೇ ಬೆಚ್ಚಗೆ ಬಿದ್ದುಕೊಂಡಿದ್ದವು. ಇದಾವುದನ್ನೂ ಗಮನಿಸುವ ವ್ಯವಧಾನವಿಲ್ಲದಂತೆ ಬಿರಬಿರನೆ ಹೆಜ್ಜೆ ಹಾಕಿದ ಬೈರಾಗಿ ಎಂದಿಗಿಂತ ಅರೆ ತಾಸು ಮುಂಚಿತವಾಗಿಯೇ ಊರಾಚೆಯ ಮಂಟಪ ತಲುಪಿದ. </p><p>ಹಾಗೆ ಬಂದವನೇ ಎಣ್ಣೆಯಿಲ್ಲದ ಹಣತೆಯಲ್ಲಿ ನೀರು ತುಂಬಿ, ಬತ್ತಿ ಇಲ್ಲದ ದೀಪ ಹಚ್ಚಿದ. ಅದೇ ದೀಪದಲ್ಲೇ ಚಿಲುಮೆ ಹಚ್ಚಿ ಉಲ್ಟಾ ತಿರುಗಿಸಿ ಬೆಂಕಿ ತುದಿಯ ಬಾಯಿಗಿಟ್ಟು ಹೊಗೆಯ ಬಸಿದುಕೊಂಡ. ಚಂದಿರನ ತಲೆದಿಂಬಾಗಿಸಿ ಕಣ್ಣು ಬಿಟ್ಟುಕೊಂಡೇ ನಿದ್ದೆಗೆ ಜಾರಿದ. ಒಂದರೆ ತಾಸು ಹಿಂದಕ್ಕೆ ಜಾರಿರಬಹುದು ಯಾರೋ ಆಕಳಿಸುತ್ತಾ ಅತ್ತಿತ್ತ ಮಗ್ಗಲು ಬದಲಿಸುವ ಸದ್ದಾಯಿತು. ಬಿಟ್ಟ ಕಣ್ಣು ಮುಚ್ಚದೇ ಕೇಳಿದ,"ಯಾಕೆ, ನಿದ್ದೆ ಬರಲಿಲ್ಲವಾ?'</p><p>ಅತ್ತಿಂದ ಸಣ್ಣ ದನಿ ಉಸುರಿತು, 'ಅಲ್ಲೋ ಬೈರಾಗಿ, ನಾನು ಅಲ್ಲೆಲ್ಲೋ ಮಣ್ಣಲ್ಲಿ ಗಡದ್ದಾಗಿ ಮಾಸಿಕೊಂಡು ಬಿದ್ದಿದ್ದೆ. ಇನ್ನೇನು ಮುಂಜಾನೆಯ ಇಬ್ಬನಿಯಲ್ಲಿ ಕರಗಿ ಭೂಮಿಯೊಳಗೆ ಇಳಿದು ಬಿಡುವ ಅಂತ ಲೆಕ್ಕ ಹಾಕಿದ್ದೆ. ಅದ್ಯಾಕೋ ಹೊತ್ತು ತಂದೆ ನನ್ನ ಇಲ್ಲಿಗೆ' ಎಂದಿತು ಆ 'ಪದ'.</p><p>'ಓಹೋ, ನೀನಾ, ಅದೇ ಆ ಎಲೀಟ್ ಪಬ್ ಪಕ್ಕ ಬಿದ್ದಿದ್ದವನು ತಾನೇ...' ಎಂದ ಬೈರಾಗಿ. ತನ್ನ ಮನದೊಳಗೆ ಹಕ್ಕಿಗಳ ಹಾಗೆ ಹಾರುತ್ತಿದ್ದ ಭಾವನೆಗಳ ಕಲರವ ಒಂದಿನತು ಹೊರಗೆ ಬರಗೊಡದೆ ನಿರ್ಭಾವುಕ ದನಿಯಲ್ಲಿ ಆ ಮಾತು ಉದುರಿಸಿದ್ದ. 'ಅಲ್ಲ, ನೀನು ಮಣ್ಣಲ್ಲಿ ಕರಗಿ ಹೋಗೋನೇ ಆಗಿದ್ದರೆ ನನ್ನ ಕಾಲಿಗೆ ಯಾಕೆ ತೊಡರಿಕೊಂಡೆಯೋ' ಎಂದು ಅದೇ ಉಸಿರಿನಲ್ಲಿಯೇ ಉಲ್ಟಾ ದಬಾಯಿಸಿಯೂ ಬಿಟ್ಟ. </p><p>ಇವರ ಮಾತುಗಳನ್ನು ಕೇಳುತ್ತಾ ಕೇಳುತ್ತಾ ನೇಸರ ಮೂಡುವ ಮುಂಚೆ ಪಶ್ಚಿಮದಲ್ಲಿ ಜಾರಿಕೊಳ್ಳ ಬೇಕಿದ್ದ ಮೌನವೊಂದು ಹಾಗೇ ಅಲ್ಲಿಯೇ ನಿಂತುಬಿಟ್ಟಿತು. ಅದನ್ನು ನೋಡಿದವನೇ "ಹಚಾ'' ಎಂದು ಓಡಿಸಿದ ಬೈರಾಗಿ ಅಸಲಿ ಹಕೀಕತ್ತು ಶುರುವಿಟ್ಟ.. </p><p>'ನೋಡು ವಿಷಯ ಇಷ್ಟೇ, ನನ್ನದೊಂದು ಕಾವ್ಯ ಇದೆ. ಅದು ನನ್ನ ಬದುಕಿಗಿಂತ ದೊಡ್ಡದು. ನಿಜ ಹೇಳಬೇಕೆಂದರೆ ಅದೊಂದು ಕಾವ್ಯವ ಅಂತರ್ಗತಗೊಳಿಸಿಕೊಳ್ಳಲು ನೂರಾರು ಜನುಮ ಕಾದಿದ್ದೇನೆ. ಈಗ ಎಲ್ಲವೂ ಒಂದು ಹಂತಕ್ಕೆ ಬಂದದ್ದಾಗಿದೆ ಆದರೆ ನನ್ನನ್ನು ಮೀರಿ ನಿಂತಿರುವ ಆ ಕಾವ್ಯಕ್ಕೆ ಕಡೆಯದಾಗಿ ನಶೆಯ ಲಹರಿ ಬೇಕು. ಎಂಥ ನಶೆ ಬೇಕು ಎಂದರೆ ಅಲ್ಲಿ ಪ್ರಜ್ಞೆ ಕರಗಿ ಹೋಗಬೇಕು, ಚಿಂತನೆ ಚಿಲುಮೆಯಾಚೆಗೆ ನಿಲ್ಲಬೇಕು. ಅಲ್ಲಿ ಏನಿದ್ದರೂ ಅಲ್ಲಮನ ಬಯಲೂ, ಬುದ್ಧನ ಭಾವವೂ, ಶಕ್ತಿಶಿವರ ಕದಲದ, ಕದಡದ ಅಖಂಡ ಏಕಭಾವ ಬಿಂದುವೂ ಇರಬೇಕು' ಅಂದ. </p><p>ಪಕ್ಕದಲ್ಲಿ ಹೊರಳಾಡುತ್ತಿದ್ದ ಆ ಮಾಸಿದ್ದ ಪದ ಏನೂ ಮಾತನಾಡಲಿಲ್ಲ. ಇದನ್ನು ನೋಡಿ, ಮನದಲ್ಲೇ ಶಿವಶಕ್ತಿಯರ ಬಿಂದುವಿನ ಚಕ್ರ ಬಿಡಿಸುತ್ತಾ ಹೇಳಿದ, "ನೋಡು, ನಶೆ ಎಂದರೆ ಅದು ಅಂತಿಂಥ ನಶೆಯಲ್ಲ. ಆ ನಿನ್ನೊಡತಿ ತನ್ನೊಳಗೆ ತುಂಬಿಕೊಳ್ಳುತ್ತಿದ್ದಳಲ್ಲ ಅಂಥ ನಶೆ. ಅಂಥದ್ದೊಂದು ನಶೆಯಲ್ಲೇ ಮಿಂದ ನಂತರವೇ ತಾನೇ ಆಕೆ ನಿನ್ನ ತುಳುಕಿಸಿ ಹೋದದ್ದು. ಅದಕ್ಕೆ ತಾನೇ ನೀನು ಮೈತುಂಬಾ ಮತ್ತು ಹೊದ್ದುಕೊಂಡು ಬಿದ್ದಿರುವುದು. ನಿನ್ನೊಳಗೆ ಭೂತ, ಭವಿಷ್ಯ, ವರ್ತಮಾನ ತಟಸ್ಥವಾಗಿದೆ. ಎಲ್ಲವೂ ನಿನ್ನೊಳಗೆ ಕುಸಿದು, ಕುಸಿದು ಕೃಷ್ಣನಾಗಿದೆ. ಕೃಷ್ಣ, ಮಹಾ ಕೃಷ್ಣ ಎಲ್ಲವನ್ನೂ ಕರಗಿಸಿಕೊಳ್ಳುವ, ಕರಗಿಸಿ ಅರಗಿಸಿಕೊಳ್ಳುವ ಮಹಾಕಾಲ. ಆ ಮಹಾಕೃಷ್ಣವೇ ವೇದಿಕೆ ಶಿವಶಕ್ತಿಯರು ಬಿಂದುವಾಗಲು. ಅಂಥದ್ದೊಂದು ಲೋಕೋತ್ತರ ನಶೆ ನಿನ್ನೊಳಗೆ ಇದೆ. ಅದಕ್ಕೆ ನಿನ್ನ ಹೊತ್ತು ತಂದೆ' ಅಂದ. </p><p>ಪಕ್ಕದಲ್ಲಿನ ಪದ ತೊದಲುತ್ತಾ ತುಸು ಗಟ್ಟಿಯಾಗಿ ಒದರಿತು, "ಲೇ ಬೈರಾಗಿ, ಚಿಲುಮೆ ಸೇದಿ ಗಡದ್ದಾಗಿ ಏಳೆಂಟು ಲೋಕ ಸುತ್ತಿ ಬರೋ ನಿನಗೆ ಅದ್ಯಾಕೋ ಬೇಕು ನಶೆ. ನೋಡು, ನಶೆ ನನ್ನೊಳಗಿಲ್ಲ. ನಾನು ನಶೆಯೊಳಗಿದ್ದೇನೆ. ನಶೆಯೊಳಗೆ ಇದ್ದವರಿಗೆ 'ನಾನು' ಎಂಬುದು ಇಲ್ಲ. ಹಾಗಾಗಿ ನಿಜ ಹೇಳಬೇಕೆಂದರೆ ಇಲ್ಲಿ ನಾನಿಲ್ಲ. ಇರುವುದೆಲ್ಲವೂ ನಶೆ ಮಾತ್ರ. ಅದು ನನ್ನೊಡತಿಯ ಅನುಗ್ರಹದ ಫಲ. ಅವಳ ಲಹರಿ'. </p><p>ಇಷ್ಟು ಹೇಳಿ ಮತ್ತೆ ಮಗ್ಗಲು ಬದಲಿಸುತ್ತಾ, ಮೈ ತುಂಬಾ ಮೆತ್ತಿಕೊಂಡಿದ್ದ ಧೂಳಿನ ಪರಿವೇ ಇಲ್ಲದೆ ಉಸುರಿತು, "ಮಧುಶಾಲೆಯಲ್ಲಿ ಮೀಯುತ್ತಾ ಕಣ್ಣಲ್ಲೇ ಕಾವ್ಯ ತುಳುಕಿಸುವ ರಸಿಕಳು ನನ್ನೊಡತಿ. ಅವಳದೊಂದು ಸಾಲಿಗೆ ಮತ್ತೆ, ಮತ್ತೆ ಹೊತ್ತಿ ಉರಿಯುವ ಹೃದಯಗಳೆಷ್ಟೋ... ಪ್ರತಿ ಬಾರಿ ಹೃದಯವೊಂದು ಹೊತ್ತಿ ಉರಿವಾಗಲೂ ಅದರಳೊಗಿನ ಪರಿಶುದ್ಧ ಭಾವವ ದಿಟ್ಟಿಸುತ್ತಾಳೆ. ತನ್ನ ರತಿ ದೇಹದೊಳಗಿನ ತಿದಿಯೊತ್ತಿ ಆತ್ಮದ ಕುಲುಮೆಯಿಂದ ಭಾವಗಳ ಸಾಚಾತನ ನೋಡುತ್ತಾಳೆ. ಅವಳ ಆತ್ಮದ ತಹತಹಕ್ಕೆ ಪರಿಶುದ್ಧ ಭಾವದ ಹವಿಸ್ಸೇ ಬೇಕು. ಅವಳ ಮನೋಯಜ್ಞದಲ್ಲಿ ಅವು ಅಂತಿಮವಾಗಿ ಹೊಳೆಯಬೇಕು' ಎಂದಿತು. </p><p>ಬೈರಾಗಿ ತನ್ನ ಆತ್ಮವನ್ನೂ ಕಿವಿಯಾಗಿಸಿಕೊಂಡು ಕೇಳುತ್ತಿದ್ದ. ಆ ಪದ ಮುಂದುವರೆಯಿತು, "ಜೀವ ಕನ್ನಿಕೆ ಸೃಷ್ಟಿ ಕಟ್ಟುವುದು ಇಟ್ಟಿಗೆಯಿಂದ ಅಲ್ಲ ಕಣೋ ಬೈರಾಗಿ, ಶೂನ್ಯದೊಳಗೆ ದಹಿಸಿ ಹೊರಬಿದ್ದ ಶುದ್ಧ ಭಾವದಿಂದ' ಅಂದಿತು. </p><p>ಇಂಥದ್ದೊಂದು ಮಾತಿಗಾಗಿ ಅದೆಷ್ಟು ಸಾವಿರ ವರುಷದಿಂದ ತಹತಹಿಸಿದ್ದನೋ ಬೈರಾಗಿ. ಮೆತ್ತಗೆ ತನ್ನ ಎದೆಯ ತಿದಿ ಒತ್ತಿ ಮಾತೆಂಬೋ ಮಾತುಗಳ ಮೂಡಿಸತೊಡಗಿದ, " ಅದೆಲ್ಲ ನನಗೆ ಗೊತ್ತು ಅದಕ್ಕೇ ನಿನ್ನ ಹೊತ್ತು ತಂದಿರೋದು... ನಿನ್ನೊಡತಿಯ ಮುಂದೆ ನಾನು ಯಾವತ್ತೂ ಮಂಡಿಯೂರಿ ಕುಳಿತಿರುತ್ತಿದ್ದೆ' ಎಂದು ಕಾಲಚಕ್ರದಲ್ಲಿ ಹಿಂದೆ ಸರಿದ. ಬೈರಾಗಿಯ ಮಾತಿನಿಂದ ಕಕ್ಕಾಬಿಕ್ಕಿಯಾಯಿತು ಪದ. ಎಲ್ಲಿಯ ನನ್ನೊಡತಿ, ಎಲ್ಲಿಯ ಬೈರಾಗಿ ಎಂದು ಲೆಕ್ಕ ಶುರುವಿಟ್ಟುಕೊಂಡಿತು. </p><p>ಇದರ ಪರಿವೆ ಇಲ್ಲದೆ ಬೈರಾಗಿ ಮುಂದುವರೆಸಿದ, ಅದೊಂದು ದಿನ ಅವಳ ಮುಂದೆ ಎಂದಿನಂತೆ ಮಂಡಿಯೂರಿ ಕುಳಿತಿದ್ದೆ. ಮಧುವಿನ ಹನಿಯೊಂದರ ಸಂಗಡ ಲಾಸ್ಯವಾಡುತ್ತಾ, ತೆಳುವಾಗಿ ಅದರಳೊಗಿನ ಮರ್ಮವ ಆತ್ಮಕ್ಕೆ ಹನಿಸಿಕೊಂಡಳು. ನಂತರ ಮಧುವಿನ ಬಟ್ಟಲು ಪಕ್ಕಕ್ಕಿಟ್ಟು ತಾನು ಈ ಲೋಕಕ್ಕೆ ಸೇರಿದವಳೇ ಅಲ್ಲವೇನೋ ಎನ್ನುವಂತೆ ನಿರ್ಲಿಪ್ತವಾಗಿ ಕೇಳಿದಳು,.. 'ಅದೆಷ್ಟು ಪ್ರೇಮಿಸಬೇಕು ಅಂತಾ ಇದ್ದೀಯ ನನ್ನನ್ನು' ಎಂದು. </p><p>'ನಾನೇ ನೀನಾಗುವಷ್ಟು' ಎಂದೆ, </p><p>'ಆಮೇಲೆ' ಎಂದಳು. </p><p>ಅವಳ ಮೊಗವನ್ನೇ ದಿಟ್ಟಿಸುತ್ತಿದ್ದೆ.. </p><p>ಅವಳೇ ಮುಂದುವರೆದು ಕೇಳಿದಳು 'ನೀನು ನಾನಾದ ಮೇಲೆ ಮುಂದೇನು?', </p><p>'ನಿನ್ನೊಳಗಿನ ನೀನು ಕರಗಿ ಕಡೆಗೆ ಶೂನ್ಯವಾಗುವುದು' ಅಂದೆ. </p><p>"ಆಯಿತು' ಎಂದಳು. </p><p>ನನ್ನ ಕಣ್ಣನ್ನೇ ದಿಟ್ಟಿಸಿದಳು. ನಾನು ಹಾಗೇ ಅವಳ ಕಣ್ಣೊಳಗೆ ಇಳಿಯುತ್ತಾ ಹೋದೆ. ಕೈ ಹಿಡಿದು ಅಂತರಂಗಕ್ಕೆ ಕರೆದೊಯ್ದಳು, ಆತ್ಮದೊಳಗೆ ಬೆರೆಸಿಕೊಳ್ಳುತ್ತಾ ಕೇಳಿದಳು, 'ನನ್ನೊಳಗೆ ನೀನು ಕರಗಿ, ಆಮೇಲೆ ನಾನೂ ಕರಗಿ ಕಡೆಗೆ ಶೂನ್ಯವಾಗಿ ಹೋದ ಮೇಲೆ ಉಳಿಯುವುದೇನೋ ಹುಡುಗ?' </p><p>'ನಿನ್ನಾಣೆಗೂ ಗೊತ್ತಿಲ್ಲ, ಅದನ್ನೆಲ್ಲಾ ನೀನೇ ಹೇಳಬೇಕು, ಆ ಪ್ರಶ್ನೆಗಳನ್ನು ಕೇಳುವುದಿರಲಿ ಅದನ್ನು ಯೋಚಿಸಿದರೂ ನನಗೆ ಗೊಂದಲವಾಗುತ್ತೆ' ಎಂದೆ. </p><p>ತನ್ನ ಆತ್ಮದ ಆಳಕ್ಕೆ ಕರೆದುಕೊಳ್ಳುತ್ತಾ ಹೇಳಿದಳು, 'ದಡ್ಡ, ಶೂನ್ಯದಲ್ಲಿ ಗೊಂದಲವೆಲ್ಲೋ ಇರುತ್ತೆ, ಅಲ್ಲಿ ಎಲ್ಲವೂ ತುಂಬಿರುತ್ತೆ'. ನನಗೆ ಅರ್ಥವಾಗದು ಎಂದು ಅರಿತು, ತನ್ನ ಆತ್ಮದೊಳಗೆ ಪರಿಪೂರ್ಣವಾಗಿ ನಾನು ಹರವಿಕೊಳ್ಳಲು ಬಿಟ್ಟು ಬೆಚ್ಚಗೆ ಹೇಳಿದಳು, 'ನೋಡು ಎಲ್ಲವೂ ತುಂಬಿರುತ್ತೆ ಅಂದರೆ ಅದರ ಅರ್ಥ ಅಲ್ಲಿ ಏನೂ ಇಲ್ಲ ಎಂತಲೇ. ಏನೂ ಇಲ್ಲ ಎಂದರೆ ಅದು ಪರಿಪೂರ್ಣವೆಂದೇ... ಹಾಗಾಗಿ ಅಂಥ ಪರಿಪೂರ್ಣತೆ ಏಕಕಾಲಕ್ಕೆ ನಿಶ್ಚಲವೂ, ಚೈತನ್ಯಶೀಲವೂ ಆಗಿರುತ್ತೆ. ಸಂಭವ, ಅಸಂಭವ ಎರಡೂ ಅಲ್ಲಿ ಒಟ್ಟಿಗೇ ಇರುತ್ತವೆ' ಎಂದಳು. </p><p>ನಾನು ಪೆದ್ದಾಗಿ ನೋಡುತ್ತಿದ್ದೆ. 'ಹೋಗಲಿ ಬಿಡು... ಅನುಭವಕ್ಕೆ ವಿವರಣೆಯ ಅಗತ್ಯವಿಲ್ಲ. ಅನುಭವಿಸಿದ ಮೇಲೆ ವಿವರಣೆ ಬೇಕಿಲ್ಲ. ಮುಂದೆ ನಿನಗೇ ತಿಳಿಯುತ್ತದೆ' ಎಂದಳು.<br />ಹಾಗೆ ಅವಳ ಅತ್ಮದೊಳಗೆ ನನ್ನ ಬೆರೆಸಿಕೊಂಡ ಮೇಲೆ ಕಾಲ ನಿಂತು ಹೋಯಿತು. ಯುಗಯುಗಳೇ ಗತವಾದವು. ಹೀಗೆ ಅದೆಷ್ಟು ಕಾಲ ಸಂದಿತ್ತೋ... ಒಂದು ದಿನ ಇದ್ದಕ್ಕಿದ್ದಂತೆ ಹೇಳಿದಳು, 'ಸಾಕು, ಹೊರಡು, ಕೆಲಸ ಮಾಡುವುದಿಲ್ಲವೇನು?' ಎಂದು. </p><p>'ಯಾಕೆ' ಅಂದೆ, </p><p>'ಅಯ್ಯೋ, ಅರಸಿಕ, ಹೋಗಿ ಮತ್ತೊಂದಿಷ್ಟು ನಶೆ ತೆಗೆದುಕೊಂಡು ಬಾ... ಭಾವದ ನಶೆ, ಅನುಭಾವದ ನಶೆ, ಅದ ಕರಗಿಸಿ ಮತ್ತೆ ಶೂನ್ಯವಾಗೋಣ' ಎಂದಳು. </p><p>'ಹೇಗೆ?' ಅಂದೆ. </p><p>'ಅಕ್ಷರದಾಚೆಗೆ ನಿಂತ, ಕಿವಿಗಳಿಗೆ ದಕ್ಕದ, ಸದಾ ಮನದೊಳಗೆ ಜಿನುಗುವ ಕಾವ್ಯ ತಾ' ಅಂದಳು. ಸರಿ ಎಂದು ಹೊರಟೆ. ಅವಳ ಆತ್ಮದಿಂದ ನನ್ನನ್ನು ಕಡ ಪಡೆದು ಹೊರಬಿದ್ದೆ. ಅಲೆದೆ, ಅಲೆದೆ... ಅಂಥದ್ದೊಂದು ಕಾವ್ಯ ಎಲ್ಲಿಂದ ತರಲಿ, ಅದ್ಹೇಗೆ ಸೃಷ್ಟಿಸಲಿ ಎಂದು. ಕಡೆಗೊಂದು ದಿನ ಅರಿವಾಯಿತು, 'ನಾನು ಅವಳಾದ ಮೇಲೆ ಕಾವ್ಯ ಹೊರಗೆ ಎಲ್ಲಿ ತಾನೇ ಇರುತ್ತೆ? ಅದು ಇರುವುದು ನಮ್ಮೊಳಗೆ... ಆ ನಮ್ಮೊಳಗಿನ ಕಾವ್ಯ ಪದವಾಗಿ ಅಕ್ಷರದಲ್ಲಿ ಸ್ಥಾಯಿ ಆಗುವ ಮುನ್ನ ಬರಿದೆ ಭಾವದ ಕಾವ್ಯ ಕಟ್ಟಬೇಕು. ಅದುವೇ ಅಕ್ಷರದಾಚೆಗೆ ನಿಂತ, ಪದಗಳಾಗದ, ಕಿವಿಗಳಿಗೆ ದಕ್ಕದ ಶುದ್ಧ ಭಾವದ ನಿಶ್ಶಬ್ಧ ಕಾವ್ಯ... ಭಾವನೆಗಳು ಪದವಾಗಿ ಶಬ್ಧವಾಗುವ ಮುನ್ನವೇ ಕಾವ್ಯ ಕಟ್ಟಿದೆ... ಅವಳ ಎದೆಯೊಳಗೆ....'' ಎಂದು ಹೇಳಿ ಬೈರಾಗಿ ಮಾತು ನಿಲ್ಲಿಸಿದ.</p><p>'ಅಲ್ಲಾ ಬೈರಾಗಿ, ಹಾಗಾದರೆ ಆ ಶಬ್ದವಲ್ಲದ ಕಾವ್ಯಕ್ಕೆ ಶಬ್ದವಾಗಿ ಹೊಮ್ಮಿ, ಪದವಾಗಿ ಬಿದ್ದು ಮಣ್ಣಲ್ಲಿ ಹೊರಳಿರುವ ನಾನು ಮೈಲಿಗೆಯಲ್ಲವೇ? ನನ್ನನ್ನೇಕೆ ತಂದೆ?' ಎಂದಿತು ಆ ಪದ. </p><p>ಬೈರಾಗಿ ನಿಧಾನವಾಗಿ ಹೇಳಿದ, 'ಶಬ್ಧವಾಗದ ಕಾವ್ಯಕ್ಕೆ ನಶೆ ಬರುವುದು ನಿನ್ನಿಂದಲೇ.. ಅವಳ ಅಧರದಿಂದ ಮತ್ತಾಗಿ ಇಳಿದ ನಿನಗೆ ಯಾವುದೇ ಅರ್ಥದ ದಾಸ್ಯ ಇಲ್ಲ.... ನೀನೇ ಹೇಳಿದಂತೆ ನಶೆ ನಿನ್ನೊಳಗಿಲ್ಲ, ನೀನು ನಶೆಯೊಳಗೆ ಇರುವೆ. ಹಾಗಾಗೇ ಅರ್ಥ ಮೀರಿದ ಅವಿರತ ಕಾವ್ಯಕ್ಕೆ ನೀನೇ ಶೀರ್ಷಿಕೆ' </p><p>ಒಂದಷ್ಟು ಹೊತ್ತು ಅಲ್ಲಿ ಮೌನವೇ ಮೌನ ತುಂಬಿತ್ತು.<br /></p><p>ಬೈರಾಗಿ ಮೆಲ್ಲನೆ ಮತ್ತೊಂದು ಮಾತು ಹೇಳಿದ್ದು ಪಕ್ಕದಲ್ಲಿನ ಪದಕ್ಕೆ ಕೇಳಿಸಲೇ ಇಲ್ಲ. </p><p>'ನಾನೇ ಅವಳಾದ ಮೇಲೆ ಅವಳಿಗೆ ಅರ್ಪಿಸಲು ಉಳಿವುದಾದರೂ ಏನು? ಅವಳಿಗೆ, ಅವಳೇ ಅರ್ಪಣೆ' ಎಂದಿದ್ದ ಅವ. </p><p>ಅಲ್ಲಿಗೆ ಯುಗಯುಗಾಂತರದ ನಂತರ ಮತ್ತೊಂದು ನಿಹಾರಿಕಾ ವಸಂತ ಮೈದಳೆವ ಕ್ಷಣ ಸನ್ನಿಹಿತವಾಗಿತ್ತು. ಶಿವಶಕ್ತಿಯರ ಸಮ್ಮಿಳನಕ್ಕೆ ಕಾತರಿಸಿ ಆಗಸದ ತುಂಬಾ ಹರಡಿಕೊಂಡಿದ್ದ ಚುಕ್ಕಿಗಳು ಮೈ ನೆರೆದವು.....<br /></p><p> </p><p> <span style="font-size:85%;">ಚಿತ್ರಕೃಪೆ: ಕಿರಣ್ ಮಾಡಾಳ್</span> </p>nataraju vhttp://www.blogger.com/profile/10918535028693209943noreply@blogger.com1tag:blogger.com,1999:blog-8437289649338017610.post-36286274232558584712010-08-12T11:26:00.000-07:002010-08-12T11:41:41.868-07:00ನನ್ನೊಳಗಿನ ನೀನು ಮತ್ತು ನಾನು<p>1</p><p>ನನ್ನೊಳಗೆ ನೀನು ಯಾವತ್ತೂ ಉಳಿದಿರುವೆ, </p><p>ನಾ ಕರಗಿ ಹೋದ ಮೇಲೂ... </p><p>ಏಕೆಂದರೆ </p><p>ನೀ ನನ್ನ ನಿಜ ಅಸ್ತಿತ್ವ </p><p> </p><p> </p><p></p><p></p><p></p><p></p><p><br /><br />2 </p><p>ನಿನ್ನೊಳಗೆ ನಾನು ಇರಲೇಬೇಕೆಂಬ </p><p>ಹಂಬಲ ಇಲ್ಲ, ಹಠವೂ ಇಲ್ಲ... </p><p>ಉಳಿಸಿಕೊಂಡರೆ ಉಸಿರಾಗುವೆ </p><p>ಉಳಿಸದೆ ಹೋದರೆ </p><p>ಮರೆವೆಂಬ ಊರಲ್ಲಿ ಮರೆಯಾಗುವೆ</p>nataraju vhttp://www.blogger.com/profile/10918535028693209943noreply@blogger.com0tag:blogger.com,1999:blog-8437289649338017610.post-70648923814242192352010-08-12T10:13:00.000-07:002010-08-12T11:06:08.091-07:00ಹಾಗೇ ಒಂದು ಕಥೆಬ್ರಹ್ಮಾಂಡವೆಂಬೋ ಬ್ರಹ್ಮಾಂಡದಲ್ಲಿ ಭುವಿಯೆಂಬ ಸಣ್ಣದೊಂದು ಬಿಂದು. ಅಲ್ಲೋ ಪಿತಗುಟ್ಟುವಷ್ಟು ಜನ, ಮನುಕುಲವೆಂದು ಕರೆದುಕೊಂಬರು ತಮ್ಮನ್ನು ಅವರು. ಆ ಮನುಕುಲಕ್ಕೆ ಇತಿಹಾಸವೆಂಬೋ ಇತಿಹಾಸವೂ, ಭವಿಷ್ಯವೆಂಬೋ ಭವಿಷ್ಯವೂ ಉಂಟು. ಆದರೆ ಅವರೆಲ್ಲಾ ವರ್ತಮಾನದಲ್ಲೇ ಫುಲ್ ಬಿಜಿ... ಇತಿಹಾಸವನ್ನು ಕಾಣುವ ಒಳಗಣ್ಣಾಗಲಿ, ಭವಿತವ್ಯವ ದಿಟ್ಟಿಸುವ ದೃಷ್ಟಿಯಾಗಲಿ ಬಹುತೇಕ ನಶಿಸಿದೆ.<br /><br />ಇಂತಿಪ್ಪ ಮನುಕುಲದ ಇತಿಹಾಸ, ವರ್ತಮಾನವನ್ನು ಯಾವನೋ ಪರದೇಶಿ ಕೆದಕಲಾಗಿ ಕಂಡದ್ದಾದರೂ ಇಷ್ಟು:<br />ಪ್ರೀತಿಸುವವರಿಗೆ ಹತ್ತಿರವಾಗದ, ಕಾತರಿಸಿದವರೊಡನೆ ಕೂಡಲಾಗದ, ಬಯಸಿದವರನ್ನು ಪಡೆಯಲಾಗದ ಅಸಹಾಯಕವೂ, ಗೊಂದಲಮಯವೂ ಆದ ಜೀವನ ಅಲ್ಲಿ ಬಹುಪಾಲು ಜನರದ್ದು. ಪ್ರೀತಿಸಿ, ಕಾತರಿಸಿ, ಬಯಸಿ ಪಡೆದವರು ಕೆಲ ಮಂದಿ, ಅವರದೋ ಧನ್ಯತಾಭಾವ... ಉಳಿದಂತೆ ಅಲ್ಲೊಬ್ಬರು, ಇಲ್ಲೊಬ್ಬರು ಅನುಭವಿಗಳು, ಅನುಭಾವಿಗಳು, ಅವರಂತು ಅವನ್ಯಾರೋ 'ಭಗವಂತನೆಂಬ ಭಗವಂತನು' ಕೊಟ್ಟದ್ದ ಪಡೆದು ಗೊಂದಲಗಳಿಂದ ದೂರವೇ ಉಳಿದವರು... ಹೀಗಾಗಿ ಈ ಎಲ್ಲ ಮಂದಿಗೆ ಅವರವರದೇ ಆದ ಸತ್ಯಗಳು...<br /><span class=""></span><br />ಫ್ಲ್ಯಾಶ್ ಬ್ಯಾಕ್ ನಲ್ಲೂ ಫಾಸ್ಟ್ ಫಾರ್ವರ್ಡ್ ನಲ್ಲೂ, ಸ್ಲೋ ಮೋಷನ್ನಲ್ಲೂ, ನಾರ್ಮಲ್ ಮೋಡ್ನಲ್ಲೂ ಅಲ್ಲಿ ಯಾವಾಗಲೂ ಇದೇ ಕಥೆ..<br /><span class=""></span><br />ಇದರಿಂದಾಗಿ ಅಲ್ಲಿ ಒಟ್ಟೊಟ್ಟಿಗೇ ತಾಳ್ಮೆಯೂ, ಅಸಹನೆಯೂ, ಗೊಂದಲ, ಧ್ಯಾನ, ಹಿಂಸೆ, ಶಾಂತಿ, ಕೊಲೆ, ಸುಲಿಗೆ, ವಂಚನೆ, ಕ್ರೌರ್ಯ, ಮದ, ಮತ್ಸರ, ಪ್ರೀತಿ, ಮೋಹ, ಪ್ರೇಮ, ಕಾಮ, ಲಾಂಗು, ಮಚ್ಚು, ಕಾರತೂಸಿನ ಹೊಗೆ, ಕೆಂಪು ಗುಲಾಬಿ, ಬಿಳಿ ಪಾರಿವಾಳ ಮತ್ತೆ ಕೆಲ ದೇವತೆಯರು ಅವರ ಆರಾಧಕರೂ ಇದ್ದರು....<br /><span class=""></span><br />ಇದೆಲ್ಲ ಕಾರಣದಿಂದ ಮನುಕುಲವೆಂಬ ಕುಲದ ಕಥೆಯು ಏಕಕಾಲಕ್ಕೆ ಅಸಹನೀಯವೂ, ಆದರಣೀಯವೂ, ದಾರುಣವೂ, ಪ್ರೀತಿಪೂರ್ವಕವೂ ಆಗಿತ್ತೆಂಬುದು ಕಂಡು ಬಂದಿತೆಂಬಲ್ಲಿಗೆ ಪರಿಸಮಾಪ್ತಿ.<br /><br />-------ಓಂ ಜನಗಣ ಮನ ಢಣಢಣ ಭಣಭಣ....-----------nataraju vhttp://www.blogger.com/profile/10918535028693209943noreply@blogger.com0tag:blogger.com,1999:blog-8437289649338017610.post-77789415150241483132010-07-01T13:04:00.000-07:002010-07-01T13:08:30.570-07:00ನಿ'ವೇದನೆ'ಕವಿತೆಯೊಂದು ತೀರಾ ಖಾಸಗಿಯಾಗಿತ್ತು,<br />ಅದೇಕೋ ಜನರ ಬಾಯಿಗೆ ಬಿದ್ದು ಗದ್ದಲವಾಗಿ ಹೋಯ್ತು....nataraju vhttp://www.blogger.com/profile/10918535028693209943noreply@blogger.com0tag:blogger.com,1999:blog-8437289649338017610.post-58638007958049572042010-02-24T15:04:00.001-08:002010-08-03T13:27:49.915-07:00'ನಾರಾಯಣನಿಗೆ ಇಲೆಕ್ಟಾನಿಕ್ ಅಂಗಡಿವರು ಮೀಸೆ ಕತ್ತರಿಸಿದ್ದಾರೆ'......<p></p><p>'ನಾರಾಯಣನಿಗೆ ಇಲೆಕ್ಟಾನಿಕ್ ಅಂಗಡಿವರು ಮೀಸೆ ಕತ್ತರಿಸಿದ್ದಾರೆ'.....ಹೀಗೊಂದು ಕಾಗದ ಬಂದಿತ್ತು ನೋಡಿ ನನಗೆ. ಅದರಲ್ಲಿ 'ಇಲೆಕ್ಟ್ರಾನಿಕ್' ಎಂದು ಇರಲಿಲ್ಲ, 'ಇಲೆಕ್ಟಾನಿಕ್' ಎಂದೇ ಇತ್ತು, 'ಅಂಗಡಿಯವರು' ಎನ್ನುವದು 'ಅಂಗಡಿವರು' ಆಗಿತ್ತು ... ಸುಮಾರು 20 ವರ್ಷದ ಕೆಳಗೆ ಬಂದಿದ್ದ ಕಾಗದ ಅದು. ಕಾಗದ ಬರೆದಾತ ಬಾಲ್ಯ ಕಾಲದ ಗೆಳೆಯ. ಅದುವೇ ಅವನು ನನಗೆ ಬರೆದ ಮೊದಲ, ಕೊನೆಯ ಪತ್ರ. ನೆನಪಿನ ಪುಟದಲ್ಲಿ ಅವನ ಹೆಸರು ಎಂದೋ ಮಸುಕಾಗಿ ಹೋಗಿದೆ. ಎಷ್ಟೋ ಸಾರಿ ನನಗೆ ಅನಿಸಿದ್ದಿದೆ, ಕಡೇ ಪಕ್ಷ ಈ ನೆನಪುಗಳು ಎಂದು ಮಾಸುತ್ತವೆ, ಅವುಗಳ ಎಕ್ಸ್ಪೈರಿ ಡೇಟ್ ಯಾವತ್ತು ಅನ್ನೋದು ಏನಾದರೂ ಗೊತ್ತಾದರೆ ಅದರ ಮೇಲೆ ಕುಳಿತ ಕಸ ಕೊಡವಿ ಮತ್ತೊಂದಿಷ್ಟು ದಿನ ಜತನ ಮಾಡಬಹುದೇನೋ ಎಂದು. ಇರಲಿ ಬಿಡಿ, ಅಂದಹಾಗೆ ಕಾಗದ ಬರೆದ ಆ ನನ್ನ ಗೆಳೆಯನ ಹೆಸರು ಯೋಗೀಶ ಅಂತಲೋ ಅಥವಾ ಪ್ರಹ್ಲಾದ ಎಂದೋ ಇರಬೇಕು. ನಿಖರವಾಗಿ ಹೇಳಲಾರೆ. ಆತ ನನ್ನ ಬದುಕಿನ ಆವರಣವನ್ನು ಎಂದೂ ತಟ್ಟದ ಊರೊಂದರ ಒಂದು ಕಾಲದ ಗೆಳೆಯ ಅಂಥ ಹೇಳಬಹುದು. </p><p>ಹೌದು, ಆ ಊರು ನನ್ನನ್ನು ಎಂದಿಗೂ ತಟ್ಟಲಿಲ್ಲ. ಕೆಲ ಕಾಲ ನಾವು ಆ ಊರಿನಲ್ಲಿದ್ದೆವು ಎನ್ನುವುದಷ್ಟೇ ನಿಜ. ಅಲ್ಲಿಗೆ ಹೋದ ಮೊದಲ ದಿನದಿಂದಲೂ ಆ ಊರು ನನಗೆ ಸೇರಲಿಲ್ಲ. ವೈರುಧ್ಯ ಅಂದರೆ ಆ ಊರಿನ ಶಾಲೆಗೆ, ಅಲ್ಲಿನ ಸಹಪಾಠಿಗಳಿಗೆ ನಾನು ಬಹುವಾಗಿ ಸೇರಿಬಿಟ್ಟಿದ್ದೆ. ಬುದ್ಧಿವಂತ ಎನ್ನುವ ವಿಶೇಷಣ ಬೇರೆ! ನನ್ನ ಬಗ್ಗೆ ನನಗೆ ಸ್ವಲ್ಪ ಕೆಡುಕೆನಿಸಿದರೂ ನಿಮಗೆ ಒಂದು ವಿಷಯ ಹೇಳಲೇ ಬೇಕು, ಆ ನನ್ನ ಸಹಪಾಠಿಗಳಿಗೆ ನಾನು ಎಷ್ಟು ಹಿಡಿಸಿದ್ದೆ ಅಂದರೆ ಮುಂದೆ ಆ ಊರು ಬಿಟ್ಟು ದೂರದ ನಗರಕ್ಕೆ ಬಂದ ಮೇಲೂ ನನ್ನ ಶಾಲೆಯ ವಿಳಾಸವನ್ನು ಹೇಗೋ ಪತ್ತೆ ಮಾಡಿದ ಅವರೆಲ್ಲಾ ನನಗೆ ಕಾಗದವನ್ನು ಬರೆದೇ ಬರೆದರು... ಒಂದು ನೂರೈವತ್ತು ಇನ್ನೂರು ಕಾಗದಗಳಾದರೂ ಆಗ ನನಗೆ ಬಂದಿರಬಹುದು. ಮೇಲೆ ಹೇಳಿದ ಕಾಗದ ಸಹ ಹಾಗೇ ಬಂದಿದ್ದು. ಆದರೆ, ಆ ಊರು ನನಗೆ ಎಷ್ಟು ಹಿಡಿಸಿರಲಿಲ್ಲ ಎಂದರೆ ಹಾಗೆ ಬಂದ ಒಂದೇ ಒಂದು ಕಾಗದಕ್ಕೂ ನಾನು ಉತ್ತರಿಸಿರಲಿಲ್ಲ.. </p><p>ನಮ್ಮ ತಂದೆಯ ವರ್ಗವಾದ ಕಾರಣ ನಾವು ಆ ಊರಿಗೆ ಹೋಗಿ ನೆಲೆಸಿದ್ದೆವು. ಆ ಊರಿಗೆ ಹೋದ ಮೊದಲನೇ ದಿನದಿಂದಲೂ ನಾನು ಕಾತರಿಸಿದ್ದು ಆ ಊರನ್ನು ಬಿಡುವ ಕೊನೆಯ ದಿನಕ್ಕಾಗಿ ಎನ್ನಬಹುದು. ಅತ್ತ ಹಳ್ಳಿಯೂ ಅಲ್ಲದ ಪಟ್ಟಣವೂ ಅಲ್ಲದ ಊರು ಅದು. </p><p>ಅದೇಕೋ ತೀರಾ ಎಳೆವೆಯಲ್ಲಿ ನನ್ನ ಮನಸ್ಸಿಗೆ ಹಳ್ಳಿಗಳು ಹಿಡಿಸಿರಲೇ ಇಲ್ಲ. ಅದು ಅಕಾರಣವೋ, ಸಕಾರಣವೋ ಗೊತ್ತಿಲ್ಲ. ಈಗ ಹಿಂತಿರುಗಿ ನೋಡಿದರೆ ಬಹುಶಃ ನನ್ನನ್ನು ಹಳ್ಳಿಗಳಿಗೆ ರಿಲೇಟ್ ಮಾಡಿಕೊಳ್ಳುವ ಬದುಕಿನ ಯಾವೊಂದು ಆವರಣವೂ ಆ ಹೊತ್ತು ನನ್ನಲ್ಲಿ ಇರಲಿಲ್ಲ ಅನಿಸುತ್ತೆ. ಸಕರ್ಾರಿ ನೌಕರಿಯ ವಗರ್ಾವಗರ್ಿಗೆ ಸಿಕ್ಕು ಯಾವುದೋ ಒಂದು ಹಳ್ಳಿಗೆ ಹೋದ ಕುಟುಂಬ ನಮ್ಮದು. ಆಗಿನ ನನ್ನ ಮನಸ್ಥಿತಿ ಅನುಸರಿಸಿ ಹೇಳುವುದಾದರೆ ನಾನು ಹುಟ್ಟಿದ ಪಟ್ಟಣದಿಂದ ಕನಸಿದ ಬೆಂಗಳೂರಿಗೆ ಸಾಗಿ ಬರುವ ಹಾದಿಯಲ್ಲಿ ಅನಿವಾರ್ಯವಾಗಿ ಬಂದ ಸ್ಟಾಪ್ ಅದು. ಬೇಕೆಂದರೂ, ಬೇಡವೆಂದರೂ ಕೆಲ ಹೊತ್ತು ಇದ್ದು ಸಾಗಲೇ ಬೇಕಾದ ಇಷ್ಟವಾಗದ ತಂಗುದಾಣ. ಬಹುಶಃ ಈ ಎಲ್ಲ ಕಾರಣಗಳಿಂದಲೇ ಇರಬಹುದು ಇಂದು ನಾನು ಹಳ್ಳಿಗಳ ಬಗ್ಗೆ ಮಾತನಾಡುವಾಗ ಹಳ್ಳಿಯ ಬದುಕಿನ ಚಿತ್ರಣ ಕಂಡೆ ಎಂದಷ್ಟೇ ಧೈರ್ಯವಾಗಿ ಹೇಳಬಲ್ಲೆನೇ ಹೊರತು, ಹಳ್ಳಿಯ ಬದುಕನ್ನೇ ಕಂಡೆ ಎನ್ನುವ ಅಪ್ರಾಮಾಣಿಕತೆ ತೋರಲಾರೆ. ಅಷ್ಟೇ ಅಲ್ಲ ನನಗೆ ಭಾರತದ ಹಳ್ಳಿಗಳ ಆತ್ಮವೇನಾದರೂ ಅಲ್ಪಸ್ವಲ್ಪ ದಕ್ಕಿದ್ದರೆ ಅದು ನಗರಗಳಲ್ಲಿ ಸಿಕ್ಕ ಕೆಲ ಪ್ರಫುಲ್ಲ ದೇಸಿ ಮನಸ್ಸುಗಳಿಂದಲೇ ಹೊರತು ನನ್ನ ಬಾಲ್ಯಕಾಲದ ಹಳ್ಳಿ ವಾಸ್ತವ್ಯದಿಂದ ಅಲ್ಲ. </p><p>ನಮ್ಮ ಕುಟುಂಬ ಕೆಲಕಾಲ ಆ ಹಳ್ಳಿಯಲ್ಲೇ ಇದ್ದರೂ ನನ್ನ ಬದುಕ ಸುತ್ತವರೆದಿದ್ದು ಮಾತ್ರ ಹಳ್ಳಿಯ ಪರಿಸರವಲ್ಲ; ಬದಲಿಗೆ ಟಿವಿ, ಪೇಪರ್, ಮ್ಯಾಗಝೀನ್ಸ್ ಮತ್ತು ಪುಸ್ತಕಗಳು. ಅವುಗಳ ಮೂಲಕ ನನ್ನ ಮನೋಭಿತ್ತಿಯಲ್ಲಿ ರೂಪು ತಳೆದ ಒಂದು "ಸಿಂಥೆಟಿಕ್' ಪ್ರಪಂಚ. ಇನ್ನೂ ಮುಂದುವರೆದು ಹೇಳುವುದಾದರೆ ಮಾಧ್ಯಮಗಳ ಮೂಲಕ ಕಂಗಳಲ್ಲಿ ಬೆರಗು ಹುಟ್ಟಿಸಿ, ಲೈಫ್ಸ್ಟೈಲ್ ಬಗೆಗೆ ಎಳೆವೆಯಲ್ಲೇ ಕಾನ್ಷಿಯಸ್ ಮಾಡಿದ ಕನ್ಸೂಮರಿಸಂನ ಚಿನ್ನಾರಿ ಕನಸುಗಳ ಪ್ರಪಂಚ. </p><p>ಇತ್ತೀಚೆಗೆ ಗೆಳೆಯ ಸಂತೋಷನೊಡನೆ ಮಾತನಾಡುವಾಗ ಇದನ್ನೇ ಹೇಳಿದ್ದೆ. ಕನ್ಸೂಮರಿಸಂ ಪ್ರವರ್ತಕ ಕಂಪೆನಿಗಳು ಹೇಗೆ ಯಾವುದೇ ಸಕರ್ಾರಕ್ಕಿಂತ ಚೆನ್ನಾಗಿ ಮೀಡಿಯಾಗಳನ್ನು ಬಳಸಿ ಅನೇಕ ತಲೆಮಾರುಗಳ ತಲೆ ಬೋಳಿಸಿ ತಾವು ಉತ್ಪಾದಿಸುವ ವಸ್ತುಗಳ ನೇರಕ್ಕೆ ನಮ್ಮಲ್ಲಿ ಕನಸು ಬಿತ್ತಿ ಬಿಟ್ಟವಲ್ಲಾ ಎಂದು. ಇರಲಿ, ಆ ಬಗ್ಗೆ ಇನ್ನೊಮ್ಮೆ ಸುದೀರ್ಘ ಬರೆಯುವ ಇರಾದೆ ಇದೆ. ಈಗ ಮತ್ತೆ ಆ ಊರಿನ ನೆನಪಿಗೆ ಬರುತ್ತೇನೆ. </p><p>ನಾನು ಆ ಹಳ್ಳಿಯಲ್ಲಿ ಇದ್ದಷ್ಟೂ ದಿನ ಒಂದೇ ಒಂದು ದಿನಕ್ಕೂ ಒಂದು ಕೋಗಿಲೆಯ ಕೂಗನ್ನಾಗಲಿ, ಹಕ್ಕಿಗಳ ಕಲರವವನ್ನಾಗಲಿ ಕಿವಿ ಆನಿಸಿ ಕೇಳಿದ ನೆನಪೇ ಇಲ್ಲ. ನಮಗೆ ಒಂದು ಪ್ರಪಂಚ ಅಥವಾ ಪರಿಸರದ ಬಗ್ಗೆ ಬೇಸರ ಹುಟ್ಟಿದರೆ ಹೇಗೆ ನಾವು ಅದರಿಂದ ವಿಮುಖರಾಗುತ್ತೇವೆ, ಹೇಗೆ ಅದನ್ನು ನಮ್ಮೊಳಗೆ ಬಿಟ್ಟುಕೊಳ್ಳದೆ ಇರುತ್ತೇವೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ... ಆಗ ದೂರದರ್ಶನದಲ್ಲಿ ಪ್ರತಿ ಶುಕ್ರವಾರ ಪ್ರಣಯ್ ರಾಯ್ರ "ವಲ್ಡರ್್ ದಿಸ್ ವೀಕ್' ಕಾರ್ಯಕ್ರಮ ಬರುತ್ತಿತ್ತು. ಪ್ರಣಯ್ ಈಗಲೂ ಎನ್ಡಿಟಿವಿಯಲ್ಲಿ ಅವರ ಆಗಿನ ಬುಲೆಟಿನ್ಗಳ ಕ್ಲಿಪಿಂಗ್ಸ್ ಬಳಸಿಕೊಳ್ಳುವುದನ್ನು ನೀವು ಗಮನಿಸಿರಬಹುದು. ಆಗ ಡಿಡಿಯಲ್ಲಿ ಭಿತ್ತರವಾಗುತ್ತಿದ್ದ 'ಸುರಭಿ', 'ವಲ್ಡರ್್ ದಿಸ್ ವೀಕ್', 'ರಂಗೋಲಿ' ಇವೆಲ್ಲಾ ಜಗತ್ತಿನೆಡೆಗಿನ ನಮ್ಮ ಬೆಳಕಿಂಡಿಗಳೇ ಆಗಿದ್ದವು. ಇರಲಿ, ಆಲಿಸಿದ್ದರೆ ಆ ಹಳ್ಳಿಯಲ್ಲಿ ಕೋಗಿಲೆ ಕೂಗು ಕೇಳಲಿಕ್ಕೆ ಭರಪೂರ ಅವಕಾಶ ಇತ್ತು. ಕೋಗಿಲೆ ಕೂಗು ಕೇಳುತ್ತಲೇ ಒಂದಿಷ್ಟು ಸ್ವರಗಂಧವನ್ನೂ ಪಡೆಯಬಹುದಿತ್ತೇನೋ.. ಆದರೆ ನನಗೆ ಕೋಗಿಲೆ ಕೂಗಿಗಿಂತ ಪ್ರಣಯ್ರ ಇಂಗ್ಲಿಷ್ನಲ್ಲೇ ಆಸಕ್ತಿ... ತಪ್ಪೋ ಸರಿಯೋ ಒಂದು ಮಟ್ಟಕ್ಕಂತೂ ಇಂಗ್ಲಿಷ್ ಓದುತ್ತಿದ್ದೆ. ಆದರೆ ಆಗಿನ್ನೂ ಆ ಭಾಷೆಯನ್ನು ಅಥರ್ೈಸಿಕೊಳ್ಳುವ ಲಯ ನನಗೆ ದಕ್ಕಿರಲಿಲ್ಲ. "ವಲ್ಡರ್್ ಆಫ್ ಸ್ಪೋಟ್ರ್ಸ' ಅನ್ನು ಕ್ರೀಡಾ ಜಗತ್ತು ಎಂದು ಅಥರ್ೈಸದೆ 'ಜಗತ್ತೇ ಕ್ರೀಡೆ' ಎಂದೆಲ್ಲಾ 'ವಿಫುಲವಾಗಿ' ಅರ್ಥ ಮಾಡಿಕೊಳ್ಳುವಷ್ಟು ಭಾಷಾ ಜ್ಞಾನ! ಒಮ್ಮೆ ಇದನ್ನೇ ಅಪ್ಪನ ಮುಂದೆಯೂ ವಾದಿಸಿ ಉಗಿಸಿಕೊಂಡಿದ್ದೆ.. ಹೋಗಲಿ ಬಿಡಿ, ಅದೇನು ಅಂಥ ದಡ್ಡತನ ಅಲ್ಲ. ಆಗೆಲ್ಲಾ ಬೆಂಗಳೂರಿನ ಬಹುತೇಕ ಕಾನ್ವೆಂಟ್ ಶಾಲಾ ಮಕ್ಕಳ ಇಂಗ್ಲಿಷ್ ಸಹ, "ಮಿಸ್ ಹಿ ಈಸ್ ಪಿಂಚಿಂಗ್ ಮಿಸ್' ಎನ್ನುವುದನ್ನು ಮೀರಿರಲಿಲ್ಲ. </p><p>ಇಂಥ ಬೇಡದ ಊರಿನಲ್ಲಿ, ತಿರಸ್ಕಾರದ ಮನಸ್ಥಿತಿಯಲ್ಲಿ ಇದ್ದ ನನಗೆ ಒಬ್ಬ ಗೆಳೆಯ ಸಿಕ್ಕ. ಆ ಕಾಲಘಟ್ಟದ ನನ್ನ ಆತ್ಮೀಯ ಗೆಳೆಯ ಎನ್ನಲು ಅಡ್ಡಿಯಿಲ್ಲ. ನಾರಾಯಣ ಅವನ ಹೆಸರು. ಬೇಡದ ಊರಲ್ಲಿ ಸಾಕು ಸಾಕೆನಿಸುವಷ್ಟೇ ಇದ್ದ ಗೆಳೆಯರಲ್ಲಿ ಇವನು ಆತ್ಮೀಯ. ಆ ಊರಿನಲ್ಲಿ ಶಾಲೆಗೆ ಹೋದ ಮೊದಲ ದಿನವೇ ನಾನು ಈ ನಾರಾಯಣನನ್ನು ಕಂಡಿದ್ದೆ. ಶಾಲೆಯ ಬೆಳಗಿನ ಬೆಲ್ ಹೊಡೆದಾಗ ಪ್ರಾರ್ಥನೆಗೆಂದು ಶಾಲಾ ಮೈದಾನದಲ್ಲಿ ನೆರೆದಿದ್ದ ಹುಡುಗರ ಸಾಲನ್ನು ಈತ ಸರಿ ಮಾಡುತ್ತಿದ್ದ. ಸಾಲು ಡೊಂಕಾಗದಂತೆ ಮುತುವಜರ್ಿವಹಿಸಿ, ವಿದ್ಯಾಥರ್ಿಗಳ ನಡುವೆ ಸಮಾನ ಅಂತರ ಇರುವಂತೆ ಭುಜದ ಮೇಲೆ ಕೈ ಇರಿಸಿ ಅಳತೆ ತೆಗೆದುಕೊಳ್ಳಲು ಹೇಳಿ ನಿಲ್ಲಿಸುತ್ತಿದ್ದ. ವಯಸ್ಸು, ದೇಹ ಎರಡರಲ್ಲೂ ದೊಡ್ಡವನಾಗಿದ್ದ ಅವನನ್ನು ಮೊದಲಿಗೆ ನೋಡಿ ನಾನು ಯಾರೋ ಏಳನೇ ಕ್ಲಾಸಿನ ಹುಡುಗನೋ ಅಥವಾ ಶಾಲೆಯಲ್ಲಿ ಕೆಲಸಕ್ಕೆಂದು ಇಟ್ಟುಕೊಂಡಿರುವ ಅಟೆಂಡರ್ ಕೆಲಸದ ಹುಡುಗನೋ ಇರಬೇಕು ಅಂದುಕೊಂಡಿದ್ದೆ. </p><p>ಪ್ರಾರ್ಥನೆ ಅಂದಿದ್ದಕ್ಕೆ ನೆನಪಾಯಿತು ನೊಡಿ, ಅಂದು ಮೊದಲ ದಿನವೇ ಪ್ರಾರ್ಥನೆ ನಡೆವಾಗ ಬೇರೆ ಬೇರೆ ಸಾಲಿನಲ್ಲಿ ನಿಂತಿದ್ದ ಮೂರ್ನಾಲ್ಕು ಹುಡುಗ ಹುಡುಗಿಯರು ಧಬಾರ್, ಧಭಾರ್ ಎಂದು ಬಿದ್ದಿ ದ್ದರು. ಅದೊಂದು ನಿತ್ಯ ಕರ್ಮವಾಗಿದ್ದ ಕಾರಣವೇ ಇರಬೇಕು, ಮೇಷ್ಟ್ರುಗಳು ಸಹ ತಲೆ ಕೆಡೆಸಿಕೊಳ್ಳದೆ ಸುಮ್ಮನೆ ಇದ್ದರು. "ಜಯ ಭಾರತ ಜನನಿಯ ತನುಜಾತೆ'ಯನ್ನು ರಾಗವಾಗಿ ಹಾಡಿ, "ಯಾಕುಂದೇಂದು ತುಷಾರಹಾರಧವಳಾ' ಹೇಳಿ ರಾಷ್ಟ್ರಗೀತೆ ಮುಗಿಸುವ ಹೊತ್ತಿಗೆ ಹುಡುಗ ಹುಡುಗಿಯರು ಹೀಗೆ ಅಲ್ಲಲ್ಲೇ ಧಬಾರನೇ ಬೀಳುವುದು ಸಾಮಾನ್ಯವಾಗಿತ್ತು. ಈ ದೃಶ್ಯ ನಾನು ಹೈಸ್ಕೂಲ್ ಮುಗಿಸುವವರೆಗೂ ಮುಂದುವರೆದೇ ಇತ್ತು ಬಿಡಿ. ಈಗಲೂ ಇರಬಹುದೇನೋ! ಹಳ್ಳಿ ಹೈಕಳು, ಮೆಟ್ರೋ ಮಕ್ಕಳು ಎನ್ನುವ ಭೇದವಿಲ್ಲದೆ ಹೀಗೆ ಬೆಳಗಿನ ಹೊತ್ತು ಶಾಲಾ ಮಕ್ಕಳು ಕುಸಿಯಲು ಕಾರಣ ಬರೋಬ್ಬರಿ 20 ನಿಮಿಷ ಮೀರಿ ಇರುತ್ತಿದ್ದ ಪ್ರಾರ್ಥನೆ... ಇರಲಿ ಈಗ ನಾರಾಯಣನ ಕಥೆಗೆ ಬರೋಣ. </p><p>ಅವತ್ತು ಮೊದಲ ದಿನ ಅವನನ್ನು ನೋಡಿದೆನಲ್ಲಾ, ಅನಂತರ ಒಂದು ಮಜಾ ವಿಷಯ ನಡೆಯಿತು. ನಾನು ಎಷ್ಟನೇ ಕ್ಲಾಸಿಗೆ ಸೇರಿದ್ದೇನೆ ಎನ್ನುವುದನ್ನು ಸರಿಯಾಗಿ ವಿಚಾರಿಸಿಕೊಳ್ಳದ ಮೇಷ್ಟ್ರೊಬ್ಬರು ನನ್ನನ್ನು ಮತ್ತಾವುದೋ ತರಗತಿಯ ಸಾಲಿನಲ್ಲಿ ನಿಲ್ಲಿಸಿಬಿಟ್ಟಿದ್ದರು. ಪ್ರಾರ್ಥನೆ ಮುಗಿದ ನಂತರ ಅದೇ ಸಾಲಿನಲ್ಲಿ ಸಾಗಿ ಕ್ಲಾಸ್ ರೂಮಿನಲ್ಲಿ ಕುಳಿತೆ. ಐದು ಹತ್ತು ನಿಮಿಷ ನಂತರ ಮೇಷ್ಟ್ರು ಸಹ ಬಂದರು. ಅಟೆನ್ಡೆನ್ಸ್ ಹಾಕಿದರು. ಅದರಲ್ಲಿ ನನ್ನ ಹೆಸರು ಇರಲಿಲ್ಲ. ನಾನು ಆಗಷ್ಟೇ ಶಾಲೆಗೆ ಸೇರಿದ್ದ ಕಾರಣ ನನ್ನ ಹೆಸರು ರೆಜಿಸ್ಟರ್ನಲ್ಲಿ ಇಲ್ಲ ಎಂದುಕೊಂಡೆ. ನಮ್ಮ ತಂದೆಯ "ಸಕರ್ಾರಿ ವಲಸೆಯ' ಫಲಾನುಭವಿಯಾಗಿದ್ದ ಕಾರಣ ಅಷ್ಟು ಹೊತ್ತಿಗಾಗಲೇ ನನಗೆ ಎರಡು ಶಾಲೆ ನೋಡಿದ್ದ ಅನುಭವ ಇತ್ತು. </p><p>ರೆಜಿಸ್ಟರ್ ಮುಗುಚಿ ಹಾಕಿದ ಮೇಷ್ಟ್ರು ಬೋಡರ್್ ಮೇಲೆ ಸೀಮೆಸುಣ್ಣವನ್ನು ಕುಟ್ಟುವಂತೆ ಮಾಡುತ್ತಾ ಪಟಪಟನೆ ಪಾಠದ ಹೆಸರು, ತರಗತಿ ಎಲ್ಲವೂ ಬರೆದರು. ಆಗ ತಿಳಿಯಿತು ನೋಡಿ ಅದು ನಾನು ಓದಬೇಕಿದ್ದ ತರಗತಿ ಅಲ್ಲ ಎಂದು. ಕೂಡಲೇ ಅಧ್ಯಾಪಕರಿಗೆ ತಡವರಿಸದೆ ನನ್ನ ಪುರಾಣವೆಲ್ಲಾ ಹೇಳಿಕೊಂಡೆ. ಜವಾನನನ್ನು ಕರೆದ ಅವರು ನಾನು ಹೋಗ ಬೇಕಿದ್ದ ತರಗತಿಯ ಕೊಠಡಿಗೆ ಬಿಡುವಂತೆ ಹೇಳಿದರು. ಆತ ನನ್ನನ್ನು ಕರೆದೊಯ್ದು ಮತ್ತೊಂದು ಕೊಠಡಿಗೆ ಬಿಟ್ಟ. ಅದರ ಒಳಗೆ ಯಾರೂ ಅಧ್ಯಾಪಕರು ಕಾಣಲಿಲ್ಲ. ಸ್ವಲ್ಪ ಮುಜುಗರದಿಂದಲೇ ಹಿಂದು ಮುಂದು ಮಾಡಿ ಒಳಗೆ ಹೆಜ್ಜೆ ಇಟ್ಟೆ, ಅಲ್ಲಿ ನೋಡಿದರೆ ಮತ್ತದೇ ದೊಡ್ಡ ಹುಡುಗ. ಅಲ್ಲಿದ್ದ ಹುಡುಗರೆಲ್ಲಾ ನನ್ನ ವಯಸ್ಸಿನವರೇ ಆದರೂ ಇವನೊಬ್ಬ ಮಾತ್ರ ಗಢವನ ಹಾಗೆ ಇದ್ದ. ಮಾನಿಟರ್ ಆಗಿದ್ದ ಕಾರಣ ಜಲಬಾಧೆ ತೀರಿಸಲು ಹೋಗಿದ್ದ ಮೇಷ್ಟ್ರ ಅನುಪಸ್ಥಿತಿ ತುಂಬಿದ್ದ ಎನ್ನುವುದು ಆಮೇಲೆ ಅರಿವಿಗೆ ಬಂತು ಬಿಡಿ. ಮೇಷ್ಟ್ರು ಬಂದ ಮೇಲೆ ಅವನೇ ಅವರಿಗೆ "ಸಾರ್, ಹೊಸ ಹುಡುಗ ಬಂದಿದ್ದಾನೆ' ಎಂದೂ ಹೇಳಿದ. ನನ್ನ ಪೂವರ್ಾಪರ ಕೇಳಿಕೊಂಡ ಮೇಷ್ಟ್ರು ಮುಂದಿನ ಸಾಲುಗಳು ತುಂಬಿದ್ದ ಕಾರಣ ಆ ದೊಡ್ಡ ಹುಡುಗನ ಪಕ್ಕವೇ ಹಿಂದೆ ಕೂರಲು ಹೇಳಿದರು. ಆಮೇಲೆ ಒಂದಷ್ಟು ಹೊತ್ತು ಪಾಠ ಮಾಡಿ, ಏನೋ ಬರೆಯಲು ಕೊಟ್ಟು ಹೊರಗೆ ಮೆಟ್ಟಿಲ ಮೇಲೆ ನಿಂತು ಯಾರೊಟ್ಟಿಗೋ ಹರಟ ತೊಡಗಿದರು. </p><p>ಆಗ ಸಮಯ ನೋಡಿ ಆ ದೊಡ್ಡ ಹುಡುಗ ಪಿಸುಗುಟ್ಟುತ್ತಾ ಕೇಳಿದ, 'ಅಪ್ಪಿ, ನಿನ್ನ ಹೆಸರೇನು?' ಅದುವರೆಗೆ ಗಡವನಂತೆ ಕಾಣುತ್ತಿದ್ದ ಹುಡುಗ ಅನಿರೀಕ್ಷಿತ ಪ್ರಶ್ನೆ ಮೂಲಕ ಸ್ನೇಹಕ್ಕೆ ಶುಭಾರಂಭ ಮಾಡಿದ್ದ. ಅಲ್ಲಿಂದಾಚೆಗೆ ಆ ಹಳ್ಳಿಯಲ್ಲಿ ಇದ್ದಷ್ಟೂ ದಿನ 'ಅಪ್ಪಿ, ಅಮ್ಮಿ' ನನ್ನ ಕಿವಿಗೆ ಒಗ್ಗಿ ಹೋಯಿತು. ಹೀಗೆ ಹೆಸರು ಕೇಳಿದವನು ಮುಂದುವರೆದು ನನ್ನ ಹುಟ್ಟೂರು, ಅಪ್ಪನ ಕೆಲಸ ಎಲ್ಲವೂ ವಿಚಾರಿಸಿಕೊಂಡ. ಆದರೆ ತನ್ನ ಬಗ್ಗೆ ಮಾತ್ರ ಹೆಚ್ಚು ಹೇಳದೆ ಕೇವಲ ಹೆಸರು ಮಾತ್ರ ಹೇಳಿದ. ಅವನ ತಂದೆ, ತಾಯಿ ಬಗ್ಗೆ ಏನೂ ಹೇಳಲಿಲ್ಲ. ವಯಸ್ಸಿನಲ್ಲಿ ಬರೋಬ್ಬರಿ ನಾಲ್ಕು ವರ್ಷ ದೊಡ್ಡವನಿದ್ದ. ನನ್ನ ಅಣ್ಣನ ವಾರಿಗೆಯವನು. ನಾರಾಯಣನ ತಂದೆ, ತಾಯಿ ತೀರಿಕೊಂಡಿದ್ದರು. ಹಾಗಾಗಿ ಅಣ್ಣನ ಮನೆಯಲ್ಲಿದ್ದ. ತಂದೆ ತಾಯಿ ಹೋದ ನಂತರ ಅಣ್ಣಂದಿರು, ಅಕ್ಕಂದಿರು, ಸಂಬಂಧಿಕರ ಮನೆಹೀಗೆ ಬೇರೆ ಬೇರೆ ಊರಿನಲ್ಲಿ ಮೂರ್ನಾಲ್ಕು ವರ್ಷ ಇದ್ದನಂತೆ. ಹಾಗಾಗಿಯೇ ನಾಲ್ಕು ವರ್ಷ ಶಾಲೆಯಿಂದಲೂ ದೂರವಿದ್ದ ಎಂದು ಮುಂದೆ ಕೆಲ ದಿನದಲ್ಲಿ ಹೇಳಿಕೊಂಡ. ಅವನ ಅಣ್ಣಂದಿರಲ್ಲಿ ಒಬ್ಬರು ಮುತುವಜರ್ಿ ವಹಿಸಿದ ಕಾರಣ ಮತ್ತೆ ಶಾಲೆಯತ್ತ ಮುಖ ಮಾಡಿದ್ದ. </p><p>ಅರ್ಧದಲ್ಲಿಯೇ ಶಾಲೆ ಬಿಟ್ಟಿದ್ದ ಪರಿಣಾಮ ಮತ್ತದೇ ತರಗತಿಗೆ ಸೇರಿದ್ದ. ಪರಿಣಾಮ ನನ್ನ ಅಣ್ಣನ ಜೊತೆ ಇರಬೇಕಾದವನು ನನ್ನ ಜೊತೆಗಿದ್ದ. ನನ್ನ ಅಣ್ಣನ ಗೆಳೆಯರನೇಕರು ಇವನನ್ನು ನೋಡಿ ನಿನ್ನ ತಮ್ಮನ ಫ್ರೆಂಡು ನಂ ಜೊತೆ ಇರಬೇಕಿತ್ತು, ಆದ್ರೆ ಸ್ಕೂಲ್ ಬಿಟ್ಟ ಕಾರಣ ಈಗಲೂ ಅದೇ ತರಗತಿಯಲ್ಲೇ ಇದ್ದಾನೆ ಎಂದು ಆಡಿಕೊಳ್ಳುತ್ತಿದ್ದರಂತೆ. ಅದನ್ನು ಅಣನ್ಣೇ ಹೇಳಿದ್ದ. ಆದರೆ ನನಗಂತೂ ನಾರಾಯಣ ಸಿಕ್ಕಿದ್ದು ಖುಷಿಯೇ ಆಗಿತ್ತು. ನನ್ನ ವಯಸ್ಸಿನ ಹುಡುಗರು ನನಗೆ ಯಾವತ್ತೂ ಕಿರಿಕಿರಿ ಅನಿಸುತ್ತಿದ್ದರು. ವರ್ತನೆಯಲ್ಲಿ ಅವರು ನನಗಿಂತ ತುಂಬಾ ಚಿಕ್ಕವರಂತೆ ಭಾಸವಾಗುತ್ತಿತ್ತು. ಬಹುಶಃ ನಾನು ನನ್ನ ವಯಸ್ಸು ಮೀರಿ ಆಲೋಚಿಸುತ್ತಿದ್ದುದು, ಓದಿಕೊಂಡಿದ್ದುದು ಇದಕ್ಕೆ ಕಾರಣವಿರಬಹುದು. ಹಾಗಾಗಿ ನಾರಾಯಣ ನನಗೆ ಹತ್ತಿರವಾದ, ಅವನಿಗೂ ಅವನ ವಯಸ್ಸಿಗೆ ತಕ್ಕಂತೆ ಯೋಚಿಸುವ ಮನಸ್ಸೊಂದು ಬೇಕಿತ್ತು. ಪ್ರಪಂಚದ ಬಗ್ಗೆ ಅವನಿಗಿದ್ದ ವಿಪರೀತ ಕುತೂಹಲವನ್ನು ತಣಿಸುವ ಜೊತೆಗಾರರು ಬೇಕಿತ್ತು. ಅವನ ವಯಸ್ಸಿಗಿಂತ ಹಿಂದಿನ ತರಗತಿಯಲ್ಲಿ ಇದ್ದುದರಿಂದ ಸಹಜವಾಗಿಯೇ ಅವನಿಗೆ ತರಗತಿಯ ಪಾಠ, ಲೆಕ್ಕ ಬೇಸರ ಹುಟ್ಟಿಸುತ್ತಿತ್ತು. ತರಗತಿಯಲ್ಲಿ ಓದು, ಬರಹವನ್ನು ಕ್ಷಣಾರ್ಧದಲ್ಲಿ ಮಾಡಿ ಮುಗಿಸುತ್ತಿದ್ದ. ಆದರೂ ಅವನಿಗೆ ಶಹಭಾಷ್ಗಿರಿ ಏನೂ ಸಿಗುತ್ತಿರಲಿಲ್ಲ. ಕಾರಣ ಮತ್ತದೇ - ವಯಸ್ಸು. ನಾನು ಅವನಿಗಿಂತಲೂ ಬೇಗ ಓದು ಬರಹ ಮುಗಿಸುತ್ತಿದ್ದೆ. ಅವನಿಗಿಂತ ಸ್ಪಷ್ಟವಾಗಿ ಓದುತ್ತಿದ್ದೆ. ಹಾಗಾಗಿ ಅವನಿಗೆ ನಾನು ಕುತೂಹಲಕಾರಿಯಾಗಿಯೂ, ಸವಾಲಾಗಿಯೂ ಕಾಣತೊಡಗಿದ್ದೆ. ಅಡೊಲೊಸೆನ್ಸ್ ಸಮೀಪವಿದ್ದ ಅವನ ತವಕ ತಲ್ಲಣಗಳನ್ನು ಹೊರತು ಪಡಿಸಿದರೆ ಉಳಿದಂತೆ ಪಠ್ಯ, ಪಠ್ಯೇತರ ವಿಷಯಗಳಲ್ಲಿ ನನ್ನ ಬುದ್ಧಿಮತ್ತೆ ಅವನಿಗೆ ಹಿಡಿಸಿತ್ತು. </p><p>ಸಮಯ ಸರಿಯಿತು, ಪರೀಕ್ಷೆಗಳು ಮುಗಿದು ಮೈದಾನಕ್ಕೆ ಬೇಸಿಗೆ ಇಳಿಯಿತು. ತಾತ, ಅಜ್ಜಿ ಊರು, ಕಸಿನ್ಸ್ಗಳೊಡನೆ ಕಾರುಬಾರು ಎಲ್ಲವೂ ಸರಸರನೆ ಕಳೆಯಿತು. ಕಡೆಗೆ ಬೇಡ ಬೇಡವೆನಿಸಿದರೂ ಶಾಲೆಯ ಬಾಗಿಲು ತೆಗೆದೇ ತೆಗೆಯಿತು. ಆದರೆ ಈ ಬಾರಿ ನಾರಾಯಣ ಮತ್ತು ನಾನು ಒಂದೇ ಸೆಕ್ಷನ್ನಲ್ಲಿ ಇರಲಿಲ್ಲ. ಕಂಬೈಂಡ್ ಕ್ಲಾಸ್ ಆದಾಗ ಮಾತ್ರ ಒಟ್ಟಿಗೆ ಸೇರುತ್ತಿದ್ದೆವು. ಆಗೆಲ್ಲಾ ಅವನು ನನಗಾಗಿ ಜಾಗ ಹಿಡಿದಿಟ್ಟಿರುತ್ತಿದ್ದ. ಉಳಿದಂತೆ ಬೆಲ್ ಹೊಡೆಯುವುದಕ್ಕೂ ಮುನ್ನ ಮತ್ತು ಸಂಜೆ ಅಟ ಆಡಲು ಬಿಟ್ಟಾಗ ಮಾತ್ರ ಹರಟೆ ಹೊಡೆಯಲು ಸಮಯ ಸಿಗುತ್ತಿತ್ತು. ಹೀಗಿರುವಾಗ ನಾರಾಯಣನಿಗೆ ಒಂದು ದಿನ ಅವನ ಕ್ಲಾಸ್ ಟೀಚರ್, "ನಾರಾಯಣ ಇನ್ನು ಮೇಲೆ ನೀನು ಪ್ಯಾಂಟ್ ಹಾಕಿಕೊಂಡು ಬಾ' ಅಂದರಂತೆ. ಅದಾದ ಮೇಲೆ ಅವನು ಯಾವತ್ತೂ ನಿಕ್ಕರ್ ಹಾಕಿಕೊಂಡು ಶಾಲೆಗೆ ಬರಲೇ ಇಲ್ಲ. ವರ್ಷವಿಡೀ ತನ್ನ ಬಳಿ ಇದ್ದ ಎರಡೇ ಎರಡು ಪ್ಯಾಂಟ್ ಹಾಕಿದ್ದ. ಅದಾಗಲೇ ಅವನು ಎತ್ತರದಲ್ಲಿ ಮೇಷ್ಟ್ರುಗಳ ಸಮಕ್ಕೆ ಇದ್ದ. ಕೆಲವರಿಗಿನ್ನ ಉದ್ದವೇ ಇದ್ದ. ಗುಂಗರು ಕೂದಲು, ಚಿಗುರು ಮೀಸೆಯಿದ್ದ ಆಕರ್ಷಕ ಮುಖ. </p><p>ಈ ನಡುವೆ ಕೆಲ ಹುಡುಗರು ನನಗೆ ಅವನ ಬಗ್ಗೆ ವಿಪರೀತ ಕಂಪ್ಲೇಂಟ್ ಹೇಳಲು ಶುರು ಮಾಡಿದರು. ಮತ್ತೆ ಕೆಲವರು ಅವನನ್ನು ವಿಪರೀತವಾಗಿ ಹಚ್ಚಿಕೊಂಡರು. ನಾರಾಯಣ ಪೋಲಿ ಆಗಿದ್ದಾನೆ, ಕ್ಲಾಸ್ಗೆ ಚಕ್ಕರ್ ಹೊಡೆಯುತ್ತಾನೆ ಎನ್ನುವುದು ಅವನ ಬಗ್ಗೆ ಕಂಪ್ಲೇಂಟ್ ಹೇಳುತ್ತಿದ್ದವರ ಮಾತಾಗಿತ್ತು.. ಅವರ ಕಣ್ಣಿಗೆ ನಾರಾಯಣ ಪೋಲಿ ಆಗಲು ಕಾರಣ ವಿಪರೀತ ಎನಿಸುವಷ್ಟು ಸಿನಿಮಾ ನೋಡುತ್ತಿದ್ದುದು, ವಿಪರೀತ ಸ್ಟೈಲ್ ಮಾಡುತ್ತಿದ್ದುದು, ಊರೂರು ಸುತ್ತುತ್ತಿದ್ದುದು, ಎಲ್ಲಕ್ಕಿಂತ ಹೆಚ್ಚಾಗಿ ಹುಡುಗಿಯರ ಅಂದ ಚೆಂದದ ಬಗ್ಗೆ ರಸವತ್ತಾಗಿ ಮಾತನಾಡುತ್ತಿದ್ದುದು, ಆದರೆ ಇದೇ ಕಾರಣಕ್ಕೆ ಅವನು ಮತ್ತೆ ಅನೇಕರಿಗೆ ರೋಚಕವಾಗಿದ್ದ.. ನನಗಂತೂ ಎರಡೂ ವಿಶೇಷ ಎನಿಸಲಿಲ್ಲ. ಏಕೆಂದರೆ ನನಗೆ ಅವನ ತವಕಗಳು ಪೂರ್ಣವಾಗಿ ಅಲ್ಲದಿದ್ದರೂ ಅರೆಬರೆಯಾಗಿಯಾದರೂ ಅರ್ಥವಾಗಿತ್ತು... </p><p>ನಾರಾಯಣ ನನ್ನನ್ನು ಮಾತನಾಡಿಸಲೆಂದೇ ಕೆಲವೊಮ್ಮೆ ಹುಡುಕಿಕೊಂಡು ಬರುತ್ತಿದ್ದ. ವಿಪರೀತ ಸಿನಿಮಾ ಹುಚ್ಚು ಇದ್ದ ಅವನು ಶಿವಣ್ಣನ ಕಟ್ಟಾ ಅಭಿಮಾನಿ, ಆಗಿನ್ನೂ ಶಿವರಾಜ್ ಕುಮಾರ್ ಇನ್ನಿಂಗ್ಸ್ ಶುರು ಆಗಿ ನಾಲ್ಕೈದು ವರ್ಷ ಆಗಿತ್ತು ಅಷ್ಟೇ. ಶಿವಣ್ಣನಂತೆ ಹೇರ್ ಸ್ಟೈಲ್ ಬಿಡುತ್ತೇನೆ ಅಂತಾ ನಾರಾಯಣ ಗುಂಗುರು ಕೂದಲನ್ನು ಉದ್ದ ಬಿಟ್ಟ. ಪ್ರತಿ ವಾರವೂ ತಪ್ಪದೆ ಸಿನಿಮಾ ನೋಡಲೆಂದು ಸಿಟಿಗೆ ಹೋಗುತ್ತಿದ್ದ. ಹಿಂದಿ ಸಿನಿಮಾಗಳ ಬಗ್ಗೆ ಅವನಿಗೆ ಒಳ್ಳೆ ಹುಚ್ಚಿತ್ತು. ಆಗಂತೂ ಬಾಲಿವುಡ್ ನಲ್ಲಿ ಪ್ರೇಮಪರ್ವ. 'ಮೈನೆ ಪ್ಯಾರ್ ಕಿಯಾ', 'ದಿಲ್', 'ಕಯಾಮತ್ ಸೇ ಕಯಮಾತ್ ತಕ್', 'ಅಶಿಕಿ' ಹೀಗೆ ಬಿಸಿರಕ್ತದ ಪ್ರೇಮ ಕಾವ್ಯಗಳದ್ದೇ ಅಬ್ಬರ. ಹಾಗಾಗೇ ಆಗಿನ ದೊಡ್ಡವರ ಬಾಯಲ್ಲಿ ಅದು, "ಯುವ ಪೀಳಿಗೆ ಕುಲಗೆಟ್ಟು ಹೋಗಲು ಸಂಕ್ರಮಣ ಕಾಲ'. ಇದು ಸಾಲದೆಂಬಂತೆ ರವಿಚಂದ್ರನ್ನ ಸಾಲು ಸಾಲು ಸಿನಿಮಾಗಳು. ಹೀಗಿರುವಾಗ ಹದಿಹರೆಯಕ್ಕೆ ಬಿದ್ದಿದ್ದ ನಾರಾಯಣ ಹೇಗೆ ತಾನೆ ನಾಲ್ಕು ವರ್ಷದ ಹಿಂದಿನ ತರಗತಿಯಲ್ಲಿ ಕುಳಿತು ನೀರಸವೆನಿಸುವ ಪಾಠ ಕೇಳಿಯಾನು ಹೇಳಿ? ಊರೂರು ಅಲೆದು ಕಂಡಾಪಟ್ಟೆ ಹುಡುಗಿಯರ ಸೌಂದರ್ಯವನ್ನೆಲ್ಲಾ ಕಣ್ತುಂಬಿಕೊಂಡು ಬಂದು ವಣರ್ಿಸಲು ಸಾಧ್ಯವಾಗದೆ ತೊಳಲಾಡುತ್ತಿದ್ದ ಅವನಿಗೆ ಹದಿನೈದೊಂದಲ ಮಗ್ಗಿ ಎಷ್ಟೆಲ್ಲಾ ಬೇಸರ ಹುಟ್ಟಿಸಿರಬೇಡ!! </p><p>ಮೈನೆ ಪ್ಯಾರ್ ಕಿಯಾದಲ್ಲಿ ಸಲ್ಮಾನ್ ಖಾನ್ ಹೇಳುವ, "ಮಾ.. ವೋ ಮ್ಯಾಕ್ಸ್ಸಿ, ಮಿನಿ, ಮಿಡಿ, ಚೂಡಿ' ಎನ್ನುವ ಡೈಲಾಗಂತೂ ಅವನಿಗೆ ಯದ್ವಾತದ್ವ ಇಷ್ಟ ಆಗಿತ್ತು. ಅದೆಷ್ಟು ಸಾರಿ ಈ ಡೈಲಾಗ್ಅನ್ನು ಹೊಡೆಯುತ್ತಿದ್ದನೋ... "ಮೈನೆ ಪ್ಯಾರ್ ಕಿಯಾ' ಸಿನಿಮಾವನ್ನು ನಾನು ನೋಡಿದ್ದು ತಡವಾಗಿಯೇ ಆದರೂ ನಾರಾಯಣ ಈ ಡೈಲಾಗ್ ಮಾತ್ರ ಯಾವತ್ತೂ ನನ್ನೊಳಗೆ ಉಳಿದಿತ್ತು... </p><p>ಮುಂಚೆ ಎಲ್ಲಾ ನಾರಾಯಣ ನನ್ನನ್ನು ಇರಾನ್ - ಇರಾಕ್ ವಾರ್ ಬಗ್ಗೆ ಹೇಳು, ಅಮೆರಿಕ - ಇರಾಕ್ ವಾರ್ ಬಗ್ಗೆ ಹೇಳು, ಇಸ್ರೇಲ್ ಬಗ್ಗೆ ಹೇಳು, ಕುವೈತ್ ಬಗ್ಗೆ ಹೇಳು, ಸ್ಕಡ್ ಮಿಸಾಯಿಲ್, ಪೇಟ್ರಿಯಾಟ್ ಮಿಸಾಯಿಲ್ ಬಗ್ಗೆ ಹೇಳು ಅಂತೆಲ್ಲಾ ಸದಾ ಕಾಡುತ್ತಿದ್ದ. ವಿಪರೀತ ಮ್ಯಾಗ್ಜೈನ್ಗಳನ್ನು ಓದುತ್ತಿದ್ದ ನನ್ನ ಬಳಿ ನನ್ನ ವಯಸ್ಸಿಗೆ ನಿಲುಕುವಷ್ಟು ಮಾಹಿತಿ ಧಾರಳವಾಗಿಯೇ ಇರುತ್ತಿತ್ತು. ಇರಲಿ, ಹೀಗೆ ಗಲ್ಫ್ ವಾರ್ ಸುತ್ತಲೇ ಸುತ್ತುತ್ತಿದ್ದ ನಾರಾಯಣ ಅದ್ಯಾವಾಗ ಮ್ಯಾಕ್ಸಿ, ಮಿನಿ, ಮಿಡಿ, ಚೂಡಿಗೆ ಪಕ್ಷಾಂತರವಾದನೋ ಗೊತ್ತಾಗಲೇ ಇಲ್ಲ. ಈ ವಿಷಯಗಳಲ್ಲಿ ಅವನ ಜ್ಞಾನದಾಹ ತಣಿಸುವ ಯಾವುದೇ ಸಿದ್ಧತೆ ನನಗಿರಲಿಲ್ಲ. ಹಾಗಾಗೇ ಅವನು ಮುಂದೆ ಲವ್ಲೆಟರ್ಗಳ ಬರೆಯುವಾಗ ನನ್ನನ್ನು ಯಾವತ್ತೂ ಒಂದು ಮಾತು, ಸಣ್ಣದೊಂದು ಸಲಹೆ ಕೂಡಾ ಕೇಳಿರಲಿಲ್ಲ. ಮೊದಲೆಲ್ಲಾ ಕೇವಲ ಲವ್ ಲೆಟರ್ ಬರೆಯೋದು ಮಾತ್ರವೇ ಮಾಡುತ್ತಿದ್ದ ಅವನು ಆಮೇಲೆ ಅದನ್ನು ಕೊಡುವುದಕ್ಕೂ ಶುರುವಿಟ್ಟ. </p><p>ಕಡೆಗೆ ಈ ಚಟುವಟಿಕೆಗಳು ಮತ್ತೂ ಮುಂದುವರೆದು ಅವನು ಪ್ರಣ(ಳ)ಯಾಂತಕ ಕಾರ್ಯಕ್ರಮ ಹಮ್ಮಿಕೊಳ್ಳುವ ವೇಳೆಗೆ ಆ ಬೇಡದ ಊರಿಗೆ ಬೈ ಬೈ ಹೇಳುವ ಕಾಲ ನನಗೆ ಬಂದಿತ್ತು. ನಗರಕ್ಕೆ ಸ್ಥಳಾಂತರವಾಗುವ ಸಂಭ್ರಮದಲ್ಲಿ ಹಾಗೂ ಊರು ಬಿಡುವ ಕಾತರದಲ್ಲಿದ್ದ ನನಗೆ ಅವನನ್ನು ಭೇಟಿ ಮಾಡುವ ಅವಕಾಶ ಆಗಲಿಲ್ಲ. ಆ ಸಂಭ್ರಮದಲ್ಲಿ ಅವನಿಗೆ ಸಿಗುವುದು ಮುಖ್ಯ ಎಂದೂ ಅನಿಸಲಿಲ್ಲ. ಸಿಟಿ ಸೇರಿದ ಮೇಲಂತೂ ಹೊಸ ಸ್ಕೂಲು, ಹೊಸ ಫ್ರೆಂಡ್ಸ್ ಅದಕ್ಕಿಂತ ಮುಖ್ಯವಾಗಿ ನಾನು ಯಾವತ್ತೂ ಬಯಸಿದ್ದ "ಸೊಫೆಸ್ಟಿಕೇಟೆಡ್ ಲೈಫ್ ಸ್ಟೈಲ್' ನಡುವೆ ನಾರಾಯಣ ಅರೆಕ್ಷಣವೂ ಕಾಡಲಿಲ್ಲ. ಆಗ ಬಂದಿದ್ದೇ, "ನಾರಾಯಣನಿಗೆ ಇಲೆಕ್ಟಾನಿಕ್ ಅಂಗಡಿವರು ಮೀಸೆ ಕತ್ತರಿಸಿದ್ದಾರೆ. ಅವನು ಈಗ ಸ್ಕೂಲ್ಗೆ ಬರುತಾ ಇಲ್ಲ. ಮೇಷ್ಟ್ರು ಬೈದರು' ಅನ್ನೋ ಕಾಗದ. ಬೆಳೆದು ನಿಂತಿದ್ದ ನಾರಾಯಣನಿಗೆ ಆ ಊರಿನಲ್ಲಿದ್ದ ಇಲೆಕ್ಟ್ರಾನಿಕ್ ಅಂಗಡಿಯಲ್ಲಿನ ಕೆಲ ಪಡ್ಡೆಗಳು ಪುಸಲಾಯಿಸಿ, ಒಪ್ಪದಿದ್ದಾಗ ಒತ್ತಾಯದಿಂದಲೇ ಶೇವ್ ಮಾಡಿದ್ದರು. ಮೀಸೆ, ಗಡ್ಡ ಶೇವ್ ಮಾಡಿಕೊಂಡು ನಾರಾಯಣ ಮಿಡಲ್ಸ್ಕೂಲ್ನ ತನ್ನ ತರಗತಿಗೆ ಹೋಗಿದ್ದ. ಉರಿದು ಬಿದ್ದ ಮೇಷ್ಟ್ರು ಉಗಿದಿದ್ದರು. ಮೊದಲೇ ಮುಜುಗರ ಅನುಭವಿಸುತ್ತಿದ್ದ ನಾರಾಯಣನಿಗೆ ಮತ್ತೂ ಮುಜುಗರ ಹೆಚ್ಚಿ ಅಲ್ಲಿಂದಾಚೆಗೆ ಅವನು ಶಾಲೆಗೆ ಹೋಗುವುದನ್ನೇ ಬಿಟ್ಟ. </p><p>ನನ್ನನ್ನು ನೋಡಲೆಂದೇ ಒಂದೆರಡು ಬಾರಿ ಸಿಟಿಗೂ ಬಂದಿದ್ದ ನಾರಾಯಣ ಆಗ ಈ ಎಲ್ಲ ವಿಷಯವನ್ನು ವಿವರಿಸಿದ್ದ.. ಪ್ರೈವೇಟ್ ಆಗಿ ಎಸ್ಎಸ್ಎಲ್ಸಿ ಎಕ್ಸಾಮ್ ತಗೋತೀನಿ ಅಂತಾನೂ ಹೇಳಿದ್ದ. ಮತ್ತೊಂದು ಸಾರಿ ಬಂದವನು ಹೋಟೆಲೊಂದರಲ್ಲಿ ರವಾ ಇಡ್ಲಿ ಕೊಡಿಸಿ, ಕೋಕ್ ಕುಡಿಸಿ ಏಳನೇ ಕ್ಲಾಸಿನಲ್ಲಿ ಓದುತ್ತಿದ್ದ ನನ್ನನ್ನು, "ನೀನು ಬೇಗ ಒಳ್ಳೇ ಹುಡುಗಿ ನೋಡಿ ಲವ್ ಮಾಡ್ಬಿಡು' ಎಂದು ಹೇಳಿ ಹೋಗಿದ್ದ. ನಾನು ಸಹ ಆಗ ಪ್ರಾಮಾಣಿಕವಾಗಿಯೇ ಅಂದುಕೊಂಡಿದ್ದೆ ನಾನು ಲವ್ ಮಾಡೋವಾಗ ನಾರಾಯಣನಿಗೆ ಖಂಡಿತ ಹೇಳೇ ಹೇಳುತ್ತೇನೆ ಅಂಥಾ..! ಆದರೆ, ಅದೇಕೋ ಅವನ ಆಸೆ ಅಷ್ಟು ಬೇಗ ಈಡೇರಲಿಲ್ಲ...!! </p><p>ಮುಂದೆ ಯಾವತ್ತೋ ಒಂದು ದಿನ ನಾನು ಆಯ್ದ ಕೆಲ ಆತ್ಮೀಯ ಗೆಳೆಯರಿಗೆ ಕಾಫೀ ಡೇ ಒಂದರಲ್ಲಿ ಪಾಟರ್ಿ ಕೊಟು,್ಟ "ಆಮ್ ಇನ್ ಲವ್' ಅಂತ ಉದ್ವೇಗದಿಂದ ಹೇಳೋ ಸಂದರ್ಭದಲ್ಲಿ ನಾರಾಯಣ ಅಪ್ಪಿತಪ್ಪಿಯೂ ಜ್ಞಾಪಕ ಬರಲಿಲ್ಲ. </p><p>ತಲೆತುಂಬಾ ಹುಡುಗಿಯರ ಕನಸು ಕಾಣುತ್ತಿದ್ದ ನಾರಾಯಣ, ಕೆರೆ ಬಳಿ ಮುಸ್ಸಂಜೆ ಮಬ್ಬಲ್ಲಿ 'ಕೇಳಿ' ನಡೆಸಿದ್ದುದನ್ನು ಮುಚ್ಚು ಮರೆ ಇಲ್ಲದೆ ಹೇಳಿಕೊಂಡಿದ್ದ. ಹಾಲು ತರಲೆಂದು ನೆರೆ ಮನೆಗೆ ಹೋಗಿ ಅಲ್ಲಿ ಇವನ ಮೇಲೆ ಯಾವತ್ತೂ ಕಣ್ಣಿಟ್ಟಿದ್ದ ಹುಡುಗಿಯೊಬ್ಬಳನ್ನು ಚುಂಬಿಸಿ ಬಂದಿದ್ದನ್ನೂ ವಿವರಿಸಿದ್ದ.. ಬುದ್ಧಿವಂತನಾದರೂ ಮುಜುಗರದಿಂದ ಓದಲಾಗದೆ, ಅಪ್ಪ ಅಮ್ಮನನ್ನು ಬಾಲ್ಯದಲ್ಲೇ ಕಳೆದುಕೊಂಡ ನಾರಾಯಣ, ಈಗಲೂ 'ಮಾ... ವೋ ಮ್ಯಾಕ್ಸಿ, ಮಿಡಿ, ಮಿನಿ' ಅನ್ನೋ ಡೈಲಾಗ್ ನೆನಪಿಸ್ಕೋತಾನಾ?..... </p><p></p><p></p><p></p>nataraju vhttp://www.blogger.com/profile/10918535028693209943noreply@blogger.com0tag:blogger.com,1999:blog-8437289649338017610.post-90149492716297210912010-02-24T14:40:00.000-08:002010-08-03T13:28:50.512-07:00ನೆನಪೆಂಬ ಶಿವನ ಎಕ್ಕದ ಹೂ....ಕಾಲ ಸರಿದಂತೆ ಒಂದಷ್ಟು ವ್ಯಕ್ತಿಗಳು ಕೇವಲ ನೆನಪುಗಳಾಗಿ ಮಾತ್ರವೇ ಮನೋಭಿತ್ತಿಯಲ್ಲಿ ಉಳಿದುಬಿಡುತ್ತಾರೆ. ಆ ಕೆಲ ಮುಖಗಳನ್ನು ನಾವು ಮತ್ತೆಂದೂ ನೊಡುವ, ಹುಡುಕುವ ಗೋಜಿಗೇ ಹೋಗುವುದಿಲ್ಲ. ಬದುಕ ಭಿತ್ತಿಯಲ್ಲಿ ಅವರು, ನಾವು ಅಲ್ಲಲ್ಲೇ ಇದ್ದರೂ ಮತ್ತಿನ್ನೆಂದೂ ಒಬ್ಬರನ್ನೊಬ್ಬರು ಕಾಣುವ ಪ್ರಯತ್ನ ಮಾಡುವುದಿಲ್ಲ. ಹುಡುಕಿದರೆ ಅವರು ಕೈಗೆ ಸಿಗುತ್ತಾರೆ, ಆದರೆ ಅದೇಕೋ ದಿಕ್ಕು ಬದಲಿಸಿದ ಬದುಕು ಮಾತ್ರ ನೆನಪುಗಳು ನೆನಪುಗಳಾಗೇ ಇರಲಿ ಬಿಡು ಎಂದು ನಮ್ಮನ್ನು ಕರೆದೊಯ್ದು ಬಿಡುತ್ತದೆ. ಒಂಥರಾ ಹೊಟ್ಟೆ ತುಂಬಿದ ಮೇಲೆ ಎಲೆಯಲ್ಲಿ ಉಳಿದ ಕಡೆಯ ತುತ್ತಿನಂತೆ... ಅದರ ಬಗ್ಗೆ ತಿರಸ್ಕಾರವಿರುವುದಿಲ್ಲ ಆದರೆ ನಾ ಹೊರಲಾರೆ ಅಂತಾ ಹೊಟ್ಟೆ ಹೇಳಿರುತ್ತದೆ. ಬಹುಶಃ ಕಾಲನ 'ಋಣ' ತೀರಿಸಲು ಬದುಕು ಅಲ್ಲಲ್ಲೇ ಬಿಟ್ಟ 'ಭಾರ' ಇದು ಇರಬಹುದು... ಹೀಗೆ ಮಗ್ಗಲು ಬದಲಿಸಿದ ಬದುಕಿನ ತಟ್ಟೆಯಲ್ಲಿ ಉಳಿದ ಅವರು, ಆ ವ್ಯಕ್ತಿಗಳು ದೂರದವರೇನೂ ಆಗಿರುವುದಿಲ್ಲ. ಜೀವನದ ಒಂದು ಘಟ್ಟದಲ್ಲಿ ಜೊತೆಗಾರರಾಗಿ ಸಂಭ್ರಮಿಸಿದ್ದವರೇ ಆಗಿರುತ್ತಾರೆ... ಆದರೆ ತನ್ನನ್ನೇ ತಾನು ಕಟ್ಟಿಕೊಳ್ಳುತ್ತಾ, ಹುತ್ತಗಟ್ಟುತ್ತಾ ಸಾಗುವ ಬದುಕು ಮತ್ತೆಲ್ಲೋ ಮುಖ ಮಾಡಿರುತ್ತದೆ. ಆ ಪಯಣದಲ್ಲಿ ಒಂದೊಂದೇ ಹೆಜ್ಜೆ ಸರಿದಂತೆ ಜೊತೆಗಾರರಾಗಿದ್ದವರು ವ್ಯಕ್ತಿಗಳಾಗಿ ಕಾಣಿಸತೊಡಗುತ್ತಾರೆ, ವ್ಯಕ್ತಿಗಳು ನಿಧಾನವಾಗಿ ಕೆಲ ಘಟನೆಗಳಾಗಿ ಸಾಂದ್ರಗೊಳ್ಳುತ್ತಾರೆ, ಆಮೇಲೆ ಘಟನೆಗಳೂ ಕರಗಿ ನೆನಪುಗಳು ಉಳಿಯುತ್ತವೆ. ಬದುಕು ಒಂದು ಹಂತ ಮುಟ್ಟಿ ಮಗ್ಗಲು ಬದಲಾಯಿಸಲು ಹೊರಟಾಗ ಆ ನೆನಪುಗಳು ಸಹ ಹತ್ತಿಯ ಎಳೆಯಂತೆ, ಎಕ್ಕದ ಗಿಡ ಗಾಳಿಗೆ ಹಾರಿಸಿದ ಬಿಳಿ ಪುಕ್ಕದಂತೆ ಹಗುರಾಗಿ ಅಲ್ಲಲೇ ಮನದ ಆಗಸದಲ್ಲಿ ಹಾರಿಕೊಂಡಿರುತ್ತವೆ.... ಅದರರ್ಥ ಆ ನೆನಪುಗಳು ಇನ್ನೇನು ಮನದ ಚಿಪ್ಪಿನಾಚೆ ಸಿಡಿದು ಅನಂತದಲ್ಲಿ ಲೀನವಾಗಲು ಸಜ್ಜು ಎಂದು.. ಅಟ್ಲೀಸ್ಟ್ ಆಗ ನಾವು ಕೊಂಚ ಅಲಟರ್್ ಆದರೆ ಅಂತಹ ನೆನಪುಗಳನ್ನು ಒಂದಿಷ್ಟು ದಾಖಲಿಸುವ ಪ್ರಯತ್ನ ಮಾಡಬಹುದೇನೋ... ಹೀಗೆ ಮಗ್ಗಲು ಬದಲಿಸಿದ ಬದುಕಿನ ಬೇಡದ ಕಾವು ಅಲ್ಲಲ್ಲೇ ಉಳಿದು ಆರಿ ಮರೆಯಾಗುವ ಮುನ್ನ ಆ ನೆನಪುಗಳಿಗೊಂದಿಷ್ಟು ಸೌಜನ್ಯ ವಿದಾಯ ಹೇಳಬೇಕಿದೆ.... ಹಾಗೆ ಮಾಡುವುದನ್ನು ನಾನು ಬದುಕಿನ ಋಣ ಅಂದುಕೊಂಡಿದ್ದೇನೆ.... ಎಂದೋ ಜೊತೆಗಾರರಾಗಿದ್ದು, ವ್ಯಕ್ತಿಗಳಾಗಿ, ನೆನಪುಗಳಾಗಿ ಕುಸಿದು ಇದೀಗ ಅಸ್ತಂಗತ ಕನಸಿನಂತೆ ಕಾಣುತ್ತಿರುವ ಆ ಒಂದು ಕಾಲದ ಕೆಲ ಗೆಳೆಯರ ನೆನಪಿನಲ್ಲಿ.....nataraju vhttp://www.blogger.com/profile/10918535028693209943noreply@blogger.com0tag:blogger.com,1999:blog-8437289649338017610.post-19351101581401389122010-02-01T14:32:00.000-08:002010-08-03T13:29:35.188-07:00ಆತ್ಮ ಆಗಸ ತಬ್ಬಿತ್ತು...ಆತ್ಮ ಆಗಸ ತಬ್ಬಿತ್ತು. ಅಲ್ಲೆ ಅತ್ತಿತ್ತ ಅಲೆಯಲು ಹೋಗಿದ್ದ ದಿಕ್ಕು ತಾನೇ ದಿಕ್ಕು ತಪ್ಪಿ ತಬ್ಬಿಬ್ಬಾಗಿ ಅದೇಕೋ ಅಕಾರಣ ಮೇಲೆ ನೋಡಿ ಮುದಗೊಂಡಿತು. ಆ ಬಿಳಿ ಆಗಸವ ಹಬ್ಬಿದ ನೀಲಿ ಆತ್ಮ ಒಲುಮೆ ಸುರಿದು ಹಬೆ ಹಬೆಯಾಗಿ ಮುದ್ದಾಡುವ ಹೊತ್ತಲ್ಲಿ ನನ್ನಂತ ದಿಕ್ಕಿಗೆ ಇನ್ನೆಲ್ಲಿ ದಿಕ್ಕು ದೆಸೆ ಎಂದು ಮರುಗಿತು. ಇರುವುದೆಲ್ಲ ಸೊನ್ನೆ, ಶೂನ್ಯ ಅಲ್ಲಿ. ತುಂಬಿ ನಿಂತ ಪೂರ್ಣ, ಪರಿಪೂರ್ಣ, ಪರಿನಿವರ್ಾಣ ಶೂನ್ಯ. ಮೇರೆ ಮೀರಿದ ಮೇಲೆ ಮೂಡುವ ರತಿ ಮದನ ಶೂನ್ಯ ಎಂದುಕೊಂಡಿತು..<br /><br />ಛೇ, ಇಲ್ಲೇನಿದೆ ಬರಿದೇ ದಿಕ್ಕು. ದಿಕ್ಕಿನ ಮುಂದೂ ದಿಕ್ಕು, ದಿಕ್ಕಿನ ಹಿಂದೂ ದಿಕ್ಕು; ದಿಕ್ಕು ದಿಕ್ಕಿಗೆ ಒಂದೊಂದು ದಿಕ್ಕು... ಥೂತ್ತೇರಿ, ನನ್ನ ಜನ್ಮಕ್ಕೆ ಜೀವನವೆಲ್ಲಾ ಒಂದು ಮೂಲೆಯಲ್ಲೇ ದಿಕ್ಕಾಗಿ ದಿಕ್ಕಿಲ್ಲದೆ ಕಳೆದು ಬಿಟ್ಟೆನಲ್ಲಾ ಎಂದು ಕೊರಗಿತು...ಅತ್ತ ಅಲ್ಲಿ ಮೇಲೆ ಬಣ್ಣಗಳಿಗೆ ಜೋಕಾಲಿ ಕಟ್ಟಿದ ಮದನ ಜೋಡಿ ವಿಲಾಸದ ಮೋಡಿಯಲಿ ತೇಲಿತ್ತು...<br />ಛೆ, ಛೇ ದಿಕ್ಕಾಗಿ ದಿಕ್ಕು ತಪ್ಪು ಬಾರದಿತ್ತು... ನನ್ನೊಳಗೆ, ಹೊರಗೆ ಹಬ್ಬಿಕೊಳ್ಳಬೇಕಿತ್ತು, ನನ್ನ ಅರಿವಿಗೂ ಬಾರದೆ ತುಂಬಿಕೊಳ್ಳಬೇಕಿತ್ತು ಎಂದು ಹಪಹಪಿಸಿತು.<br /><br />ಅತ್ತ ಆಗಸದಿ ಹಿತವಾಗಿ ತಿಂಗಳು ಸುರಿಯ ತೊಡಗಿತುnataraju vhttp://www.blogger.com/profile/10918535028693209943noreply@blogger.com0tag:blogger.com,1999:blog-8437289649338017610.post-52534726115767457662010-02-01T14:04:00.000-08:002010-02-01T14:11:44.013-08:00ಒಳಗೂ ಹೊರಗೂ ಭಾವ ಬೆರಗುಹರವಿದ ಆಗಸದಿ ಉಕ್ಕೇರಿದ ನೀಲಿ<br />ಹಾಗೇ ಕಳಚಿ ಕೆಳಗೆ<br />ಕಡಲಿಗೆ ಜಾರಿ<br />ತೆರೆತೆರೆಯಲಿ ಬೆರೆತು ನೊರೆನೊರೆಯಾಗಿ<br />ಬೆಳ್ಳಗೆ ಬೆಳಗು ಮೂಡಿಸಿದ<br />ಬೆರಗು<br /><br />ಕಡಲ ತೆರೆತೆರೆಯಲೂ<br />ತನ್ನ ತೊಳೆದುಕೊಂಡ ಬಿಳುಪು<br />ಮೇಲೆ ಖಾಲಿ ಖಾಲಿ, ನೀಲಿ ನೀಲಿ<br />ಆಗಸಕೆ ಚಿಮ್ಮಿ<br />ಕುಂಚದ ಬೀಸಂತೆ<br />ಗರಿಗರಿಯಾಗಿ ಮಿಂಚಾದ<br />ಬೆರಗು<br /><br />ಅಲ್ಲೇ ದೂರ ನಿಂತು<br />ಮನದ ಬಾಗಿಲು ಮುರಿದು<br />ಇಂಚಿಂಚೇ ಮನಸ ಒತ್ತುವರಿ ಮಾಡುವ<br />ಹುಡುಗ<br />ಮುದ್ದಾದಾದ ನಗೆ ಮೊಗೆದು<br />ಚಂದಮನ ತಿಂಗಳ ಸುರಿದು<br />ಕುಡಿ ಕಂಗಳಲೇ ಕಿಚ್ಚಿಟ್ಟು ತಣ್ಣಗಿರುವ<br />ಹುಡುಗಿ<br /><br />ಒಳಗೂ ಹೊರಗೂ ಭಾವ ಬೆರಗು...nataraju vhttp://www.blogger.com/profile/10918535028693209943noreply@blogger.com0tag:blogger.com,1999:blog-8437289649338017610.post-15612151980489662272009-12-25T12:10:00.000-08:002011-03-08T11:22:56.231-08:00ಕಾನನ ಮತ್ತು ಕಂಪುಚಾರಣ ನಡೆಸಿದಾತ ಕಾಲು ನೊಂದು ತಂಪು ನೆರಳ ಹೊಂಗೆಯಡಿ ಹಾಗೇ ಹಾಯಾದ. ತನ್ನೊಳಗೆ ತಾನೇ ಮುದಗೊಂಡು, ಮೌನ ಸಂತಸದಿ ಹದಗೊಂಡಿದ್ದ ಮರ ಅದು. ದಾರಿಹೋಕನ ಅಲೆದಾಟ ಕಂಡು, ಕರಗಿ ಬಾಷ್ಪ ಮಾಲೆ ಹರವಿತು. ಚಾರಣಿಗನ ಮೈ ಅಪ್ಪಿದ ಬಾಷ್ಪ ಮನಕೂ ಇಳಿಯಿತು. ಆತ್ಮ ತಂಪಲಿ ತೊಯ್ದು, ಎದೆಯಾಳದಿ ಬೆಚ್ಚನೆ ಹಾಡು ಅರಳಿತ್ತು. ಭಾವ ಬಿರಿದ ಹಾಡು.<br />ಕಣ್ಣು ಬಿಟ್ಟಾಗ ಅರ್ಥ ಸಿಕ್ಕಿತ್ತು. ಆತ್ಮ ತೊಳೆದು ಹುರುಪು ಮೂಡಿತ್ತು. ಎದೆಯೊಳಗೋ ಭಾವದ ಗುನುಗು. ಆದರೆ ಅದಕಿಲ್ಲ ಪದಗಳ ಸಖ್ಯ. ಹೇಗೆ ಬೆಸೆಯಲಿ ಭಾವಕು, ಪದಕೂ ನಂಟು ಎಂದು ಕುಳಿತ. ಮೌನದ ಮರ ಮಾತಾಡಿತು. ಅಲೆಯ ಬೇಡ ಹಾಗೇ ಸುಮ್ಮನೆ, ಅಲೆಯುವುದೇ ಆದರೆ ಕಾಲೊಳಗೆ ಹಾದಿ ತುಂಬಿಕೊ. ಹಾದಿ ಬದಿಯ ಬೀದಿ, ಬೀದಿ ಆಚೆಯ ಮರಗಿಡ, ಅದರಾಚೆಯ ನದಿ, ಝರಿ, ಬೆಟ್ಟ, ಗುಡ್ಡ ತುಂಬಿಕೋ. ಕಾಲು ತುಂಬಿದ ಮೇಲೆ ಮನವೂ ತುಂಬೀತು. ಮನ ತುಂಬಿದರೆ ಎದೆ ಭಾವಕೆ ಪದಗಳೂ ದಕ್ಕೀತು ಎಂದಿತು.<br />ಮತ್ತೆ ಹೊರಟ ಚಾರಣಿಗ. ಈ ಬಾರಿ ದಾರಿಯ ಮೇಲೆ ಕಾಲಿರಲಿಲ್ಲ. ದಾರಿಯೇ ಅವನ ಕಾಲಲ್ಲಿತ್ತು. ಹೆಜ್ಜೆಗಳಲಿ ಊರಿತ್ತು. ನದಿ, ತೊರೆ, ಬೆಟ್ಟ, ಗುಡ್ಡಗಳಿತ್ತು. ಆದರೂ ಎದೆಯ ಭಾವಕೆ ಪದದ ಬಂಧ ಬರಲಿಲ್ಲ. ಸುತ್ತಿ, ಸುಳಿದು ಮತ್ತೆ ಅದೇ ಮರದ ಬಳಿ ಬಂದ. ವಸಂತ ಸಮಯ. ಈ ಬಾರಿ ನಿದ್ದೆಗೆ ಜಾರಿದ ಅವನ ಮೇಲೆ ಬಾಷ್ಪದ ಜೊತೆ ಹೂಗಳ ಮಾಲೆ. ತಂಪಿನೊಟ್ಟಿಗೆ, ಕಂಪಿನ ದ್ರವ್ಯ.. ಎದೆಯೊಳಗಣ ಭಾವ, ಆತ್ಮಕ್ಕೂ ಹಬ್ಬಿತ್ತು. ಎದ್ದು ಕುಳಿತ. ದಟ್ಟೈಸಿದ ಭಾವಕೆ ಪದಗಳು ಕೊಡು ಮರವೇ ಎಂದ.<br />ಮರ ಹೇಳಿತು, ನನ್ನದು ಹೂವಿನ ಭಾಷೆ. ಪ್ರೀತಿ ದಟ್ಟೈಸಿದರೆ ಹೂ ಅರಳಿಸುವೆ, ಶೋಕವಾದರೆ ಎಲೆ ಉದುರಿಸುವೆ. ನಿನ್ನೊಳಗೆ ಇಳಿದರೆ ನಿನಗೂ ನಿನದೇ ಭಾಷೆ ಸಿಕ್ಕೀತು. ಭುವಿ ಸುತ್ತಿದ್ದು ಸಾಕು, ಮುದ್ದಾದ ಮನವೊಂದ ಅರಸಿ, ಆ ಮನದ ಬನದಿ, ಭಾವ ಕಾನನದಿ ಹೊರಡು ಚಾರಣ. ಆಗ ಪದ ದಕ್ಕೀತು ಎಂದಿತು.<br />ಹೊರಗಣ ಹಾದಿಯಲ್ಲ, ಒಳಗಣ ಹಾದಿ. ಮನದೊಳಗೆ ಇಳಿದು ನಡೆಸುವ ಚಾರಣ. ಅದುವೇ ರಮಣೀಯ- ಸೌಂದರ್ಯ. ಅದುವೇ ಅರ್ಥ - ತತ್ವ. ಅಲ್ಲಿದೆ ಬದುಕು. ಬದುಕಿನಾಚೆಯ ಒಲವ ಬದುಕು. ದಕ್ಕಿಸಿಕೊಂಡರೆ ಅದ, ಎದೆಯ ಭಾವಕೆ ಪದ...<br />ಚಾರಣಿಗ ಮತ್ತೆ ಹೊರಟ. ಕಾಲ ಮೇಲಲ್ಲ, ಒಲವಿನ ಮೇಲೆ.<br />ಒಲಿದಳು ದೇವಿ, ಪ್ರೇಮ ಪಲ್ಲವಿ.<br />ಎದೆ ತುಂಬಿದ ಭಾವಕೆ ಪದ ಬೆಸೆದಿತ್ತು. ಕಾವು ಕೂತಿದ್ದ ಹಾಡು ಕಡೆಗೂ ಹೊಮ್ಮಿತ್ತು.nataraju vhttp://www.blogger.com/profile/10918535028693209943noreply@blogger.com0tag:blogger.com,1999:blog-8437289649338017610.post-55898356642674532542009-11-06T09:53:00.000-08:002009-11-06T10:12:42.108-08:00ನೆಲವೆಂದರೆ ಅದು......ಇತ್ತೀಚೆಗೆ ಕೆಲ ಸೃಜನಶೀಲ ಗೆಳೆಯರು ಹೊರತಂದ `ನೆಲದ ಮಾತು' ಮಾಸಿಕದ ಮೊದಲ ಸಂಚಿಕೆಗೆ ಬರೆದ ಅಭಿನಂದನಾ ಬರಹ.<br />****************************************************************************************************************<br /><br />ಸೃಜನಶೀಲ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮ ಇಂದಿನ ತುರ್ತು. ಪ್ರಸಕ್ತ ನಾಡಿನ ಮುಂದಿರುವ ಗಂಭೀರ ಸವಾಲುಗಳನ್ನು ಸಮರ್ಥವಾಗಿ, ಸಮಗ್ರವಾಗಿ ಎದುರಾಗಬೇಕಾದರೆ ಇದು ಅತ್ಯಗತ್ಯ. ಶ್ರಮಿಕ ಪರಂಪರೆಯೇ ಪ್ರಮುಖವಾದ ನಮ್ಮ ಹಳ್ಳಿಗಳು ಆಧುನಿಕ, ಜಾಗತಿಕ ಆಕರ್ಷಣೆಯಲ್ಲಿ ಇಂದು ಆಂತರ್ಯದಲ್ಲಿ ಕುಸಿಯುತ್ತಿವೆ. ಒಂದೊಮ್ಮೆ ಉತ್ಪಾದಕ ಕೋಶಗಳಾಗಿ, ದೇಶದ ಅರ್ಥ ವ್ಯವಸ್ಥೆಯ ಬೆನ್ನೆಲುಬಾಗಿದ್ದ ಹಳ್ಳಿಗಳು ಮುದುಡಿವೆ. ಕೃಷಿ ವಲಯ ಅನಾಕರ್ಷಕವಾಗಿದೆ, ಪಾರಂಪರಿಕ ಗೃಹ ಕೈಗಾರಿಕೆಗಳು ನೇಪಥ್ಯ ಸರಿದಿವೆ.<br />ದೇಶವೆಂದರೆ ಅದು ಪ್ರಜ್ಞೆ, ಪರಿಸರದ ಸಮಷ್ಟಿ. ಸೊಗಡು, ಸ್ವಾವಲಂಬನೆ, ವೈವಿಧ್ಯತೆಯ ಸಂಚಯ. ಆದರೆ ಮಾರುಕಟ್ಟೆ<br />ನಿರ್ದೇಶಿತ ಆಧುನಿಕ ಬದುಕಿನಲ್ಲಿ ಎಲ್ಲವೂ ಏಕರೂಪ. ಗ್ರಹೀತಗಳು ಸಹ. ಹಾಗಾಗಿ ಇದು ಜೀವನಶೈಲಿಯಲ್ಲಿಯೂ ಪ್ರತಿಧ್ವನಿಸ ತೊಡಗುತ್ತದೆ.<br />ಸಮಾಜ, ಸಮುದಾಯದ ಗ್ರಹಿಕೆ, ಅಗತ್ಯತೆಯನ್ನು ಟಿವಿಯಲ್ಲಿ ಪದೇ ಪದೇ ಕಾಣಿಸಿಕೊಳ್ಳುವ 10 - 20 ಸೆಕೆಂಡುಗಳ ಒಂದು ಜಾಹೀರಾತು ಬದಲಿಸಬಲ್ಲದು. ಮಾರುಕಟ್ಟೆ, ಮಾಲ್ಗಳಿಗೆ ಜನತೆಯನ್ನು ಎಳೆತಂದು ಕೊಳ್ಳುವುದಕ್ಕೆ ಪ್ರಚೋದಿಸಬಲ್ಲದು. ಜಾಹಿರಾತಿನ ಮೂಲಕ ಯಾವುದೋ ವಸ್ತುವನ್ನು ಮಾರುಕಟ್ಟೆ ಮಾಡಲಾಗುತ್ತದೆ ಎನ್ನುವದು ಅರೆಬರೆ ಸತ್ಯ. ಬದಲಿಗೆ ಜಾಹೀರಾತಿನ ಮೂಲಕ ಆಕರ್ಷಕ ರೀತಿಯಲ್ಲಿ ಸಮಾಜ, ಸಮುದಾಯಗಳಿಗೆ ಒಂದು `ಗ್ರಹಿಕೆ' ಅಥವಾ `ಕಾನ್ಸೆಪ್ಟ್' ಅನ್ನು ಮಾರಾಟ ಮಾಡಲಾಗುತ್ತದೆ ಎನ್ನುವುದು ಗಂಭೀರ ಸತ್ಯ. ಇಂತಹ ಆಕರ್ಷಕ ಮಾಯಾರೂಪಿ ಗ್ರಹಿಕೆಗಳನ್ನು ಸೃಷ್ಟಿಸಲೆಂದೇ ನಮ್ಮ `ಬುದ್ಧಿವಂತ' ಮನಸ್ಸುಗಳು ಹಗಲಿರಳು ಶ್ರಮಿಸುತ್ತಿವೆ. ಇದಕ್ಕಾಗಿಯೇ ಲಕ್ಷಾಂತರ ರೂ ವೇತನ ಮಾಸಿಕ ಪಡೆಯುತ್ತಿವೆ.<br />ಈ ಎಲ್ಲ ಅಂಶವನ್ನು ಸಮೀಕರಿಸಿ ನೋಡಿದಾಗಲೇ ನಮಗೆ ಗ್ರಾಮೀಣ ಬದುಕು ಏಕೆ ಮತ್ತು ಹೇಗೆ ಕುಸಿಯುತ್ತಿದೆ ಎನ್ನುವುದು ಅರ್ಥವಾಗುವುದು. ಏಕರೂಪದ ಕೃಷಿ, ಮಾರುಕಟ್ಟೆ ನಿರ್ದೇಶಿತ ಬೆಳೆ ಈ ಎಲ್ಲವುಗಳ ಹೂರಣ ಬಯಲಾಗುವುದು. ಯಾವುದೇ ದೇಶ, ಸಮುದಾಯದ ಗ್ರಾಮೀಣ ಬದುಕಿನ ಸ್ವಾವಲಂಬನೆ ಮುರಿಯುವುದು ಕಾರ್ಪೊರೆಟ್ ವಲಯಕ್ಕೆ ಅಥವಾ ಎಂಎನ್ಸಿಗಳಿಗೆ ನಿಜಕ್ಕೂ ಏಕೆ ಮುಖ್ಯವಾಗಿತ್ತು ಎನ್ನುವುದು ಅರ್ಥವಾಗುವುದು.<br />ಹಳೆಯ ಕತೆಯನ್ನು ಮತ್ತೆ ಮತ್ತೆ ಹೇಳುವ ಅಗತ್ಯವಿಲ್ಲ. ಅವಘಡ ಸಂಭವಿಸಿದ್ದಾಗಿದೆ. ಗ್ರಾಮೀಣ ಬದುಕು ಮೂರಾಬಟ್ಟೆಯಾಗಿದೆ. ಹಳ್ಳಿಗರಿಗೂ ಹಳ್ಳಿಗಳು ಶಾಪವಾಗಿ ಗೋಚರಿಸಿವೆ. ನಗರಿಗರಿಗಂತೂ ಉಪೇಕ್ಷೆಯಾಗಿವೆ. ಮೆಟ್ರೋ ಸಂಸ್ಕೃತಿ ಎಲ್ಲರ ದುಡಿಮೆಗೂ ಶಕ್ಯಾನುಸಾರ ಅವಕಾಶ ಕಲ್ಪಿಸಿದೆ. ಹೊಲ ಉಳುವ ಕೈಗಳು ರಾತ್ರಿ ಪಾಳಿಯ ಕ್ಯಾಬ್ಗಳಲ್ಲಿ ಸ್ಟಿಯರಿಂಗ್ ಹಿಡಿಯುತ್ತಿವೆ. ಮನೆ, ಹೊಲ ನಿಭಾಯಿಸುತ್ತಿದ್ದ ಹೆಣ್ಣುಮಕ್ಕಳು ಗಾರ್ಮೆಂಟ್ಗಳಲ್ಲಿ ದಾರ ಪೋಣಿಸುತ್ತಿದ್ದಾರೆ.<br /><br />ಇಂತಹ ಕಟು ವಾಸ್ತವದಲ್ಲಿಯೇ ನಾವು ಅಭಿವೃದ್ಧಿ ಪತ್ರಿಕೋದ್ಯಮ ಇಂದಿನ ತುರ್ತು ಎನ್ನುತ್ತಿದ್ದೇವೆ. ಕುಸಿದ ಮನೆಯಲ್ಲಿ ಕುಳಿತಾಗ ಇಂತಹ ಮಾತುಗಳು ಬಲು ಜೊಳ್ಳು ಅನಿಸುತ್ತವೆ. ದೇಸಿ ಸಂಸ್ಕೃತಿ ಪುನರುತ್ಥಾನ ಎಂದರೆ ಖಾದಿ ನೇಯ್ದು ಬೆಂಗಳೂರಿನ ಪ್ರಮುಖ ಸ್ಥಳವೊಂದರಲ್ಲಿ ಅಂಗಡಿ ಬಾಡಿಗೆ ಹಿಡಿದು ಮಾರಾಟ ಮಾಡುವುದಲ್ಲ. ಎಲ್ಲ ಆಕರ್ಷಣೆಗಳಿಗೆ ಮುಕ್ತವಾಗಿಯೇ ಗ್ರಾಮೀಣ ಬದುಕನ್ನು ಹೊಸದಾಗಿ ಕಟ್ಟಲು ಪ್ರಯತ್ನಿಸುವುದು. ಆಕರ್ಷಣೆಯೊಟ್ಟಿಗೇ, ಅಗತ್ಯತೆಯ ಅರಿವು, ಸಂಯಮ ಕಲಿಸುವುದು. ಉತ್ಪಾದಕತೆಯಲ್ಲಿ ಸಹಭಾಗಿತ್ವ, ವಿಕೇಂದ್ರೀಕರಣ ಎರಡನ್ನೂ ಬೆರೆಸುವುದು. ಇಂತಹ ವೈದೃಶವನ್ನು ನಿಭಾಯಿಸಲು ಗ್ರಾಮೀಣ ಬದುಕಿಗೆ ಮಾತ್ರ ಸಾಧ್ಯ. ಏಕೆಂದರೆ ಗ್ರಾಮೀಣ ಬುದುಕು ಎಂದರೆ `ಒಳಗೊಳ್ಳುವಿಕೆ' ಎಂದೇ ಅರ್ಥ.<br />ನಿಜಕ್ಕೂ ಇಂದು ದೇಸಿ ಮನಸ್ಸುಗಳ ಮುಂದಿರುವ ಬಹು ದೊಡ್ಡ ಸವಾಲೆಂದರೆ, ಅದು ಹಳ್ಳಿ ಹಾಗೂ ಹಳ್ಳಿಗಾಡಿನ ಹೆಣ್ಣುಮಕ್ಕಳ ಪುನಶ್ಚೇತನ. ಮಾಜಿ ರಾಷ್ಟ್ರಪತಿ ಕಲಾಂರ `ಪುರ' ಮಾದರಿ ಅಭಿವೃದ್ಧಿ ಸೇರಿದಂತೆ ಸರ್ಕಾರದ ನೂರಾರು ಮಹತ್ವಾಕಾಂಕ್ಷಿ ಯೋಜನೆಗಳ ಗಂಭೀರ ಅನುಷ್ಠಾನ. ಇದರೊಟ್ಟಿಗೆ ಇಂತಹ ಯೋಜನೆಗಳು ಹೊಸದಾಗಿ ತಂದೊಡ್ಡುವ ಆಕರ್ಷಣೆ, ಸವಾಲುಗಳನ್ನು ಎದುರಾಗುವುದು ಕೂಡಾ. ಸೃಜನಶೀಲ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮ ಮುಖ್ಯವಾಗುವುದೇ ಇಲ್ಲಿ. ಜನರಲ್ಲಿ ವಿಶ್ವಾಸ, ವ್ಯವಸ್ಥೆಯಲ್ಲಿ ಸಂಚಲನ ಮೂಡಿಸಿ ಸರ್ಕಾರದ ಯೋಜನೆಗಳು ಫೈಲುಗಳಲ್ಲೇ ಕೊಳೆಯದೆ ಫಲಾನುಭವಿಗಳಿಗೆ ಮುಟ್ಟಿಸುವಲ್ಲಿ. ಅದೇ ರೀತಿ ಹೊಸ ನೀರು ತರುವ ಕಳೆ, ಕೊಳೆಯನ್ನು ಸಮರ್ಥವಾಗಿ ಎದುರಿಸುತ್ತಾ, ಅವಕಾಶಗಳ ಪ್ರವಾಹ ಹರಿಸುವಲ್ಲಿ.<br />ಇದೆಲ್ಲಕ್ಕಿಂತ ಮುಖ್ಯವಾಗಿ ಬಲು ದೊಡ್ಡ ಜವಾಬ್ದಾರಿಯೊಂದಿದೆ. ಅದು ಗ್ರಾಮೀಣ ಬದುಕು ಸಹ್ಯ, ಹಸನು ಎನಿಸುವ `ಗ್ರಹಿಕೆ' ಅಥವಾ `ಕಾನ್ಸೆಪ್ಟ್'ಗಳನ್ನು ಆಕರ್ಷಕವಾಗಿ ಜನರಿಗೆ ತಲುಪಿಸುವುದು. ಹಳ್ಳಿಗಳಲ್ಲೇ ಉಳಿಯುವಂತೆ ಪ್ರಚೋದಿಸುವುದು. ನಗರಗಳನ್ನೇ ಹಳ್ಳಿಗಳತ್ತ ಕರೆಸಿಕೊಳ್ಳುವುದು. ಗುಂಡಿ, ಗುದ್ದರದ ರಸ್ತೆ ಹಾದೂ ಅವಕಾಶಗಳು ಅರಸಿ ಬರುವಂತೆ ಮಾಡುವುದು. ಇದು ಸಾಧ್ಯ. 'ಮಾಯಾರೂಪಿ ಸುಳ್ಳಿಗಿಂತ ಬೆಡಗಿನ ಸತ್ಯವೇ ಸಶಕ್ತ ಹಾಗೂ ಆಕರ್ಷಕ' ಎನ್ನುವು ಅರಿವು ವಿಶ್ವಾಸ ನಮ್ಮದಾದಾಗ .<br /><br />ಈ ಎಲ್ಲ ಆಶಯದೊಂದಿಗೆ ಹೊಮ್ಮಿದ `ನೆಲದಮಾತು'ಗೆ ನನ್ನ ಹಾರ್ದಿಕ ಅಭಿನಂದನೆ. ಗ್ರಾಮೀಣ ಅಂತಃಸತ್ವ ಹೆಚ್ಚಿಸುವಲ್ಲಿ ನೆಲದಮಾತು ಶ್ರಮಿಸಲಿ. ದೇಸಿ ಫಲವಂತಿಕೆಗೆ ಕಂಕಣ ಕಟ್ಟಲಿ.nataraju vhttp://www.blogger.com/profile/10918535028693209943noreply@blogger.com0tag:blogger.com,1999:blog-8437289649338017610.post-68870471829543225862009-10-09T11:39:00.000-07:002009-10-09T11:40:06.580-07:00ನಾಸ್ಟಾಲಜಿಕ್ ಎಂದರೆ...ಎಲ್ಲೋ ಬಹಳ ದೂರ ಉಳಿದಿರುತ್ತವೆ ಹಳೆ ದಿನಗಳು. ಆದರೂ ಆಗಾಗ್ಗೆ ಧಿಗ್ಗನೆ ತಾಜಾ ಗೊಳ್ಳುತ್ತವೆ. ಒಂಥರಾ ತೋಟದಲ್ಲಿ ಹೂತಿಟ್ಟ ಹುಳಿ ಮಾಗಿದ ಹಳೆ ವೈನ್ ಬಾಟಲಿಯಂತೆ. ಹಳೆಯ ಗೆಳೆಯರ ಎದುರು ನೆನಪಿನ ಔತಣ ಕೂಟದಲ್ಲಿ ಧಿಗ್ಗನೆ ಪ್ರತ್ಯಕ್ಷವಾಗುತ್ತವೆ. ಹೊಸ ಗ್ಲಾಸಿನಲ್ಲಿ ಹೊಸ ರೂಪದೊಂದಿಗೆ.<br />ಘಮಿಸುವ ನಗು ಒಗ್ಗರಣೆ, ಹದವಾಗಿ ಹುರಿದ ಸ್ವಮರುಕ, ಆತ್ಮ ಪ್ರಶಂಸೆಯ ಸಿಹಿ, ಸ್ವ ಭಂಜಕತೆಯ ಗಂಟಲು ಖಾರ....<br />ಆದರೆ `ನೆನಪಿನ ಗಣಿಯಿಂದ ಅಗೆದದ್ದಾರೂ ಏನು?'..... <br /><br />1.<br />ಬೀಡಾಡಿ ನೆನಪುಗಳೇ ಹೀಗೆ<br />ವೃದ್ಧ ಮಾಂತ್ರಿಕರಂತೆ;<br />ಒಮ್ಮೆಲೇ ಕಲೆಯುತ್ತವೆ<br />ಯಾವುದೋ ಅಭೌತಿಕ ಆವಾಹನೆಯಂತೆ<br /><br />ಬಲು ಸುಲಭ<br />ನವಿರು ನೆನಪಿನ ತೆಕ್ಕೆಗೆ ಜಾರುವುದು<br />ಹಿಡಿ ಹಿಡಿಯಾಗಿ ಜಾರಿ<br />ಕಾಲನ ಕಾಲು ನೇವರಿಸುವುದು<br /><br />ಭಲೇ ರೋಮಾಂಚನವೊಡ್ಡಿ<br />ಬುಗ್ಗೆಯೆದ್ದು ಮೈದುಂಬುವ ನೆನಪಿನ `ಕಥೆ'ಗೆ<br />ಇತಿಹಾಸ ವ್ಯಂಗ್ಯವಾಡುತ್ತದೆ...<br /><br />ನಡೆದದ್ದು,<br />ನಡೆಯಬಯಸಿದ್ದು, <br />ನಡೆಯದೇ ಇದ್ದದ್ದು...<br />ಎಲ್ಲವೂ ಹದವರಿಯುತ್ತವೆ<br />ಹೇಳುವವನ ಭಾವನೆ ಮುಕ್ಕಾಗದಿರೆ<br /><br />2<br />ತುರಿಸಿಕೊಳ್ಳಲು ಹಳೆಯ ಗಾಯ<br />ಹೆಕ್ಕಿದಂತೆ<br />ಹುಡುಕುತ್ತಾನೆ ಮಾದೇಸನ ಪದವಾಡುವವನು,<br />ಎಲ್ಲಮ್ಮನ ಪದ ಹೇಳುವವನು<br />ಹಳೆಯ ಕಲೆಯಲ್ಲಿ ಹೊಸ ಕಥೆ;<br />ಆದರೆ<br />ಭಾವನೆ ಬಿಟ್ಟು<br />ಬರಿದೆ ಇತಿಹಾಸ ಹುಡುಕುವವನಿಗೆ<br />ಗಾಯವೂ ಇಲ್ಲ, ತುರಿಕೆಯೂ ಇಲ್ಲ,<br />ನೆನಪಿನ ಗುರುತು ಮೊದಲೇ ಇಲ್ಲ<br />ರೋಮಾಂಚನವಂತೂ<br />ಇಲ್ಲವೇ ಇಲ್ಲnataraju vhttp://www.blogger.com/profile/10918535028693209943noreply@blogger.com0tag:blogger.com,1999:blog-8437289649338017610.post-55055015109259379182009-09-24T11:40:00.000-07:002009-09-25T02:36:26.859-07:00ಎಲ್ಲೆಲ್ಲೂ ಡಾ.ಫೌಸ್ಟ್ಗಳೇ....1.<br />ಅವರು ಎದ್ದು ಹೋದರೂ ಆ ಕಾಫಿ ಟೇಬಲ್ಲಿನ ಮೇಲೆ ನೆನಪುಗಳು ಹಾಗೇ ಕುಳಿತಿದ್ದವು. ಕ್ಷಣ ಹೊತ್ತು ಹಿಂದೆ ಅದೇ ಟೇಬಲ್ಲಿನಲ್ಲಿ ಬಿಸಿ ಬಿಸಿಯಾಗಿ ಹಬೆಯಾಡಿದ್ದ `ಕೆಫೆ ಲಟೆ'ಯ ಅರೋಮಾ ಸಹ ಆರಿರಲಿಲ್ಲ....<br />ಒಂದೆರಡು ತಿಂಗಳ ಹಿಂದಿನ ಮಾತು. ಖಾಲಿ ಹೊಡೆಯುತ್ತಿದ್ದ ಆ ಮಧ್ಯಾಹ್ನದ ಆಗಸದಿ ಒಂದು ಸಣ್ಣ ಗೀಚೂ ಇರಲಿಲ್ಲ. ಒಂದಿಷ್ಟು ನೀಲಿ, ಒಂದಷ್ಟು ಬಿಳುಪು ಬಿಟ್ಟರೆ ಆಗಸದ ಬಳಿ ಇದ್ದದ್ದು ಬರೀ ಆಕಳಿಕೆ. ಅದು ವೀಕ್ ಡೇ, ಮಧ್ಯಾಹ್ನ ಬೇರೆ. ಹಾಗಾಗಿ ಗಿಜಿಗಿಜಿಯಿಂದ ದೂರಿತ್ತು ಆ ಕಾಫೀ ಡೇ. ಒಂದು ಉದ್ದನೆಯ ಮಧ್ಯಾಹ್ನ ಕಳೆಯಲು ಪ್ರಶಸ್ತ ಸ್ಥಳ ಎನ್ನುವಂತೆ.<br />ಒಳಗೆ ಎಸಿಯಲ್ಲಿ ಕೂರಲು ಮನಸಾಗದೆ ಆತ ಅಂಗಣದಲ್ಲಿನ ಟೇಬಲ್ಗಳತ್ತ ಹೆಜ್ಜೆ ಹಾಕಿದ. ಎಂಟು ಹತ್ತು ಟೇಬಲ್ಗಳಿದ್ದ ಜಾಗ. `ನಾನೇ ನಾನು, ತಲೆ ಎತ್ತಿದ್ದರೆ ಬಾನೇ ಬಾನು' ಎನ್ನುವ ಸ್ವಗತ. ಖಾಲಿ ತನವನ್ನಾದರೂ ಪರಿಪೂರ್ಣವಾಗಿ ಮನದೊಳಗೆ ಸುರಿದುಕೊಳ್ಳೋಣ ಎಂದು ಹಿತವೆನಿಸಿದ ಟೇಬಲ್ ಬಳಿ ಕುಳಿತ.<br />ಅದೆಷ್ಟೇ ಸುದೀರ್ಘ ಮಧ್ಯಾಹ್ನವಾದರೂ ಸಂಜೆಯ ಹೊತ್ತಿಗೆ ಸಾಯುವುದೇ. ಹಾಗಾಗಿ ಅದಕ್ಕೂ ಮುನ್ನ ನಿಮಿಷ ನಿಮಿಷವೂ ಅದರ ಖಾಲಿತನವ ಕೈದು ಮಾಡಬೇಕು ಎನ್ನುವ ಹಂಬಲ. ಮೆನು ಹಿಡಿದು ಬಂದ ಹುಡುಗನಿಗೆ ಆರ್ಡರ್ ನೀಡಿ ಅರ್ಧ ಗಂಟೆ ಬಿಟ್ಟು ತರುವಂತೆ ಕೋರಿಕೆ ಸಲ್ಲಿಕೆ. ಮೊಬೈಲ್ ಅಂತೂ ತಾನಾಗೇ ಸುಮ್ಮನಿತ್ತು.<br />ಟ್ರಾಫಿಕ್ ಸದ್ದಿನ ಮೇಲೆ ಒಂದಷ್ಟು ಹೊತ್ತು ತುಸು ಗಮನವಿಟ್ಟ, ಹೆಚ್ಚಲ್ಲ ತುಸುವೇ. ಹೆಚ್ಚು ಗಮನವಿಟ್ಟರೆ ಅಲ್ಲಿಂದ ಎದ್ದು ಹೋಗದೆ ವಿಧಿ ಇಲ್ಲ. ಕ್ಷಣ ಕಾಲ ಟ್ರಾಫಿಕ್ನ `ಶಬ್ದಸಿರಿ', ಆಟೋಗಳ ಡರ್ರ್ರ್ ಬುರ್ರ್ರ್ `ಲಾಲಿತ್ಯ' ಕೇಳಿ ಕಿವಿಗಳೂ ಸುಮ್ಮನಾದವು. ಆ ಖಾಲಿತನದಲ್ಲಿ ಒಂದಿಪ್ಪತ್ತು ನಿಮಿಷ ಕಳೆದಿರಬಹುದು.<br />ಆತನಿದ್ದ ಟೇಬಲ್ನಿಂದ ಎರಡು ಟೇಬಲ್ ಆಚೆಗಿನ ಕುರ್ಚಿಗಳಿಗೆ ಮೂವರು ಬಂದು ಕುಳಿತರು. ಒಂದಷ್ಟು ಹೊತ್ತು ಅದೂ ಇದೂ ಮಾತು ಸಾಗಿತ್ತು. ಅಲ್ಲಿಗೆ ಇವನ ಖಾಲಿತನಕ್ಕೂ ಭಂಗ ಬಂತು. ಹಾಗೇ ಅಡ್ಡಾದಿಡ್ಡ ಸಾಗಿದ್ದ ಅವರ ಮಾತಿಗೆ ಲಹರಿ ಸಿಕ್ಕಿತೇನೋ, ಇದಕ್ಕಿದ್ದಂತೆ ಓಘ, ದನಿ ಎರಡೂ ಜೋರಾಯಿತು. ಪಕ್ಕದಲ್ಲೇ ಕುಳಿತು ಮಾತಾಡುತ್ತಿದ್ದಾರೇನೋ ಎನ್ನುವಷ್ಟು ಸ್ಪಷ್ಟ. ಸುಮಾರು 30 ರಿಂದ 35 ವಯೋಮಾನದವರು.<br />ಬೇಸರದ ದನಿಯೊಂದು ಹೊಮ್ಮಿತು, `ಇಟ್ಸ್ ಎ ಟ್ರ್ಯಾಷ್, ಟು ಲಿವ್ ಈಸ್ ಟು ಲೂಸ್, ಟು ಲೀವ್ ಇಸ್ ಟು ಪ್ಲೆಡ್ಜ್ ಯುವರ್ ಸೆಲ್ಫ್' . ದನಿಯಲ್ಲಿ ಇದ್ದ ಖಚಿತತೆ ಸಹಜವಾಗಿಯೇ ಕಿವಿಗಳಿಗೆ ಕುತೂಹಲಕಾರಿ ಎನಿಸಿತು.<br />`ವೆನ್ ಐ ಜಾಯಿನ್ಡ್ ದ ಕಂಪೆನಿ ಐ ವಾಸ್ ವೆರಿ ಪ್ರೌಡ್ ಟು ಸೇ ದ ಕಂಪೆನೀಸ್ ನೇಮ್ ಬಿಸೈಡ್ ಮೈ ನೇಮ್'. ಎಲ್ಲಾದ್ರೂ ನನ್ನನ್ನು ಇಂಟ್ರಡ್ಯೂಸ್ ಮಾಡ್ಕೊಳ್ಳೋವಾಗ ನನ್ನ ಹೆಸರು ಹೇಳಿ, ನನ್ನ ಕೆಲಸ ಹಾಗೂ ಕಂಪೆನಿ ಹೆಸರನ್ನು ಖುಷಿಯಿಂದ ಜೊತೆ ಜೊತೆಗೇ ಹೇಳಿಕೊಳ್ಳುತ್ತಿದ್ದೆ'. ಆದರೆ ಈಗ ಲೈಫ್ ಇಷ್ಟೇ ಆಗೋಯ್ತಲ್ಲ ಅನ್ಸುತ್ತೆ. `ಬ್ಲಡಿ, ಆಮ್ ಜಸ್ಟ್ ರೆಡ್ಯೂಸ್ಡ್ ಟು ಎ ಪ್ರೊಫೆಷನ್'. ಆಮ್ ನೋ ಮ್ಯಾನ್, ಜಸ್ಟ್ ಎ ಪ್ರೊಫೆಷನ್, ಆಮ್ ನೋ ಇಂಡಿವಿಜುಅಲ್, ಎ ಪ್ರೊಫೆಷನಲ್ ಇನ್ ಎ ಸೋ ಅಂಡ್ ಸೋ ಕಂಪೆನಿ' ಎಂದ.<br />ಅಲ್ಲಿಗೆ ಮತ್ತೊಂದು ವಾಸ್ತವ ಅವರ ಮುಂದಿತ್ತು. ಮತ್ತೊಂದು ಹುಡುಕಾಟ ಅವರಲ್ಲಿನ್ನೂ ಉಳಿದಿದ್ದ, ಸ್ವಂತದ್ದೆಂದು ಹೇಳಿಕೊಳ್ಳಬಹುದಾದ ಅಷ್ಟೋ ಇಷ್ಟೋ, ಚೂರು ಪಾರು ಆತ್ಮವನ್ನು ಕೆಣಕುತ್ತಿತ್ತು.<br />ಇಪ್ಪತ್ತರ ಆದಿಯಲ್ಲಿ ಕೆಲಸದ ಹುಡುಕಾಟ, ಮೂವತ್ತರ ಆದಿಯಲ್ಲಿ ಕೆಲಸದಲ್ಲಿ ಕಳೆದುಹೋದ ತನ್ನದೇ ವ್ಯಕ್ತಿತ್ವ, ಪ್ರತಿಭೆ, ಅಂತಃಸತ್ವದ ಹುಡುಕಾಟ. ದುಡಿಮೆಗಾಗಿ ವ್ಯಕ್ತಿಗಳು ವೃತ್ತಿಗಳಾಗುತ್ತಾರೆ. ಕಂಪೆನಿಗಳ ಭಾಗವಾಗುತ್ತಾರೆ. `ಬ್ರ್ಯಾಂಡ್ ನೇಮ್' ಭ್ರಮೆಯ ಗುಲಾಮರಾಗುತ್ತಾರೆ. ಕೆಲವರದು ತುಂಬು ಜೇಬಿನ ಸಂಬಳ ಮತ್ತೆ ಕೆಲವರದು ಎಂದೂ ತುಂಬದ ತೂತು ಜೇಬಿನ ಸಂಬಳ.<br />ಒಬ್ಬ ವ್ಯಕ್ತಿ ತನ್ನ ಜೀವನದ ಅದೆಷ್ಟೋ ವರ್ಷಗಳನ್ನೇ ಕಂಪೆನಿಯೊಂದರ ಪಗಾರಕ್ಕೆ ಮಾರಿಕೊಂಡು ಬಿಡುವುದು `ಆಧುನಿಕ ಸೋಜಿಗ'. ತಿಂಗಳ ಕೊನೆಯ ಸಂಬಳಕ್ಕಾಗಿ ವೈಯಕ್ತಿಕವಾಗಿ ತನಗೆ ಯಾವತ್ತೂ ಸಂಬಂಧಪಡದ ಕೆಲಸ ಮಾಡಿಕೊಂಡಿರುವುದು ಮತ್ತೂ ಸೋಜಿಗ.<br />2.<br />ಅಲ್ಲಿ ಕಂಪನೆಯಲ್ಲಿ ಕೆಳಗೆ, ಕೊನೆ ಸಾಲಿನಲ್ಲಿ ಕುಳಿತಿರುವವನು ಕೇಳುತ್ತಾನೆ, `ಕಂಪೆನಿ ಅಂದ್ರೆ ಯಾರು?'... ಅವನ ಮೇಲಿನವ ತನ್ನ ಮೇಲೆ ಬೆರಳು ಮಾಡಿ ಹೇಳುತ್ತಾನೆ `ಕಂಪೆನಿ, ಕಾರ್ಪೊರೆಟ್, ಸರ್ಕಾರ ಎಂದರೆ ಯಾವತ್ತೂ ಮೇಲೆ, ಮೇಲೆ.... ಮೇಲೆ ಅಲ್ಲಿರುತ್ತದೆ'.<br />ಕಡೆಗೊಮ್ಮೆ ರಿಟೈರ್ ಆಗುವ ಮುನ್ನಾದಿನ ಕೆಳಗಿದ್ದವನು ಹೇಗೋ ಒಂದು ಅವಕಾಶ ಸಂಪಾದಿಸಿ ತುದಿಯಲ್ಲಿದ್ದವನನ್ನು ಕೇಳುತ್ತಾನೆ,<br />`ಸಾರ್, ಕಂಪೆನಿ ಅಂದರೆ ಯಾರು, ನೀವೇನಾ?'<br />`ನಾವೆಲ್ಲಾ.... ನಾವೆಲ್ಲಾ ಕಂಪೆನಿ' ಉತ್ತರಿಸುತ್ತಾನೆ ಅವನು.<br />`ನಾನೂ ಸಹ'<br />`ಹೌದು, ನೀನು, ನಾನು ಎಲ್ಲರೂ ಕಂಪೆನಿಯೇ....'<br />`ನನಗೆ ಗೊತ್ತೇ ಇರಲಿಲ್ಲ ಸರ್.. ನಾನೂ ಕಂಪೆನಿ ಅಂಥ. ಐ ಥಾಟ್ ಅಮ್ ಎನ್ ಎಂಪ್ಲಾಯೀ, ಐ ಆಮ್ ಅನ್ ಇಂಡಿವಿಜುಅಲ್'<br />`ಡೋಂಟ್ ಕಾಂಟ್ರಡಿಕ್ಟ್ ಯುವರ್ ಸೆಲ್ಫ್... ಯು ಕಾಂಟ್ ಬಿ ಅನ್ ಎಂಪ್ಲಾಯೀ ಅಂಡ್ ಅನ್ ಇಂಡಿವಿಜುಅಲ್ ಅಟ್ ದ ಸೇಮ್ ಟೈಮ್'<br />ಅವನ ಮಾತಿನ ಅರ್ಥ ಕೆಳಗಿನವಿಗೆ ಆಗಲಿಲ್ಲ, ಆದರೂ ಅವನ ಬಳಿ ಇನ್ನೊಂದಷ್ಟು ಪ್ರಶ್ನೆಗಳಿದ್ದವು ಕೇಳಿಯೇ ಬಿಟ್ಟ,<br />`ಸಾರ್, ವಾಟ್ ಈಸ್ ದ ಕೋರ್ ಆಫ್ ಕಂಪೆನಿ, ವಾಟ್ ಈಸ್ ಇಟ್ಸ್ ಪಾಲಿಸಿ'<br />`ಬೈ ಸಂ ಮ್ಯಾನ್ ಅವರ್ಸ್ ( ನಾಟ್ ಮೆನ್), ಗುಡ್ ಪ್ರೊಡಕ್ಟಿವ್ ಮ್ಯಾನ್ ಅವರ್ಸ್. ಟರ್ನ್ ಇಟ್ ಟು ಗೂಡ್ಸ್, ಪ್ರಾಡಕ್ಟ್ಸ್ ಆರ್ ಪ್ರಾಜೆಕ್ಟ್ಸ್. ದೆನ್ ಸೆಲ್ ದೆಮ್ ಇನ್ ದ ನೇಮ್ ಆಫ್ ಸರ್ವೀಸಸ್ ಆರ್ ಎಸೆನ್ಷಿಯಾಲಿಟೀಸ್. ಗ್ಯಾದರ್ ಮನಿ ಅಂಡ್ ಪವರ್'<br />ಇವನಿಗೆ ಏನೂ ಅರ್ಥ ಆಗಲಿಲ್ಲ. ಆದರೆ ಇಷ್ಟು ವರ್ಷ ಕೆಳಲೇ ಬೇಕೆಂದು ಚೀಟಿಯಲ್ಲಿ ಬರೆದುಕೊಂಡಿದ್ದ ಪ್ರಶ್ನೆಗಳಲ್ಲೇ ಮತ್ತೊಂದನ್ನು ಹುಡುಕಿ ಕೇಳಿದ.<br />`ಸರ್, ವಾಟ್ ಡು ಕಂಪೆನೀಸ್ ಹೇಟ್`<br />`ಇಂಡಿವಿಜುಅಲ್ಸ್, ಇಂಡಿವಿಜುಆಲಿಟಿ'<br />ಬಿಲ್ಕುಲ್ ಅರ್ಥ ಆಗಲಿಲ್ಲ. ಕಡೆಗೆ ಹೇಳಿದ,<br />`ಥ್ಯಾಂಕ್ಯು ಸರ್, ಥ್ಯಾಂಕ್ಯು ವೆರಿ ಮಚ್. ಸಾರ್, ಒಂದು ರಿಕ್ವೆಸ್ಟ್. ನನ್ ಮಗ ಈ ಸಾರಿ ಫೈನಲಿಯರ್ ಡಿಗ್ರೀಲಿ ಇದಾನೆ. ಇಂಟೆಲಿಜೆಂಟ್. ಅವನಿಗೂ ಇದೇ ಕಂಪೆನೀಲೇ ಒಂದು ಕೆಲಸ ಕೊಟ್ಟರೆ ಐ ವಿಲ್ ಬಿ ಗ್ರೇಟ್ಫುಲ್ ಟು ಯು ಸರ್'.<br /><br />..................<br />ಡಾ.ಫೌಸ್ಟಸ್ ಕಥೆ ಬಹುತೇಕರಿಗೆ ತಿಳಿದದ್ದೇ. ಮಹಾನ್ ವಿದ್ವಾಂಸ, ಮಹತ್ವಾಕಾಂಕ್ಷಿ ಫೌಸ್ಟ್ ಅಸೀಮ ಶಕ್ತಿಯ ಆಸೆಗೆ ಬಿದ್ದು ತನ್ನ ಆತ್ಮವನ್ನೇ ಸೈತಾನನಿಗೆ ಮಾರಿಕೊಳ್ಳುತ್ತಾನೆ. ಬದಲಿಗೆ ಸೈತಾನನಿಂದ ಆತನ ಎಲ್ಲ ಶಕ್ತಿಗಳನ್ನೂ ಕೆಲ ವರ್ಷಗಳ ಕಾಲ ಕರಾರಿನ ಮೇಲೆ ಪಡೆಯುತ್ತಾನೆ. ಕಡೆಗೆ ಆತ್ಮ ನಾಶ ಹೊಂದಿ ಸೈತಾನನ ಸ್ವತ್ತಾಗುತ್ತಾನೆ. ಫೌಸ್ಟ್ನ ಆತ್ಮನಾಶ ಆಧುನಿಕ ಮನುಷ್ಯನ ವ್ಯಕ್ತಿತ್ವ ವಿನಾಶ ಎರಡೂ ಆಜೂಬಾಜಿನವೇ....nataraju vhttp://www.blogger.com/profile/10918535028693209943noreply@blogger.com0tag:blogger.com,1999:blog-8437289649338017610.post-12650414925344805372009-09-15T10:49:00.000-07:002009-09-15T10:52:22.619-07:00ಎರಡೂ ಮುಕ್ಕಾಲು ಪ್ರತಿಮೆಬದುಕು ದಕ್ಕದ ಅಕ್ಷರ ಮೋಹಿ ಕವಿ(!)ಗೆ<br />ಅಕಸ್ಮಾತ್<br />ಮಲ್ಲೇಶ್ವರದ ಹೂ ಮಾರುಕಟ್ಟೆ ಬಳಿ ಎರಡೂ ಮುಕ್ಕಾಲು ಪ್ರತಿಮೆ ದಕ್ಕಿತು;<br />ಎರಡು ಪೂರ್ಣ ಹಾಗು ಒಂದು ಮುಕ್ಕು.<br /><br />ಪ್ರತಿಮೆ,<br />ಕವಿ ಸಮಯದ - ಕಲಾವಿದ ಮನದ ಮೂಸೆಯೊಳಗಣ ದೀಪ್ತಿ;<br />ಆಕಾರಗಳಿಲ್ಲದ್ದು,<br />ಭಾವ ಅಕ್ಷರಗಳ ಅಮೂರ್ತ ಬೆಡಗು.<br /><br />ಏನು ಮಾಡುವುದು ಇವನ್ನು<br />ಒಂದಷ್ಟು ಹೊತ್ತು ಹೊರಳಿಸಿ, ತಿರುಗಿಸಿ ನೋಡಿದ<br />ಕಡೆಗೆ<br />ಕವಿಯೊಬ್ಬನ `ಆತ್ಮಘಾತುಕ' ನಿರ್ಧಾರ ಕೈಗೊಂಡ<br />`ಈ ಎರಡೂ ಮುಕ್ಕಾಲು ಪ್ರತಿಮೆಯನು ಕೊಟ್ಟು ಬಿಡುವೆ '...<br /><br />ಯಾರಿಗೆ ಕೊಡುವುದು,<br />ವ್ಯಾಸನಿಗೋ, ಹೋಮರನಿಗೋ?<br />ಶೇಕ್ಸಪಿಯರ್, ಕಾಳಿದಾಸರಿಗೆ..!<br />ಬೇಂದ್ರೆ, ಯೇಟ್ಸ್, ಇಲಿಯಟ್, ನೀಲುಗೆ...<br /><br />ಇಲ್ಲಾ,<br />ಪ್ರತಿಮಾ ಬೆಡಗಲಿ ಅನುಭಾವ ಸಾಂದ್ರಗೊಳಿಸಿದ ಅಲ್ಲಮನಿಗೆ,<br />ಅಲ್ಲಾ - ಮಾ ಗಹಗಹಿಸಿದರೆ?....<br />ಧೈರ್ಯ ಸಾಲದ ಮೇಲೆ<br />ಗಿರಿ ಏರುವುದೇ ಒಳಿತು.<br /><br />ಹೌದು ,<br />ಅಲ್ಲಿ ದತ್ತನ ಮುಂದೆ ಮಂಡಿಯೂರಿ<br />ಅವನ ಉಡಿಗೆ ಒಪ್ಪಿಸಿಬಿಡುವೆ....<br /><br />ಅದೇಕೋ,<br />ಹಾಗೆಂದುಕೊಂಡವಗೆ ಬದುಕ ಜಂಜಡ<br />ನೆನಪ ಮಾಸಿತು<br />ನಿರ್ಧಾರ ಕಂದರವಾಯಿತು<br /><br />ದಿನ ಸರಿಯಿತು,<br />ನೇಸರ ಅದೆಷ್ಟೋ ಬಾರಿ<br />ಶಿವ ಸಾಮ್ರಾಜ್ಯದಿ ಮುಳುಗಿ ಮೇಲೆದ್ದ;<br /><br />ಮುಂದೆಂದೋ<br />ನೆನಪಿನ ಕಪಾಟಲಿ ಅನೂಹ್ಯ ಸದ್ದು<br />ಮತ್ತೆ, ಮತ್ತೆ <br />ಎರಡೂ ಮುಕ್ಕಾಲು ಪ್ರತಿಮೆ;<br />ಹೊರಟೇ ಬಿಟ್ಟ ನೇರ ಗಿರಿಗೆ...<br /><br />ಅದು ಸೂರ್ಯಾಸ್ತ<br />ಅವ್ಯಕ್ತ ಕಂಗಳ ಕಲಾವಿದನೊಬ್ಬ<br />ಗಿರಿ ಮೇಲೆ ಕ್ಯಾನ್ವಾಸ್ ಹರಡಿ<br />ಖಾಲಿ ಕುಳಿತಿದ್ದ<br />ಎಲ್ಲ ದಕ್ಕಿದ ನಂತರವೂ `ವ್ಯಾಳಾ' ಕಾಯೋ<br />ಸಂಗೀತಗಾರನಂತೆ...<br /><br />ದತ್ತನ ಉಡಿಗೆ ಹಾಕೋ ಮನಸಲಿ<br />ಮಿಂಚು<br />ದತ್ತನೇ ದೀಪ್ತಿ ಎಂದು ನೇರ ಖಾಲಿ ಕ್ಯಾನ್ವಾಸ್ನತ್ತ<br />ಸರಿಯಿತು ಹೆಜ್ಜೆ<br /><br />`ಹಿಡಿ ಅಂಗೈ,<br />ತಗೋ ಈ ಎರಡೂ ಮುಕ್ಕಾಲು ಪ್ರತಿಮೆ<br />ನನ್ನ ಭವದ ಅಷ್ಟೂ ದುಡಿಮೆ'<br />ಕ್ಷಣ ಕಾಲ ಮೌನ.....<br />ಅಶ್ರುವಿನಲಿ ಮಿಂದು ಅವನೆಂದ<br />`ಮೂರೂ ಮುಕ್ಕಾಲು'<br /><br />ಕಿವಿ ಮೋಸ ಹೋದವೇ?<br />ಮತ್ತೆ ಇವನೆಂದ `ಎರಡೂ ಮುಕ್ಕಾಲು`<br />ನಿಮ್ಮ ಬಳಿ ಎರಡೂ ಮುಕ್ಕಾಲು<br />ಆದರೆ<br />ನನ್ನೆದುರಿಗೆ `ಮೂರು ಮುಕ್ಕಾಲು'....<br /><br />ಎರಡು ಜೋಡಿ ಕಂಗಳಲ್ಲೂ ಧನ್ಯಾಶ್ರು....<br /><br />ಅಲ್ಲೇ ದೂರದಲಿ<br />ಗುಡುಗುಡಿಯಾಗ ತೇಲಿದ್ದ ಫಕೀರ<br />ಬೆಳಕಿನ ನಗೆ ನಕ್ಕnataraju vhttp://www.blogger.com/profile/10918535028693209943noreply@blogger.com0tag:blogger.com,1999:blog-8437289649338017610.post-24356800159024126062009-09-13T11:02:00.001-07:002009-09-13T11:02:38.788-07:00ನೆನಪಿನ ಹಾದಿಯಲಿ ಭಾಳಾನೇ ಟ್ರಾಫಿಕ್ಕು....ಹಾಗೇ ಸಾಗುವ ಬೇಜಾರಿನ ಟಾರು ರಸ್ತೆಯ ಮೇಲೆ<br />ಎಂತೆಂತದೋ ಚಿತ್ತಾರಗಳು....<br />ಅವೇನು ನೆರಳೆ?<br />ನೆತ್ತಿ ಹೊರಳಿಸಿದರೆ ಕೊಡೆಯಂತಾ ಮರಗಳ ಸಾಲು ಸಾಲು<br />ಹಾಗಾಗಿ `ರಸ್ತೆಗೆ ಬಿದ್ದರೂ' ಮರದ ನೆರಳೆಂಬ ಘನತೆ<br />ಆದರೆ ಅಲ್ಲಿ ಮತ್ತೂ ಹಲವಿವೆ,<br />ಚಿತ್ತಾರದಂತವು...<br />ಏನೆನ್ನಬಹುದು ಅವನ್ನು,<br />ಎಂತದೋ ನರಳಿಕೆ, ನಲಿವು, ನೋವು, ಖುಷಿ<br />ಹೀಗೆ ಹತ್ತು ಹಲವು....<br />ಅವೆಲ್ಲಾ, ಅಲ್ಲೇ ಹಾಗೇ<br />ಅಜ್ಞಾತ ಹಾದಿಯಲಿ ತಡಬಡಾಯಿಸುತ್ತಾ<br />ನೆನಪುಗಳ ಟ್ರಾಫಿಕ್ಕಿನಲಿ ಸಾಲಾಗುತ್ತಾ<br />ಸಿಗ್ನಲ್ನಲ್ಲಿ ಆಕಳಿಸುತ್ತವೆ...<br />ಎಲ್ಲಿಂದಲೋ ಗುಳೆ ಬಂದವರ<br />ಕಣ್ಣಲ್ಲಿ ಹೊಲ ಬೇಡುತ್ತವೆ,<br />ರಸ್ತೆ ಬದಿಯಲಿ ಟೀ ಅಂಗಡಿ ಇಟ್ಟವನಲ್ಲಿ<br />ಎಂತದೋ ವಿಳಾಸ ಕೇಳುತ್ತವೆ;<br />ಕಡೆಗೂ ಏನೂ ದಕ್ಕದೆ<br />ಬಿಡು ಬೀಸು ರಸ್ತೆಯ ಸಲೀಸು ಎಂದು <br />ಅಲ್ಲಿಯೇ ಉಳಿದು ಬಿಡುತ್ತವೆ<br />ಅದಕ್ಕೇ ಇತ್ತೀಚೆಗೆ ನೆನಪಿನ ಹಾದಿಯಲಿ ಭಾಳಾನೇ ಟ್ರಾಫಿಕ್ಕು....nataraju vhttp://www.blogger.com/profile/10918535028693209943noreply@blogger.com0tag:blogger.com,1999:blog-8437289649338017610.post-57549527437260274932009-09-11T08:23:00.000-07:002009-09-13T10:22:12.554-07:00ಹನಿ ಮಳೆ ಮತ್ತು ದಡ್ಡ....ಅಷ್ಟು ಹೊತ್ತು ಸುರಿದ ಮಾತುಗಳು ಆಗಷ್ಟೇ ಸ್ತಬ್ಧ. ಸಣ್ಣದೊಂದು ಮೌನ... ಆ ಮೌನ ಮಾಗುವ ಮುನ್ನವೇ ನನ್ನ ಸರದಿ ಎಂದು ಆಗಸ ಶುರುವಿಟ್ಟಿತು.<br />ಹನಿ ಹನಿ ಮಳೆ... ಜೋರಿಲ್ಲ, ಮೈ ಮೇಲೆ ಬಿದ್ದರೂ ನೆಲಕ್ಕೆ ಜಾರಲೇಬೇಕು ಎನ್ನುವ ತವಕವಿಲ್ಲ. ಮಾನವ ದೇಹದ ಮೇಲೂ ಇಂಗಲು ಸಾಧ್ಯವೇ ಎಂದು ಕ್ಷಣ ಹೊತ್ತು ಪ್ರಯತ್ನಿಸಿ, ನವೆದು ಕಡೆಗೆ ಏನನ್ನೂ ದಕ್ಕಿಸಿಕೊಳ್ಳದ `ದರಿದ್ರ' ಈ ಮಾನವ ಚರ್ಮ ಎಂದು ಭೂಮಿಯ ಮೇಲೊದಿಕೆಗೆ ಜಾರುತ್ತಿತ್ತು. ಬಿದ್ದಲ್ಲೇ ಮಣ್ಣ ಕಣಕಣವ ಮುದಗೊಳಿಸಿ ಮೆದುವಾಗಿ ಹಬ್ಬುತ್ತಿತ್ತು.<br />ಅದೇಕೋ ಆ ಹನಿ ಮಳೆಯಲಿ ನೆನೆದು ಮನೆಗೆ ಮರಳಿದರೂ ಮನದ ಮಳೆ ನಿಲ್ಲಲಿಲ್ಲ. ಕೆಲ ದಿನ ಕಳೆದ ಮೇಲೆ ಮತ್ತೊಂದು ಮಳೆಯಲ್ಲಿ ಮತ್ತದೇ ತವಕ, ತಲ್ಲಣ. ಈ ಮಧ್ಯೆ ಬದುಕ ಪುಟಗಳಲಿ ಮತ್ತಷ್ಟು ಸಾಲು.<br />ಅಪ್ಪಿ ತಪ್ಪಿ ಒಂದು ಹನಿ ಮಳೆಯ ಲೆಕ್ಕ ಹಿಡಿಯಲು ಹೊರಟರೂ ದಿಕ್ಕು ತಪ್ಪುತ್ತೇವೆ! ಹೇಗೆ ಅಂತೀರಾ... ಹನಿಯಾಗಿ ಅರಳಿ ನೆಲದಲಿ ಇಳಿವ ಮಳೆಯ ಸಾರ್ಥಕತೆ ಎಲ್ಲಿದೆ ಎಂದು ಪ್ರಶ್ನೆ ಹೊತ್ತು ಹೊರಟರೆ ಅಲ್ಲಿಗೆ ಮತ್ತೊಂದು ಸೋಲು ಮೈ ಮೇಲೆ ಮುಗಿ ಬೀಳುತ್ತದೆ. ಆ ಪ್ರಶ್ನೆಗೆ ಸಾವಿರ ಸಾವಿರ ಉತ್ತರ ಹೇಳಬಹುದು.<br />`ಗರಿಕೆಯ ನೇವರಿಸಿ ಹಸಿರ ತಾಜಾಗೊಳಿಸುವಲ್ಲಿ ಇದೆ ಹನಿಯ ಸಾರ್ಥಕತೆ' ಎಂದರೆ ಇಲ್ಲಾ ಎನ್ನಲಾದೀತಾ? ಬಿತ್ತ ಬೀಜಕ್ಕೆ ಒಂದಷ್ಟು ತಂಪು ನೀಡಿ ಮಣ್ಣಿನ ಸತ್ವ ಬಸಿದು ಮೊಳಕೆ ಒಡೆಸುವಲ್ಲಿ ಅದರ ಸಾರ್ಥಕ್ಯ ಎಂದರೆ ಅದ ತಳ್ಳಿಹಾಕಬಹುದಾ... ಗಟಾರದೊಳಗೆ ಬಿದ್ದು ಅಲ್ಲಿನ ವಿಷದ ಸಾಂದ್ರತೆ ತಗ್ಗಿಸುವಲ್ಲಿ, ವಿಷವ ತೊಳೆವಲ್ಲಿ ಎಂದರೆ ಒಪ್ಪದೆ ಇರಲು ಸಾಧ್ಯವಾ....<br />ಅದೇನೇ ಇರಲಿ, ಇಷ್ಟಾಗೂ ಹನಿ ಮಳೆಯ ಸಾರ್ಥಕತೆ ಇರುವುದೇ elusivenessನಲ್ಲಿ ಎನ್ನುವ ಉತ್ತರ ಕಂಡುಕೊಂಡರೆ ಬಹುಶಃ ಅದೇ ಹೆಚ್ಚು ನಿಖರ. ನೆಲಕ್ಕೆ ಬಿದ್ದರೂ ಭೂಮಿಗೆ ಸಂಪೂರ್ಣ ದಕ್ಕದು `ಹನಿ'. ಒಂದಷ್ಟು ತಂಪು ತುಂಬಿ, ಮಣ್ಣ ಕಣದ ಬಿಗುವ ಸಡಿಲಿಸಿ ಮತ್ತಾವುದೋ ಬೀಜದಲ್ಲಿ ಸ್ವಲ್ಪ ಭಾಗ ಚೈತನ್ಯವಾಗಿ ಉಳಿಯಬಹುದು ಅಷ್ಟೆ. ಆದರೆ ವಾಯುವಿನ ನವಿರು ನೇವರಿಕೆಗೆ ಆ ತಂಪು ರೂಪ ಬದಲಿಸಿರುತ್ತದೆ, ಶೀತಲ ಹವೆಯಾಗುತ್ತದೆ. ಬೆಳಗಿನ ಭಾನು ಬಿಟ್ಟ ಕಿರಣದ ಬಾಣಕ್ಕೆ ಆವಿಯಾಗಿ ಆಗಸಕೇರುತ್ತದೆ. ಹೀಗೆ ಭುವಿಯಲ್ಲಿ, ತಿನ್ನುವ ಬಾಯಲ್ಲಿ, ಬಾನಲ್ಲಿ, ಬೀಸುವ ಗಾಳಿಯಲಿ ಎಲ್ಲೆಲ್ಲಿ ಇಡುವುದು ಹನಿ ಮಳೆಯ ಲೆಕ್ಕ ಅದರ ಜಾಡು....<br />ಹನಿ ಮಳೆಯಂತೆಯೇ `ಅವರ' ಆ ಆಪ್ತ ಮಾತುಗಳು... ನಿರ್ಮಲ ಪೀತಿ ಜಿನುಗಿನಲ್ಲಿ, ಮೋಹವಿರದ ಭರಪೂರ ಕಾಳಜಿಯಲ್ಲಿ ನಾನೆಂಬ ನನ್ನನ್ನು ಕರಗಿಸುವ ಮಾತುಗಳು. ಮತ್ತೆ ಮತ್ತೆ ಅದೇ ತೊಡರಿನೊಂದಿಗೆ, ಭಾವನೆಗಳ ತಲ್ಲಣದಲಿ ಬೆಂದು ಕಡೆಗೆ ಸೋತು `ಅವರ' ಮುಂದೆ ನಿಲ್ಲುತ್ತೇನೆ. ಆಗ ತಂಪು ಸುರಿಯುತ್ತಾ ತಣ್ಣಗೆ ಹೇಳುತ್ತಾರೆ. ಪ್ರವಾದಿ ಗುಣವೇ ಇರದ ಸಂತನಂತೆ ನಿರ್ಲಿಪ್ತವಾಗಿ ಮಾತಾಗುತ್ತಾರೆ. ಆ ಮಾತುಗಳಲ್ಲಿ ಹನಿ ಮಳೆಯ ಆಳದ ಶೀತಲತೆ. ಅವುಗಳ ತೂಕಕ್ಕೆ ಮನದ ಆಗಸದಿ ಕಟ್ಟಿ ಮೈಯಲ್ಲಿ ದಟ್ಟೈಸಿದ್ದ ಉತ್ಕಟ ಭಾವನೆಗಳ ಮೋಡ ಕರಗುತ್ತದೆ. ಹನಿಯಾಗಿ ಸಾಂದ್ರಗೊಳ್ಳುತ್ತದೆ. ನೇರ ಎದೆಯ ಸುಡು ಸುಡು ನೆಲಕ್ಕೆ ಚಿಟಪಟ ಇಳಿಯುತ್ತದೆ.<br />`ನಾನಿರುವಲ್ಲಿ ಖುಷಿ, secure feeling ಇರಬೇಕು. ನಿರೀಕ್ಷೆಯ ಭಾರಗಳಲ್ಲ, ತಹತಹವಂತೂ ಅಲ್ಲವೇ ಅಲ್ಲ. just be with me... ಹಾಗಂದ್ರೆ ತುಂಬಾ ಸುಮ್ನೆ ಇರು ಅಂತಾ. ಯಾವಾಗಲೂ ಉಸಿರಾಡೋ ಹಾಗೆ. ಅದರಲ್ಲಿ ಯಾವುದೇ ವಿಶೇಷ ಅನ್ನಿಸದ ಹಾಗೆ. ಸುಮ್ನೆ, ಸುಮ್ನೆ ಇರಬೇಕು... ನಿರೀಕ್ಷೆ, ಬೇಜಾರು, ಹತಾಶೆ ಯಾವುದೂ ಅಲ್ಲಿ ಬೇಡ. ಉಸಿರಿನ ಹಾಗೆ. ಸಹಜವಾಗಿ ಜೊತೆ ಇರಿ...'<br />ಭಾವನೆಗಳಲಿ ಬೆಂದು, ಅಭಿವ್ಯಕ್ತಿಸಲಾಗದೆ ಸೋತು ನಾನು ಕುದಿವ ಕೆಂಡವಾದಾಗ ಅವರ ಈ ಮಾತುಗಳು ಕೈ ಹಿಡಿಯುತ್ತವೆ. ನಾನು ಪೂಜಿಸುವ, ಆರಾಧಿಸುವ ಹನಿ ಮಾತುಗಳು ಅವು. ಏನೆನ್ನಬಹುದು ಅವುಗಳನ್ನು `ಸಹಜ, ಸುಂದರ, ಸರಳ, ಅನನ್ಯ'...<br />ಆದರೂ ನನಗೆ ಗೊತ್ತು. `ನಾನು ಮತ್ತೆ ಸೂಲುತ್ತೇನೆ'. ಸೋಲುವ ಮುನ್ನ ಮಣ್ಣ ಕಣಕಣವಾಗಿ ಮಳೆ ಹನಿಯಂತೆ ಅವರ ಆ ಮಾತುಗಳ ದಕ್ಕಿಸಿಕೊಳ್ಳಲು ನೋಡುತ್ತೇನೆ, ದಕ್ಕಿಸಿಕೊಂಡರೂ ಬಹಳಷ್ಟು ಜಾರುತ್ತವೆ. ಆ ಮಾತುಗಳ ತಂಪಿನಲಿ ಭಾವನೆಗಳ ಮೊಳಕೆ ಕಟ್ಟಿ ಸತ್ವಯುತವಾಗಲು ಪ್ರಯತ್ನಿಸುತ್ತೇನೆ. ಅದರಲ್ಲಿ ಸಫಲನಾಗುತ್ತೇನೆ ಕೂಡಾ. ಆದರೂ ಮತ್ತೂ ಜಾರುತ್ತವೆ. ಭುವಿಯಾಗಿ, ಬಾನಾಗಿ, ಭಾನುವಿನ ಕಿರಣವಾಗಿ, ಬೀಸುವ ಗಾಳಿಯಾಗಿ ಎಲ್ಲವೂ ಆಗಿ ಒಮ್ಮೆಲೇ ಅವುಗಳ ಹಿಡಿಯಲು ನೋಡುತ್ತೇನೆ. ಮತ್ತೂ ಉಳಿದು ಬಿಡುತ್ತವೆ. ಒಂದು ವೇಳೆ ದಕ್ಕಿದರೂ ಚದುರಿ ಚದುರಿ ದೂರವೇ ನಿಲ್ಲುತ್ತವೆ.... ಜಗತ್ತಿನ ಅತ್ಯಂತ ಸರಳ ಮಾತು ಅವು. ಬರೆದರೆ ಒಂದು ಚಿಕ್ಕ ಪ್ಯಾರಾ ಕೂಡಾ ಆಗುವುದಿಲ್ಲ. ಆದರೂ ಅವುಗಳನ್ನು ನನಗೆ ದಕ್ಕಿಸಿಕೊಳ್ಳಲು ಆಗುವುದಿಲ್ಲ. ನನ್ನೊಳಗೆ ಅವು ಸಂಪೂರ್ಣವಾಗಿ internalize ಆಗುವುದೇ ಇಲ್ಲ.<br />ಹಾಗಾಗೇ, ಮತ್ತೆ ಮತ್ತೆ ಸೋಲುತ್ತಲೇ ಇದ್ದೇನೆ.. ಬಹುಶಃ ಮುಂದೂ ಸಹ. ಮತ್ತದೇ ತಪ್ಪುಗಳೊಂದಿಗೆ ಅವರ ಮುಂದೆ ನಿಲ್ಲಬಾರದು ಎಂದರೂ ಅಷ್ಟೇ ಎಳಸಾಗಿ, ಬಾಲಿಶವಾಗಿ ನಿಂತಿರುತ್ತೇನೆ. ಆಗ ಮತ್ತೊಮ್ಮೆ ಹನಿ ಮಳೆ. ಎಂದೂ ದಕ್ಕದ ಮಾತಿನ ಹನಿ ಹನಿ ಮಳೆ...<br />.<br />.<br />.<br />.<br />.<br /><br />ಏನು ತಾನೆ ಹೇಳಲಿ ಅವರಿಗೆ? ಪದೇ ಪದೇ ಅದೇ ತಪ್ಪು ಮಾಡುವ ಈ ದಡ್ಡನ ಮೇಲೆ ಕ್ಷಮೆ ಇರಲಿ ಎಂದಷ್ಟೇ ಹೇಳಬಹುದುnataraju vhttp://www.blogger.com/profile/10918535028693209943noreply@blogger.com1